ಕಾಸರಗೋಡು : ಎಸ್ ಎಸ್ ಎಫ್ ವತಿಯಿಂದ ಧರ್ಮಜಾಗರಣ ಯಾತ್ರೆ
.jpg)
ಕಾಸರಗೋಡು : ಎಸ್ ಎಸ್ ಎಫ್ ವತಿಯಿಂದ ಧರ್ಮಜಾಗರಣ ಯಾತ್ರೆ ಎಪ್ರಿಲ್ ಒಂದರಂದು ರಾಜ್ಯದ ಎರಡು ಕೇಂದ್ರಗಳಿಂದ ಹೊರಡಲಿದೆ. ರಾಜ್ಯ ಅಧ್ಯಕ್ಷ ಎನ್ . ವಿ ಅಬ್ದುಲ್ ರಜಾಕ್ ಸಖಾಫಿ ನೇತ್ರತ್ವದ ಉತ್ತರ ವಲಯ ಯಾತ್ರೆ ಸಂಜೆ ಮೂರು ಗಂಟೆಗೆ ಉಪ್ಪಳ ದಿಂದ ಪ್ರಯಾಣ ಬೆಳೆಸಲಿದ್ದು , ಸಮಸ್ತ ಕೇಂದ್ರ ಮುಶಾವರ ಸದಸ್ಯ ಬೇಕಲ ಇಬ್ರಾಹಿ೦ ಮುಸ್ಲಿಯಾರ್ ಜಾಥಾ ನಾಯಕನಿಗೆ ಧ್ವಜ ಹಸ್ತಾ೦ತರಿಸಿ ಉದ್ಘಾಟಿಸುವರು.
ಎರ್ನಾಕುಲ೦ ನ ನೆಲ್ಲಿಕುಯಿ ಯಿಂದ ಹೊರಡುವ ಮಧ್ಯ ವಲಯ ಜಾಥಾ ವನ್ನು ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ವಹಿಸಲಿದ್ದು , ಮಾರ್ಚ್ ೩೧ ರಂದು ಕೊಚ್ಚಿ ಮರೈನ್ ಡ್ರೈವ್ ನಲ್ಲಿ ನಡೆಯುವ ಸಮಾರಂಭದಲ್ಲಿ ಕಾಂತಾಪುರ ಎ .ಪಿ ಅಬೂಬಕ್ಕರ್ ಮುಸ್ಲಿಯಾರ್ ಚಾಲನೆ ನೀಡುವರು . ಉತ್ತರ ವಲಯ ಜಾಥಾಕ್ಕೆ ಜಿಲ್ಲೆಯ ಉಪ್ಪಳ , ಮುಲ್ಳೆರೀಯ , ಕುಂಡಕುಯಿ , ಕಾನ್ಚಾ೦ಗಾಡ್ ಚೆರ್ವತ್ತೂರು ಮೊದಲಾದೆಡೆ ಸ್ವಾಗತ ನೀಡಲಾಗುವುದು .
ಎರಡೂ ಜಾಥಾಗಳು ಎಪ್ರಿಲ್ ಎಂಟರಂದು ಸಂಜೆ ನಾಲ್ಕು ಗಂಟೆಗೆ ಕೋಜಿಕ್ಕೋಡು ಜಿಲ್ಲೆಯ ಫರೂಕ್ ಚು೦ಗತ್ ನಲ್ಲಿ ಸಂಗಮಿಸಿ ರಾಮನಟಕರದಲ್ಲಿ ಕೊನೆಗೊಳ್ಳಲಿದೆ.
ಸಮಾರೋಪ ಸಮ್ಮೇಳನವನ್ನು ಕಾಂತಾಪುರ ಎ . ಪಿ ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸುವರು. ಸಯ್ಯದ್ ಇಬ್ರಾಹಿ೦ ಖಲಿಳುಲ್ ಅಧ್ಯಕ್ಷತೆ ವಹಿಸುವರು . ಈ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಾಫರ್ ಸಾದಿಕ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಲಾಹುದ್ದೀನ್ ಅಯ್ಯೋಡಿ , ಉಮ್ಮರುಲ್ ಫಾರೂಕ್ ಉಪಸ್ಥಿತರಿದ್ದರು.







