ಏ.1ರಿಂದ ಈದು ಮುಜಿಲ್ನಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ
ಕಾರ್ಕಳ : ಈದು ಮುಜಿಲ್ನಾಯ ದೈವಸ್ಥಾನದ ಬ್ರಹ್ಮಕಲಶೋತ್ಸವವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಎ.1ರಿಂದ ಎ.3ರವರೆಗೆ ನಡೆಯಲಿದೆ.
ಹನ್ನೆರಡನೇ ಶತಮಾನದಲ್ಲಿ ವಿಜಯನಗರ ಅರಸರ ಆಳ್ವಿಕೆಯ ಕಾಲದಲ್ಲಿ ಸ್ಥಾಪಿತ ಎಂದು ಹೇಳಲಾದ ಈ ದೈವಸ್ಥಾನ ಈದು ಗ್ರಾಮದ ಬಂಧುಗಳ ಧಾರ್ಮಿಕ ಕ್ಷೇತ್ರ. ಕಳೆದ 2015ರ ಫೆಬ್ರವರಿ ತಿಂಗಳಲ್ಲಿ ನಡೆದ ಶಿಲಾನ್ಯಾಸದ ಬಳಿಕ ಈದು ಗ್ರಾಮದ ಪ್ರತೀ ಗ್ರಾಮಸ್ಥರು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಶ್ರಮದಾನ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ. ವಿವಿಧ ಸಂಘಟನೆಗಳು, ಪುರುಷರು, ಮಹಿಳೆಯರು ಬಹಳಷ್ಟು ಸಂಖ್ಯೆಯಲ್ಲಿ ಈ ಶ್ರಮದಾನದಲ್ಲಿ ಪಾಲ್ಗೊಂಡಿದ್ದಲ್ಲದೆ ಒಟ್ಟು ಸುಮಾರು ಆರು ಸಾವಿರ ಮಂದಿ ಇಲ್ಲಿನ ಶ್ರಮದಾನ ನಡೆಸುವ ಮೂಲಕ ಊರಿನ ಜನತೆಯ ಸಂಘಟನಾತ್ಮಕ ಶಕ್ತಿಯನ್ನು ವಿಶೇಷವಾಗಿ ತೋರ್ಪಡಿಸಿದ್ದಾರೆ.
ಸಂಪೂರ್ಣ ಶಿಲಾಮಯವಾಗಿರುವ ಈ ದೈವಸ್ಥಾನ ತುಳುನಾಡಿನಲ್ಲೇ ವಿಶಿಷ್ಠತೆಯನ್ನು ಹೊಂದಿದೆ. ಹೊಯ್ಸಳ ಮಾದರಿಯ ಶಿಲ್ಪಕಲಾ ಶೈಲಿಯಲ್ಲಿ ಈ ದೈವಸ್ಥಾನ ನಿರ್ಮಾಣವಾಗಿದೆ. ದೈವಸ್ಥಾನದ ಹೊರಂಗಣದಲ್ಲಿ 20 ವಿವಿಧ ಶಿಲ್ಪಕಲಾ ಶೈಲಿಯ ಕಂಬಗಳಿವೆ. ದೈವಸ್ಥಾನದ ಒಳಭಾಗದಲ್ಲಿ ಅಪೂರ್ವವಾದ ಕೆತ್ತನೆಯ ಮರದ ವಿನ್ಯಾಸಗಳಿವೆ. ವಿಶಾಲ ಸ್ಥಳಾವಕಾಶವಿರುವ ಈ ಮುಜಿಲ್ನಾಯ ದೈವಸ್ಥಾನದ ಸುತ್ತಲೂ ಪಿಲಿಚಾಮುಂಡಿ, ಪಂಜುರ್ಲಿ, ಬೈರವ, ಕರಿಯಮಲ್ಲಯ, ಮರಕಚನ್ನಯ, ಬೊಮ್ಮರ್ದಾಯ ದೈವಗಳ ಗುಡಿಗಳಿದ್ದು, ಒಂದು ಸಾವಿರ ವರ್ಷಗಳಿಂದಲೂ ಈ ಗುಡಿಗಳಲ್ಲಿ ನೆಲೆಯಾಗಿರುವ ದೈವಗಳನ್ನು ಭಕ್ತರು ನಂಬಿಕೊಂಡು ಆರಾಧನೆ ಮಾಡುತ್ತಾ ಬಂದಿದ್ದಾರೆ.
ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳಿದ್ದು, ಧಾರ್ಮಿಕ ಸಭೆಯು ನಡೆಯಲಿದ್ದು, ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ನವೀಕರಣ ಸಮಿತಿ ಅಧ್ಯಕ್ಷ ಭಾಸ್ಕರ ಎಸ್.ಕೋಟ್ಯಾನ್, ಆಡಳಿತ ಮೊಕ್ತೇಸರ ಅಶೊಕ್ ಕುಮಾರ್ ಜೈನ್, ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್, ಮಾಧ್ಯಮ ಸಮಿತಿ ಅಧ್ಯಕ್ಷ ವಸಂತ್ ಕುಮಾರ್, ಕಲಶ ಸಮಿತಿ ಅಧ್ಯಕ್ಷ ಹರೀ