ಹೃದಯಾಘಾತ: ಬಸ್ಸಿನಲ್ಲೇ ಸಾವು
ಕಾಪು, ಮಾ.30: ಇಂದ್ರಾಳಿಯ ಲಕ್ಷ್ಮೀನಾರಾಯಣ ರೈ ಎಂಬವರು ನಿನ್ನೆ ವ್ಯವಹಾರ ನಿಮಿತ್ತ ಮಂಗಳೂರಿಗೆ ತೆರಳಿದು,್ದ ಸಂಜೆ ಮಂಗಳೂರಿನಿಂದ ಮಣಿಪಾಲಕ್ಕೆ ಬಸ್ಸಿನಲ್ಲಿ ಹಿಂದಿರುಗುವ ಸಂದರ್ಭದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ.
ಕಟಪಾಡಿಯ ಬಳಿ ತೀವ್ರವಾಗಿ ಅಸ್ವಸ್ಥಗೊಂಡ ಅವರನ್ನು ತಕ್ಷಣ ಬಸ್ನಲ್ಲಿದ್ದ ಸಾರ್ವಜನಿಕರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ, ಅವರಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story