Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ವಾಮಿಗಿಂತ ಸ್ವಾಮಿಯ ಅಣಕ ಪುಟಕ್ಕೇ ಭಾರೀ...

ಸ್ವಾಮಿಗಿಂತ ಸ್ವಾಮಿಯ ಅಣಕ ಪುಟಕ್ಕೇ ಭಾರೀ ಡಿಮ್ಯಾಂಡ್ !

ಡಿಲೀಟ್ ಆದ ಪುಟಕ್ಕೆ ಮತ್ತೆ ಅವಕಾಶ ನೀಡಲು ಫೇಸ್ ಬುಕ್ ಗೆ ಮನವಿ

ವಾರ್ತಾಭಾರತಿವಾರ್ತಾಭಾರತಿ28 March 2016 8:47 PM IST
share
ಸ್ವಾಮಿಗಿಂತ ಸ್ವಾಮಿಯ ಅಣಕ ಪುಟಕ್ಕೇ ಭಾರೀ ಡಿಮ್ಯಾಂಡ್ !

ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮೀ ಅವರ ಹೆಸರಿರುವ ಎರಡು ಫೇಸ್ ಬುಕ್ ಪುಟಗಳನ್ನು ಫೇಸ್ ಬುಕ್ ಕಿತ್ತು ಹಾಕಿದೆ. ಅದರಲ್ಲಿ ಒಂದು ಅನಾಮಿಕನೊಬ್ಬ ನಡೆಸುತ್ತಿರುವ ಹಾಗು ಸಾಕಷ್ಟು ಪ್ರಸಿದ್ಧಿ ಪಡೆದಿರುವ “Unofficial: Subramaniam Swamy” ಹೆಸರಿನ ಅಣಕ ಪುಟ , ಇನ್ನೊಂದು ಸ್ವತಹ ಸ್ವಾಮಿಯೇ ಅನುಮೋದಿಸಿರುವ ಹಾಗು ಶಂಖ್ ನಾದ್ ವೆಬ್ ಸೈಟ್ ನಿರ್ವಹಿಸುತ್ತಿರುವ “Unofficial: Dr. Subramanian Swamy” ಹೆಸರಿನ ಅಭಿಮಾನಿ ಪುಟ.  

ಫೇಸ್ ಬುಕ್ ಸ್ವಾಮಿಯ ಅಣಕ ಪುಟವನ್ನು ಡಿಲೀಟ್ ಮಾಡಿದ ಬಳಿಕ ಆ ಪುಟಕ್ಕೆ ಮತ್ತೆ  ಅವಕಾಶ ನೀಡಬೇಕೆಂದು ಆಗ್ರಹಿಸಿ Change.org ಮನವಿ ಅಭಿಯಾನ ಪ್ರಾರಂಭವಾಗಿದೆ.1,300 ಮಂದಿ ಈವರೆಗೆ ಸಹಿ ಮಾಡಿರುವ ಈ ಮನವಿಯಲ್ಲಿ " ಪ್ರಸ್ತುತ ಭಾರತೀಯ ರಾಜಕೀಯದ ಬಗ್ಗೆ ಈ ಪುಟ ಸಾಕಷ್ಟು ವಾಸ್ತವಗಳನ್ನು ಮುಂದಿಡುತ್ತಿತ್ತು. ನಿಜವಾದ ವ್ಯಕ್ತಿಯ ಬದಲು ಆತನ ಹೆಸರಿನ ಅಣಕ ಪುಟ ಇಷ್ಟೊಂದು ಗಮನ ಸೆಳೆದಿದ್ದು ಅತ್ಯಂತ ಅಪರೂಪ. ಫೇಸ್ ಬುಕ್ ಮುಖ್ಯ ಕಾರ್ಯಾಲಯ ಈ ಬಗ್ಗೆ ವಿವೇಕದಿಂದ ವರ್ತಿಸಿ ಆ ಪುಟವನ್ನು ಮತ್ತೆ ಜೀವಂತಗೊಳಿಸಲಿದೆ  ಎಂದು ನಂಬಿದ್ದೇವೆ " ಎಂದು ಹೇಳಲಾಗಿದೆ. 

ಡಿಸೆಂಬರ್ ೨೦೧೪ ರಲ್ಲಿ ತನ್ನ ಅಣಕ ಪುಟವನ್ನು ಡಿಲೀಟ್ ಮಾಡದಿದ್ದರೆ ಫೇಸ್ ಬುಕ್ ಕಾನೂನು ಕ್ರಮ ಎದುರಿಸಬೇಕಾಗುತ್ತೆ ಎಂದು ಸ್ವಾಮೀ ಹೇಳಿದ್ದರು. ಆಗ ಗೊಂದಲಕ್ಕೊಳಗಾದ ಫೇಸ್ ಬುಕ್ ಅಣಕ ಪುಟದ ಬದಲು ಸ್ವಾಮಿಯ ಅಭಿಮಾನಿ ಪುಟವನ್ನೇ ಡಿಲೀಟ್ ಮಾಡಿತ್ತು. 

ಈ ಅಣಕ ಪುಟದಲ್ಲಿ ಸ್ವಾಮೀ, ಬಿಜೆಪಿ ಹಾಗು ಸಂಘ ಪರಿವಾರದ ಸಿದ್ಧಾಂತ ಹಾಗು ದ್ವಂದ್ವಗಳ ಬಗ್ಗೆ ಚಿತ್ರಗಳು, ಹೇಳಿಕೆಗಳು , ವ್ಯಂಗ್ಯ ಚಿತ್ರಗಳು ಇತ್ಯಾದಿ ಪ್ರಕಟವಾಗಿ ಭಾರೀ ಗಮನ ಸೆಳೆದಿತ್ತು. ಎಲ್ಲಿವರೆಗೆಂದರೆ ಸ್ವಾಮೀ ಅಭಿಮಾನಿಗಳು ಇದನ್ನೇ ಸ್ವಾಮಿಯ ಅಭಿಮಾನಿ ಪುಟ ಎಂದು ತಿಳಿದು ಗೊಂದಲ ಸೃಷ್ಟಿಯಾಗಿತ್ತು. 

ಸ್ವಾಮಿಯ ಈ ಅಣಕ ಪುಟ ನಿರ್ವಹಿಸುತ್ತಿರುವ ಅನಾಮಿಕ ಒಮ್ಮೆ ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ನೊಂದಿಗೆ ಮಾತನಾಡಿ " ನನ್ನನ್ನು ಸೌದಿ ಪ್ರಾಯೋಜಿತ ಭಯೋತ್ಪಾದಕ, ಇಟಾಲಿಯನ್ ಮಾಫಿಯ ಎಂದೆಲ್ಲ ಸ್ವಾಮೀ ಅಭಿಮಾನಿಗಳು ಆರೋಪಿಸುತ್ತಾರೆ. ಆದರೆ ನಾನು ಅವರಿಗೆ ಅವಹೇಳನ ಮಾಡಲು ಇದನ್ನು ನಿರ್ವಹಿಸುತ್ತಿಲ್ಲ. ನಾನು ಧರ್ಮವನ್ನು ಟಾರ್ಗೆಟ್ ಮಾಡಿಲ್ಲ, ಸಿದ್ಧಾಂತವನ್ನು ಟಾರ್ಗೆಟ್ ಮಾಡಿದ್ದೇನೆ. ಸ್ವಾಮೀ ಮತ್ತು ಅವರ ಜನ ಹಿಂದೂ ಧರ್ಮದೊಂದಿಗೆ ಪುರಾಣ ಬೆರೆಸಿ ಅದನ್ನು ವ್ಯಂಗ್ಯ ಮಾಡುತ್ತಿದ್ದಾರೆ. ನಾನು ಅವರ ಈ ವೇದಿಕ್ ಸಿದ್ಧಾಂತವನ್ನು ವ್ಯಂಗ್ಯ ಮಾಡುತ್ತಿದ್ದೇನೆ " ಎಂದು ಹೇಳಿದ್ದರು.  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X