‘ವಿದ್ಯಾರ್ಥಿಗಳ ಮೇಲೆ ನಿಸ್ವಾರ್ಥ ಸೇವೆಯ ಪ್ರಭಾವ’
ಉಡುಪಿ, ಮಾ.28: ದೀರ್ಘಕಾಲ ಶಿಕ್ಷಕ ವೃತ್ತಿಯಲ್ಲಿದ್ದು ಮೌಲಿಕ ಸೇವೆ ಸಲ್ಲಿಸಿದ ಶಿಕ್ಷಕರ ಪ್ರಭಾವ ವಿದ್ಯಾರ್ಥಿಗಳ ಮೇಲಿರುತ್ತದೆ. ಅದನ್ನು ವಿದ್ಯಾರ್ಥಿಗಳು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಉಡುಪಿಯ ಸೈಂಟ್ ಮೇರಿಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ಸಂಚಾಲಕ ಅತಿ ವಂ.ಫ್ರೆಡ್ ಮಸ್ಕರೇನ್ಹಸ್ ಹೇಳಿದ್ದಾರೆ.
ವಯೋ ನಿವೃತ್ತರಾಗಲಿರುವ ಶಾಲಾ ಶಿಕ್ಷಕ ಕೆ.ಶ್ರೀಧರ್ ಭಟ್ರವರನ್ನು ಇತ್ತೀಚೆಗೆ ಸನ್ಮಾನಿಸಿ ಅವರು ಮಾತನಾಡುತಿದ್ದರು.
ಸಹಾಯಕ ಧರ್ಮಗುರು ಫಾ.ರೋಯ್ಸನ್ ಫೆರ್ನಾಂಡಿಸ್, ಕಡಿಯಾಳಿ ಯು.ಕಮಲಾ ಬಾ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಿ.ಗುಣಾಕರ್ ಶೆಟ್ಟಿ ಮುಖ್ಯ ಅತಿಥಿಗಳಾಗಿದ್ದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂದೀಪ್ ರೈ, ಹಿಂದಿ ಅಧ್ಯಾಪಕ ಜಯಪ್ರಕಾಶ್ ಶೆಟ್ಟಿ, ವಿದ್ಯಾರ್ಥಿ ಶುಭಾಶ್ರೀ ಮಾತನಾಡಿದರು. ಕ್ಲೇರಾ ಮಥಾಯಸ್, ಡಿ.ಕೆ.ವಿಲಿಯಂ, ಪಾಲನಾ ಮಂಡಳಿಯ ಅಧ್ಯಕ್ಷ ಬೋನಿಫಾಸ್ ಡಿಸೋಜ, ಕಾರ್ಯದರ್ಶಿ ಗ್ರೇಶಿಯನ್ ಬುತೆಲ್ಲೊ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸರೋಜಾ ಉಪಸ್ಥಿತರಿದ್ದರು.
ಹಿರಿಯ ಅಧ್ಯಾಪಕಿ ವನಿತಾ ಬಾ ಮಾನಪತ್ರವನ್ನು ವಾಚಿಸಿದರು. ಶಾಲಾ ಮುಖ್ಯ ಶಿಕ್ಷಕಿ ಜೋಯ್ಸಾ ಡೇಸಾ ಸ್ವಾಗ ತಿಸಿದರು. ಕ್ರೀಡಾ ಅಧ್ಯಾಪಕ ಡೇವಿಡ್ ವಂದಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದರು.