Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕುಲಭೂಷಣ್‌ರನ್ನು ಇನ್ನೊಬ್ಬ ಸರಬ್ಜಿತ್...

ಕುಲಭೂಷಣ್‌ರನ್ನು ಇನ್ನೊಬ್ಬ ಸರಬ್ಜಿತ್ ಮಾಡಬೇಡಿ: ಸರಬ್ಜಿತ್‌ರ ಸಹೋದರಿ ದಲ್‌ಬೀರ್ ಕೌರ್ ಆಗ್ರಹ

ವಾರ್ತಾಭಾರತಿವಾರ್ತಾಭಾರತಿ27 March 2016 11:49 AM IST
share
ಕುಲಭೂಷಣ್‌ರನ್ನು ಇನ್ನೊಬ್ಬ ಸರಬ್ಜಿತ್ ಮಾಡಬೇಡಿ: ಸರಬ್ಜಿತ್‌ರ ಸಹೋದರಿ ದಲ್‌ಬೀರ್ ಕೌರ್ ಆಗ್ರಹ

ಹೊಸದಿಲ್ಲಿ, ಮಾರ್ಚ್.27: ಪಾಕಿಸ್ತಾನದಲ್ಲಿ ಬಂಧಿತರಾದ ರಾ ಬೇಹುಗಾರರೆನ್ನಲಾದ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಮೋದಿ ಸರಕಾರ ಉಚಿತಕ್ರಮ ಕೈಗೊಳ್ಳಬೇಕೆಂದು ಸರಬಜಿತ್‌ ಸಿಂಗ್‌ರ ಸಹೋದರಿ ದಲ್‌ಬೀರ್ ಕೌರ್ ಆಗ್ರಹಿಸಿದ್ದಾರೆ. ಈ ಹಿಂದೆ ಸರಬಜಿತ್‌ರನ್ನು ಕೂಡ ಭಾರತೀಯ ಬೇಹುಗಾರನೆಂದೇ ಆರೋಪಿಸಿ ಪಾಕಿಸ್ತಾನ ಸರಕಾರ ಬಂಧಿಸಿತ್ತು ಮತ್ತು ಅವರು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದುದರಿಂದ ಮರಣ ಸಂಭವಿಸಿತ್ತು ಎಂದು ಸರಬಜೀತ್ ಸಹೋದರಿ ನೆನಪಿಸಿದ್ದಾರೆ. ವಿದೇಶ ಸಚಿವೆ ಸುಷ್ಮಾ ಸ್ವರಾಜ್‌ರನ್ನು ಭೇಟಿಯಾಗುವ ಮೊದಲು ಮಾತಾಡುತ್ತಾ "ಬಹುಶಃ ಇನ್ನೊಬ್ಬ ಸರಬಜೀತ್ ಆಗುವರೆನ್ನುವುದು ಕೆಟ್ಟ ಭಾವನೆಯೇ ಇರಬಹುದು. ಇದನ್ನು ನಾವು ಪುನರುಚ್ಚರಿಸಬಾರದು. ಸರಕಾರ ಕುಲಭೂಷಣ್ ರಾ ಏಜೆಂಟ್ ಎಂಬುದನ್ನು ನಿರಾಕರಿಸಿದೆ. ಅವರ ಕುಟುಂಬಿಕರೂ ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಇದಕ್ಕಿಂತ ಬೇರೇನು ಬೇಕು? ಜನರು ಈ ಮಾತಿನೊಂದಿಗೆ ಮುಂದೆ ಹೋಗಬೇಕು. ಹಾಗೂ ಕುಲಭೂಷಣ್‌ರನ್ನು ಇನ್ನೊಬ್ಬ ಸರಬಜೀತ್ ಆಗಗೊಡಬಾರದು ಎಂಬುದನ್ನು ದೃಢಗೊಳಿಸಬೇಕು. ಪಾಕ್ ಅಧ್ಯಕ್ಷ ಅಸಿಫ್ ಅಲಿಜರ್ದಾರಿ 2012ರಲ್ಲಿ ಅಜ್ಮೀರ್‌ಗೆ ಭೇಟಿನೀಡಿದ್ದಾಗ ಖಲೀಲ್ ಚಿಸ್ತಿಯ ಬಿಡುಗಡೆಗೊಂಡಂತೆ" ಎಂದು ದಲ್‌ಬೀರ್ ಕೌರ್ ಹೇಳಿದ್ದಾರೆ.

ಪ್ರಧಾನಿ ಮೋದಿ ಪಾಕಿಸ್ತಾನದೊಂದಿಗೆ ದೋಸ್ತಿಗೆ ಮೊದಲು ಭಾರತದ ಪ್ರತಿಯೊಬ್ಬ ನಾಗರಿಕರ ನೆನಪು ಇಟ್ಟುಕೊಳ್ಳುವುದು ಉತ್ತಮವೇ ಆಗಿದೆ. ಆದರೆ ಹೀಗೆ ತಡ ಆಗುವ ಮೊದಲು ಏನಾದರು ಮಾಡಬೇಕು. ಯಾಕೆಂದರೆ ಪಾಕಿಸ್ತಾನದೊಂದಿಗೆ ವಿಶ್ವಾಸ ವಿರಿಸುವುದೆಂದರೆ ತಾವೆ ಸ್ವಯಂ ವಂಚನೆಗೊಳಗಾದಂತೆ ಎಂದಿರುವ ದಲ್‌ಬೀರ್ ಕೌರ್ ಪಾಕಿಸ್ತಾನದ ಜೈಲಲ್ಲಿರುವ 87 ನಾಗರಿಕರು ಮತ್ತು ಭಾರತದ ಜೈಲಲ್ಲಿರುವ 44 ಪಾಕಿಸ್ತಾನಿ ನಾಗರಿಕರ ಪಟ್ಟಿಯನ್ನು ಸುಷ್ಮಾ ಸ್ವರಾಜ್‌ಗೆ ನೀಡುವುದಾಗಿ ತಿಳಿಸಿದ್ದಾರೆ.

ಸರಬಜಿತ್‌ ಸಿಂಗ್ ಪಾಕಿಸ್ತಾನದಲ್ಲಿ ತಾನೊಬ್ಬ ರೈತ ಮತ್ತು ಗಡಿಯ ಸಮೀಪ ತನ್ನ ಮನೆ ಇದೆ ಎಂದು ಹೇಳಿದ್ದರು. ಅವರು ತಪ್ಪಿ ಗಡಿಯನ್ನು ದಾಟಿದ್ದೇನೆ ಎಂದರೂ ಅವರನ್ನು ಬಂಧಿಸಿ 1991ರಲ್ಲಿ ಗಲ್ಲು ಶಿಕ್ಷೆ ಘೋಷಿಸಲಾಗಿತ್ತು. ನಂತರ ಅದನ್ನು ಶಿಕ್ಷೆ ಪ್ರಮಾಣ ಕಡಿಮೆ ಗೊಳಿಸಲಾಗಿತ್ತು. ಆನಂತರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಲಾಹೋರ್ ಆಸ್ಪತ್ರೆಯಲ್ಲಿ ಮೃತರಾಗಿದ್ದರು. ಈಗ ಪಾಕಿಸ್ತಾನ ಬೇಹುಗಾರ ಎಂದು ಬಂಧಿಸಲಾಗಿರುವ ಕುಲಭೂಷಣ್ ಜಾಧವ್‌ರ ತಂದೆ ಮುಂಬೈಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೆಲಸಮಾಡಿದ್ದರು ಮತ್ತು ಸಹಾಯಕ ಪೊಲೀಸ್ ಆಯುಕ್ತರಾಗಿ ನಿವೃತ್ತರಾಗಿದ್ದರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಕುಲ್‌ಭೂಷಣ್‌ರ ತಂದೆ ಎಂಟು ವರ್ಷಗಳ ಮೊದಲು ಸಹಾಯಕ ಪೊಲೀಸ್ ಆಯುಕ್ತ ಪದದಿಂದ ಸೇವಾ ನಿವೃತ್ತಿಗೊಂಡಿದ್ದರು. 2002ರಲ್ಲಿ ಬಾಂದ್ರದಲ್ಲಿ ಬಾಲಿವುಡ್ ನಟ ಸಲ್ಮಾನ್‌ರ ಹಿಟ್ ಆಂಡ್ ರನ್ ಪ್ರಕರಣ ದಾಖಲಾದಾಗ ಠಾಣೆಯ ಉಸ್ತುವಾರಿ ಕುಭೂಷಣ್‌ರ ಚಿಕ್ಕಪ್ಪ ಸುಭಾಶ್‌ರದ್ದಾಗಿತ್ತು. ಕುಲಭೂಷಣ್ ಕುಟುಂಬಕ್ಕೆ ಅವರ ಬಂಧನದ ಸುದ್ದಿ ಸಂಜೆಯ ವೇಳೆಗೆ ಮಾಧ್ಯಮಗಳಲ್ಲಿ ವರದಿಯಾದ ಮೇಲೆ ಗೊತ್ತಾಗಿತ್ತು. ಮೂಲಗಳ ಪ್ರಕಾರ ತನ್ನದೇ ವ್ಯವಹಾರವನ್ನು ಸ್ಥಾಪಿಸಲಿಕ್ಕಾಗಿ ನೌಕಾ ಸೇನೆಯಿಂದ ಸ್ವಇಚ್ಛೆಯ ನಿವೃತ್ತಿಯನ್ನು ಕುಲಭೂಷಣ್ ಪಡೆದುಕೊಂಡಿದ್ದರು. ಮತ್ತು ತನ್ನ ವ್ಯವಹಾರದ ನಿಮಿತ್ತ ಜಗತ್ತಿನಾದ್ಯಂತ ಪ್ರವಾಸ ಮಾಡುತ್ತಿದ್ದರೆನ್ನಲಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X