ಮರು ಪರೀಕ್ಷೆಯೂ ರದ್ದು: ಪೋಷಕರಿಂದಲೂ ತೀವ್ರ ಆಕ್ರೋಶ
ಮಂಗಳೂರು, ಮಾ. 31: ಮರು ಪರೀಕ್ಷೆಯೂ ರದ್ದುಗೊಂಡಿದ್ದರಿಂದ ವಿದ್ಯಾರ್ಥಿಗಳ ಪೋಷಕರಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ರೀತಿ ಪರೀಕ್ಷೆಯ ದಿನವೇ ಈ ನಿರ್ಧಾರ ಮಾಡುವುದರಿಂದ ವಿದ್ಯಾರ್ಥಿಗಳ ಮೇಲೆ ಒತ್ತಡ ಬೀಳುತ್ತದೆ. ಇಲಾಖೆಯ ಈ ಅನಿರೀಕ್ಷಿತ ನಿರ್ಧಾರ ಸರಿಯಲ್ಲ ಎಂದು ನಗರದ ವಿದ್ಯಾರ್ಥಿನಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
ಅದಾಗಲೇ ರಾಸಾಯನ ಶಾಸ್ತ್ರ ಪರೀಕ್ಷೆ ಮುಂದೂಡಿ ಇಂದು ನಿಗದಿಗೊಂಡಿತ್ತು. ಇಂದು ಪರೀಕ್ಷೆ ಮುಗಿಯಿತು ಅಂದುಕೊಂಡು ಹೊರಡಲು ರೆಡಿ ಆಗೋವಾಗ ಪರೀಕ್ಷೆ ಇಲ್ಲ ಎಂಬ ಸುದ್ಧಿಯಿಂದ ಬೇಸರವಾಗಿದೆ. ಮತ್ತೆ ಯಾವಾಗ ಪರೀಕ್ಷೆ ಮಾಡುತ್ತಾರೋ ಎಂದು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಯ ಬೇಸರದ ಮಾತು ಕೇಳಿಬಂತು.
Next Story