ಉಳ್ಳಾಲ: ಹೊಟೇಲ್, ಬಾರ್ಗಳಿಗೆ ನಗರಸಭೆ ಅಧಿಕಾರಿಗಳ ದಾಳಿ
ಉಳ್ಳಾಲ, ಮಾ.30: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿರುವ ಹೊಟೇಲ್ ಮತ್ತು ಬಾರ್ಗಳಿಗೆ ನಗರ ಸಭೆಯ ಅಧಿಕಾರಿಗಳು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸಚಿವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿದ್ದು, ಆಹಾರ ತಯಾರಿಸುವ ಮತ್ತು ಪೂರೈಕೆ ಮಾಡುವ ಎಲ್ಲಾ ಉಪಾಹಾರ ಗೃಹಗಳು, ಹೊಟೇಲ್ಗಳು, ಜ್ಯೂಸ್ ಸೆಂಟರ್ಗಳಿಗೆ ದಾಳಿ ನಡೆಸಿ ಅಲ್ಲಿನ ಸ್ವಚ್ಛತೆ ಬಗ್ಗೆ ಪರಿಶೀಲಿಸಲಾಗುತ್ತದೆ. ಈ ಹಿಂದೊಮ್ಮೆ ಪರಿಶೀಲಿಸಲಾಗಿದ್ದು, ಮತ್ತೆ ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಕೇಂದ್ರಗಳ ಸ್ವಚ್ಛತೆಯಲ್ಲಿ ನ್ಯೂನತೆಗಳು ಕಂಡುಬಂದಲ್ಲಿ ಅಂತಹ ಕೇಂದ್ರಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮಾತ್ರವಲ್ಲ ಉಪಾಹಾರ ಮಂದಿರಗಳ ಪರವಾನಿಗೆಯನ್ನೇ ರದ್ದುಗೊಳಿಸಲಾಗುವುದು ಎಂದು ಹಿರಿಯ ಆರೋಗ್ಯ ನಿರೀಕ್ಷಕ ಜಯಶಂಕರ್ ಎಚ್ಚರಿಕೆ ನೀಡಿದ್ದಾರೆ. ಕಾರ್ಯಾಚರಣೆ ಸಂದರ್ಭ ಉಪನಿರೀಕ್ಷಕ ಸಾಜೀದ್, ರಾಜೇಶ್, ನಗರ ಸಭೆಯ ಸಿಬ್ಬಂದಿ ಶಿವಪ್ಪ ಅಂಗಾರೆ ಉಪಸ್ಥಿತರಿದ್ದರು.
Next Story