Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಯೂರೋಪ್‌ಗಿಂತ ಭಾರತ ಸುಸ್ಥಿತಿಯಲ್ಲಿದೆ:...

ಯೂರೋಪ್‌ಗಿಂತ ಭಾರತ ಸುಸ್ಥಿತಿಯಲ್ಲಿದೆ: ಪನಗಾರಿಯಾ

ವಾರ್ತಾಭಾರತಿವಾರ್ತಾಭಾರತಿ26 March 2016 11:42 PM IST
share

ಹೊಸದಿಲ್ಲಿ, ಮಾ.26: ವೈವಿಧ್ಯಮಯ ವಿಷಯಗಳಲ್ಲಿ ಭಾರತ ಹಾಗೂ ಯೂರೋಪಿಯನ್ ಒಕ್ಕೂಟವನ್ನು ತುಲನೆ ಮಾಡಿರುವ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ, ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಸಂಘಟಿತ ಘಟಕವಾಗಿ, ಯೂರೋಪಿಯನ್ ಯೂನಿಯನ್‌ಗಿಂತ ಸುಸ್ಥಿತಿಯಲ್ಲಿದೆ. ಮುಂದಿನ ದಶಕಗಳಲ್ಲಿ ಇನ್ನಷ್ಟು ಉನ್ನತ ಪ್ರಗತಿ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಭಾರತವನ್ನು ಗದ್ದಲದ ಪ್ರಜಾಪ್ರಭುತ್ವ ಎಂದು ಕರೆದಿರುವ ಬಗ್ಗೆ ಬಾರತದ ಕೈಗಾರಿಕೆಗಳ ಒಕ್ಕೂಟ ಆಯೋಜಿಸಿದ ಸಮಾರಂಭದಲ್ಲಿ ಗಮನ ಸೆಳೆದಾಗ, ಭಾರತದಲ್ಲಿ ದೊಡ್ಡ ಪ್ರಮಾಣದ ವೈವಿಧ್ಯತೆ ಇದ್ದರೂ, ವೈವಿಧ್ಯಮಯ ಸಂಪ್ರದಾಯ ಹಾಗೂ ಸಂಸ್ಕೃತಿ ಇದ್ದರೂ ಇಂದಿಗೂ ಸಂಘಟಿತ ಘಟಕವಾಗಿ ಮುಂದುವರಿದಿದೆ ಎಂದು ಹೇಳಿದರು.

ಸಿಂಗಾಪುರದ ಮೊದಲ ಪ್ರಧಾನಿ ಲೀ ಕೌನ್ ಯ್ ಅವರು ಅರ್ಥಶಾಸ್ತ್ರಜ್ಞ ಜಗದೀಶ್ ಭಗವತಿ ಅವರನ್ನು ಭಾರತದ ಗದ್ದಲ ಪ್ರಜಾಪ್ರಭುತ್ವದ ಬಗ್ಗೆ ಕೇಳಿದಾಗ, ಭಗವತಿಯವರು, ನಿಮಗೆ ಅದು ಗದ್ದಲವಾಗಿ ಕೇಳಬಹುದು; ಆದರೆ ನನಗೆ ಅದು ಸಂಗೀತ ಎಂದು ಉತ್ತರಿಸಿದ್ದನ್ನು ಪನಗಾರಿಯಾ ಉಲ್ಲೇಖಿಸಿದರು.

ಇದು ಎಲ್ಲವನ್ನೂ ಹೇಳುತ್ತದೆ. ಆ ಬಗ್ಗೆ ಸ್ವಲ್ಪಯೋಚಿಸಿ. ಯೂರೋಪಿಯನ್ನರು ಭಾರತಕ್ಕಿಂತ ಕಡಿಮೆ ವೈವಿಧ್ಯ ಹೊಂದಿದ್ದರೂ, ಒಂದು ದೇಶವಾಗಲು ಹೆಣಗುತ್ತಿದ್ದಾರೆ. ಯೂರೋಪನ್ನು ಒಂದು ಘಟಕವಾಗಿ ಮಾಡುವ ಚಳವಳಿಯೇ ಹಲವು ಸಂಕಷ್ಟಗಳನ್ನು ತಂದಿವೆ.

ಏಕ ವಿತ್ತೀಯ ಸಂಘಟನೆಯಲ್ಲಿ ಕೂಡಾ, ಗ್ರೀಸ್ ಯಾವ ಸಂದರ್ಭದಲ್ಲಿ ಒಕ್ಕೂಟದಿಂದ ಹೊರ ನಡೆಯುತ್ತದೋ ಅಥವಾ ನಾಳೆ ಸ್ಪೇನ್ ಕೂಡಾ ಅದೇ ಹಾದಿ ಹಿಡಿಯಬಹುದು ಎಂಬ ಭೀತಿ ಕಾಡುತ್ತಿದೆ. ಇದಕ್ಕೆ ವಿರುದ್ಧವಾಗಿ ಭಾರತದಲ್ಲಿ ಅಧಿಕ ವೈವಿಧ್ಯತೆ ಇದ್ದರೂ, ಒಂದು ದೇಶವಾಗಿ ಉಳಿದುಕೊಂಡಿದೆ

ನಾವು ಒಂದಾಗಿ ಇರುವುದಷ್ಟೇ ಅಲ್ಲ; ಕ್ರಮೇಣ ದೇಶ ಪ್ರಗತಿಪಥದಲ್ಲಿ ಮುನ್ನಡೆಯುತ್ತಿದೆ. ಇಂದಿನ ಗದ್ದಲದಲ್ಲಿ ನಾವು 1950 ಹಾಗೂ 60ರ ದಶಕವನ್ನು ನಾವು ಮರೆತಿದ್ದೇವೆ. ಆಗ ವಿವಿಧ ಭಾಷೆಗಳನ್ನಾಡುವ ಜನರು ಪ್ರತ್ಯೇಕತಾವಾದ ಚಳವಳಿಯಲ್ಲಿ ತೊಡಗಿದ್ದರು ಎಂದು ಹೇಳಿದರು.

ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಅಭೂತಪೂರ್ವ ಯಶಸ್ಸು ಸಾಧಿಸುವುದು ಬಿಟ್ಟರೆ ನನಗೆ ಅನ್ಯ ಮಾರ್ಗ ಕಾಣುತ್ತಿಲ್ಲ. ಧೀರ್ಘಾವಧಿಯಲ್ಲಿ ಅಂದರೆ ಮುಂದಿನ 15-30 ವರ್ಷಗಳ ಅವಧಿಯಲ್ಲಿ ದೇಶದ ಅಭಿವೃದ್ಧಿ ದರ ಶೇಕಡ 8ರಿಂದ 10ರ ಆಸುಪಾಸಿನಲ್ಲೇ ಮುಂದುವರಿಯಲಿದೆ. ಭಾರತದಲ್ಲಿ ಅಭಿವೃದ್ಧಿಯಲ್ಲಿ ಎಲ್ಲರ ಸೇರ್ಪಡೆಯ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಶ್ನಿಸಿದಾಗ, ಭಾರತದ ಅಭಿವೃದ್ಧಿಯ ಸ್ವರೂಪವೇ ಭಿನ್ನ ಎಂದರು.

ಈ ಹಿಂದೆ ಸಿಂಗಾಪುರ, ಥೈವಾನ್, ದಕ್ಷಿಣ ಕೊರಿಯಾ ಹಾಗೂ ಚೀನಾದ ಯಶೋಗಾಥೆಗಳು ಕೇಳಿಬರುತ್ತಿದ್ದವು. ಶ್ರಮಸಾಂದ್ರ ಕೈಗಾರಿಕೆಗಳಿಂದ ಇತ್ತೀಚೆಗೆ ಅಭಿವೃದ್ಧಿಯಾಗಿದ್ದರೆ, ಬಳಿಕ ಸೇವಾ ವಲಯದ ಪ್ರಗತಿ ದೇಶದ ಅಭಿವೃದ್ಧಿಗೆ ಪೂರಕವಾಯಿತು ಎಂದು ವಿವರಿಸಿದರು.

ಶ್ರಮಸಾಂಧ್ರ ಕೈಗಾರಿಕಾ ಪ್ರಗತಿಯ ಅಗತ್ಯತೆಯನ್ನು ಪ್ರತಿಪಾದಿಸಿದ ಅವರು, ನಮ್ಮ ಉದ್ಯಮಿಗಳು ಈ ಕಾರ್ಮಿಕ ವರ್ಗವನ್ನು ಬಳಸಿಕೊಂಡು ಏನು ಮಾಡಬಹುದು ಹಾಗೂ ಯಂತ್ರಗಳನ್ನು ಹೇಗೆ ಸಮರ್ಪಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಯೋಚಿಸಬೇಕು ಎಂದು ಸೂಚಿಸಿದರು. ಕೇವಲ ಯಂತ್ರಗಳ ಪ್ರಗತಿಗಷ್ಟೇ ಗಮನ ಹರಿಸದೆ, ಶ್ರಮ ಹಾಗೂ ಯಂತ್ರಶಕ್ತಿಯ ಸಮನ್ವಯಕ್ಕೆ ಒತ್ತು ನೀಡುವಂತೆ ಸೂಚಿಸಿದರು. ಭಾರತಕ್ಕೆ ಅಭಿವೃದ್ಧಿ ಅವಕಾಶ ಹೇರಳವಾಗಿದೆ ಎಂದು ಅವರು ಹೇಳಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X