ಕಾಸರಗೋಡು : ನದಿಯಲ್ಲಿ ಮುಳುಗಿ ಇಬ್ಬರು ಮಕ್ಕಳ ಸಾವು
ಕಾಸರಗೋಡು : ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನೀಲೇಶ್ವರ ಚೋಲಕಡವು ಹೊಳೆ ಯಲ್ಲಿ ನಡೆದಿದೆ.
ಮ್ರತಪತ್ತವರನ್ನು ಚೋಳಕಡವಿನ ಸತ್ತಾರ್ ರವರ ಪುತ್ರ ನಿಹಾಲ್ (೧೦) ಮತ್ತು ಮುಹಮ್ಮದ್ ರ ಪುತ್ರ ಅರ್ಫಾಜ್ (೮) ಎಂದು ಗುರುತಿಸಲಾಗಿದೆ.
ಆದಿತ್ಯವಾರ ಸಂಜೆ ಘಟನೆ ನಡೆದಿದೆ ಹೊಳೆಗಿಳಿದ ಸಂದರ್ಭದಲ್ಲಿ ಮುಳುಗಿದ ಇಬ್ಬರನ್ನು ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಆಗಲೇ ಮ್ರತಪಟ್ಟಿದ್ದರು.
ಮೀನು ಹಿಡಿಯಲೆಂದು ಇಬ್ಬರು ಹೊಳೆಗೆ ಇಳಿದಿದ್ದರು ಎನ್ನಲಾಗಿದೆ .
ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Next Story





