Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಿಗ್ ಬಿ, ಧೋನಿ ತಿಳಿಯಿರಿ, ಪತ್ರಕರ್ತರು...

ಬಿಗ್ ಬಿ, ಧೋನಿ ತಿಳಿಯಿರಿ, ಪತ್ರಕರ್ತರು ಚಿಯರ್ ಲೀಡರ್ ಗಳಲ್ಲ !

ಸುನಿಲ್ ಕುಮಾರ್ , ಮಂಗಳೂರುಸುನಿಲ್ ಕುಮಾರ್ , ಮಂಗಳೂರು26 March 2016 9:38 PM IST
share
ಬಿಗ್ ಬಿ, ಧೋನಿ ತಿಳಿಯಿರಿ, ಪತ್ರಕರ್ತರು ಚಿಯರ್ ಲೀಡರ್ ಗಳಲ್ಲ !

ಬಾಂಗ್ಲಾ ವಿರುದ್ಧದ ಬೆಂಗಳೂರು ಪಂದ್ಯವನ್ನು ಗೆದ್ದ ಬಳಿಕ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಶ್ನೆ ಕೇಳಿದ ಪತ್ರಕರ್ತನನ್ನು " ನಿಮಗೆ ಭಾರತ ತಂಡ ಗೆದ್ದಿದ್ದು ಖುಷಿ ತಂದಿಲ್ಲ" ಎಂದು ಹೇಳಿ   ಮಹೇಂದ್ರ ಸಿಂಗ್ ಧೋನಿ ಸುಮ್ಮನಾಗಿಸಿದರು. ಬಾಲಿವುಡ್ ನ ಬಿಗ್ ಬಿ ವೀಕ್ಷಕ ವಿವರಣೆ ನೀಡುವವರು ಭಾರತೀಯ ಆಟಗಾರರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಉಪದೇಶ ನೀಡಿದರು. 

ಧೋನಿಗೆ ಅಂದು ಕೇಳಿದ ಪ್ರಶ್ನೆ : ಈ ಪಂದ್ಯವನ್ನು ದೊಡ್ಡ ಅಂತರದಿಂದ ಗೆದ್ದು ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳುವ ಬಗ್ಗೆ ಮಾತಿತ್ತು. ಆದರೆ ಹಾಗಾಗಿಲ್ಲ. ಬಹುತೇಕ ಸೋಲುವ ಹಂತದಿಂದ ಭಾರತ ಗೆಲ್ಲುವಲ್ಲಿ ಯಶಸ್ಸು ಕಂಡಿದೆ. ಈ ಜಯ ನಿಮಗೆ ಎಷ್ಟು ತೃಪ್ತಿ ತಂದಿದೆ ? 

ಧೋನಿ ನೀಡಿದ ಉತ್ತರ : ಮುಜ್ಹೆ ಪತಾ ಹೈ ಆಪ್ಕೋ ಖುಷಿ ನಹಿ ಹುಯಿ ಹೈ ಕಿ ಇಂಡಿಯಾ ಜೀತ್ ಗಯಾ. ಆಪ್ಕಿ ಆವಾಝ್ ಸೆ , ಆಪ್ಕಿ ಟೋನ್ ಸೆ , ಆಪ್ಕಿ ಸವಾಲ್ ಸೆ ಐಸ ಲಗ್ ರಹಾ ಹೈ ಕಿ ಆಪ್ಕೋ ಖುಷಿ ನಹಿ ಆಯೆ ಕಿ ಇಂಡಿಯಾ ಜೀತ್ ಗಯಾ ಆಜ್ ( ನನಗೆ ಗೊತ್ತಿದೆ. ನಿಮಗೆ ಭಾರತ ಇಂದು ಗೆದ್ದಿರುವುದು ಸಂತಸ ತಂದಿಲ್ಲ. ನಿಮ್ಮ ಧ್ವನಿಯಿಂದ, ನಿಮ್ಮ ಸ್ವರದಿಂದ , ನಿಮ್ಮ ಪ್ರಶ್ನೆಯಿಂದ ನಿಮಗೆ ಇವತ್ತು ಭಾರತ ಗೆದ್ದಿದ್ದು ಖುಷಿ ತಂದಿಲ್ಲ ಎಂದು ಗೊತ್ತಾಗುತ್ತದೆ )
ಹೀಗೆ ಕ್ರೀಡಾ ಪತ್ರಕರ್ತನನ್ನು ನೇರವಾಗಿ ಜರೆದು ಸುಮ್ಮನಾಗಿಸಿದ್ದು ಧೋನಿ ಮಾತ್ರವಲ್ಲ. ಪಂದ್ಯ ನಡೆಯುತ್ತಿರುವಾಗ ಅಮಿತಾಭ್ ಬಚ್ಚನ್ ಟ್ವೀಟ್ ಮಡಿ ಭಾರತೀಯ ಕಮೆಂಟೇ ಟರುಗಳು ಪ್ರತಿಸ್ಪರ್ಧಿಗಳಿಗಿಂತ ಭಾರತೀಯ ಆಟಗಾರರ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು " ದೇಶಭಕ್ತಿಯುತ ಉಪದೇಶ " ನೀಡಿದರು. ಅದನ್ನು ಧೋನಿ ಯಥಾವತ್ ರೀ ಟ್ವೀಟ್ ಮಾಡಿ ಮತ್ತೆ " ದೊಡ್ಡವರ ಉಪದೇಶವನ್ನು " ನೆನಪಿಸಿದರು. 

ಧೋನಿ ಹಾಗು ಬಿಗ್ ಬಿ ತಮ್ಮ ತಮ್ಮ ಕ್ಷೇತ್ರದಲ್ಲಿ ಅಸಾಮಾನ್ಯ ಸಾಧನೆಗಳನ್ನು ಮಾಡಿದವರು. ಸಾರ್ವಜನಿಕ ಜೀವನದಲ್ಲಿ ಗೌರವದಿಂದಲೇ ನಡೆದುಕೊಂಡವರು. ಆದರೆ ಈ ವಿಷಯದಲ್ಲಿ ಅವರು ಎಡವಿದ್ದಾರೆ ಎಂಬುದು ಸತ್ಯ. ಕ್ರೀಡಾ ಪತ್ರಕರ್ತರ ಅಥವಾ ಯಾವುದೇ ಪತ್ರಕರ್ತರ ಹಾಗು ವೀಕ್ಷಕ ವಿವರಣೆಗಾರರ ಕೆಲಸ ಯಾವುದೇ ಒಂದು ತಂಡದ ಮೇಲೆ ಫೋಕಸ್ ಮಾಡುವುದು ಅಥವಾ ಆ ತಂಡ ಗೆದ್ದಾಗ ಸೋತಾಗ ಸಂತಸ ಪಡುವುದು , ದುಖಿಸುವುದು ಅಲ್ಲ. ವಸ್ತುನಿಷ್ಟತೆ ಹಾಗು ನಿಷ್ಪಕ್ಷಪಾತ - ಇವೆರಡು ಪತ್ರಕರ್ತನ ವೃತ್ತಿಯ ಆಧಾರ ಸ್ಥಂಭಗಳು.

 ಧೋನಿ ಹಾಗು ಅಮಿತಾಭ್ ಇದನ್ನು ತಿಳಿದುಕೊಳ್ಳಬೇಕು. ಏಕೆಂದರೆ ಈ ಇಬ್ಬರು ಗಣ್ಯರು ಪತ್ರಕರ್ತರ ಈ ಎರಡು ಆಸ್ತಿಗಳಿಗೇ ಕೈ ಹಾಕಿದ್ದಾರೆ. " ನೀವು ನಮ್ಮ ಬೆಂಬಲಿಗರು ಅಥವಾ ವಿರೋಧಿಗಳು " ಎಂದು ಹೇಳುವಂತಹ ಟೋನ್ ಅವರ ಮಾತಿನಲ್ಲಿ ವ್ಯಕ್ತವಾಗಿದೆ. ಇದು ತಪ್ಪು. ಪತ್ರಕರ್ತರದ್ದು ಭಾರತ , ಪಾಕಿಸ್ತಾನ ಅಥವಾ ಯಾವುದೇ ತಂಡದ ಭೊಪರಾಕ್ ಹೇಳುವ ಕೆಲಸ ಅಲ್ಲ. ಭೊಪರಾಕ್ ಹೇಳಲು, ಪ್ರೀತಿಸಲು, ಬೆಂಬಲಿಸಲು ಕೋಟಿಗಟ್ಟಲೆ ಅಭಿಮಾನಿಗಳಿದ್ದಾರೆ. ಪತ್ರಕರ್ತರ ಕೆಲಸ ಅದಲ್ಲ. ವಿಷಯವನ್ನು ವರದಿ ಮಾಡುವುದು, ನಿಷ್ಟುರವಾಗಿ ಪ್ರಶ್ನಿಸುವುದು ಹಾಗು ಸತ್ಯ ಹೇಳುವುದು - ಇವು ಪತ್ರಕರ್ತನ ಕೆಲಸ. 

ಧೋನಿ, ಅಮಿತಾಭ್ ಇಬ್ಬರಿಗೂ ಇದು ಸ್ಪಷ್ಟವಾಗಬೇಕು. ಇಲ್ಲದಿದ್ದರೆ ಅವರು ಪತ್ರಕರ್ತರನ್ನು ಚಿಯರ್ ಲೀಡರ್ ಗಳು ಎಂದು ತಪ್ಪು ತಿಳಿದುಬಿಡುವ ಅಪಾಯವಿದೆ. 
 

share
ಸುನಿಲ್ ಕುಮಾರ್ , ಮಂಗಳೂರು
ಸುನಿಲ್ ಕುಮಾರ್ , ಮಂಗಳೂರು
Next Story
X