ಮಂಗಳೂರು: 3 ತಿಂಗಳ ಬಳಿಕ ಆಸ್ತಿ ತೆರಿಗೆ, ನೀರಿನ ಬಿಲ್ ಪಾವತಿಗೆ ರಾಷ್ಟ್ರೀಕೃತ ಬಾಂಕ್ಗೆ!
ಮಂಗಳೂರು ವನ್ ಅವ್ಯವಹಾರ ಆರೋಪ ಹಿನ್ನೆಲೆ
ಮಂಗಳೂರು, ಮಾ. 31: ಸ್ವಯಂಘೋಷಿತ ಆಸ್ತಿ ತೆರಿಗೆ ಮತ್ತು ನೀರಿನ ಬಿಲ್ ಪಾವತಿಯನ್ನು ಸಂಗ್ರಹಿಸುತ್ತಿರುವ ‘ಮಂಗಳೂರು ವನ್’ ಕಚೇರಿ ಬಗ್ಗೆ ಸಾಕಷ್ಟು ದೂರುಗಳು ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಕಟ್ಟಡದಲ್ಲಿ ರಾಷ್ಟ್ರೀಕೃತ ಬ್ಯಾಂಕ್ನ ಪ್ರತ್ಯೇಕ ಕೌಂಟರ್ನ್ನು ಮುಂದಿನ ಮೂರು ತಿಂಳೊಳಗೆ ಸ್ಥಾಪಿಸಲು ನಿರ್ಣಯಿಸಲಾಗಿದೆ.
ನೂತನ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಕಾರ್ಯಸೂಚಿ ಮಂಡನೆಯ ವೇಳೆ ಈ ನಿರ್ಣಯವನ್ನು ಮುಖ್ಯ ಸಚೇತಕ ಶಶಿಧರ್ ಹೆಗ್ಡೆಯವರು ತಿಳಿಸಿದಾಗ, ಅದಕ್ಕೆ ಅನುಮೋದನೆ ನೀಡಲಾಯಿತು.
ಮುಂದಿನ ಮೂರು ತಿಂಗಳ ಕಾಲ ಮಂಗಳೂರು ವನ್ನಲ್ಲಿ ಪಾವತಿಗೆ ಅವಕಾಶವಿದ್ದು, ಬಳಿಕ ರಾಷ್ಟ್ರೀಕೃತ ಬ್ಯಾಂಕ್ ಮೂಲಕವೇ ತೆರಿಗೆ ಮತ್ತು ನೀರಿನ ಬಿಲ್ ಸಂಗ್ರಹಿಸಲಾಗುವುದು. ಬಳಕ ಮಂಗಳೂರು ವನ್ನಲ್ಲಿ ಮಹಾನಗರ ಪಾಲಿಕೆಯ ಪಾವತಿಗಳನ್ನು ಸ್ಥಗಿತಗೊಳಿಸಲಾುವುದು ಎಂದು ಅವರು ತಿಳಿಸಿದರು.
ಮಂಗಳೂರು ವನ್ ಸೇವಾ ಕೇಂದ್ರಗಳ ಹಣಕಾಸು ವ್ಯವಹಾರದ ಬಗ್ಗೆ ಕೇಂದ್ರೀಯ ಲೆಕ್ಕ ತಪಾಸಣೆ ತಂಡ 2016ರ ೇ.11ರಂದು ನೀಡಿರುವ ವಿಚಾರಣಾ ವರದಿಯಲ್ಲಿ ಸಂಗ್ರಹಿಸಲಾದ ಆಸ್ತಿ ತೆರಿಗೆ ಮೊತ್ತ ಮತ್ತು ಬ್ಯಾಂಕ್ ಖಾತೆಯಲ್ಲಿ ಜಮೆಯಾದ ಮೊತ್ತದಲ್ಲಿ 19,20,508 ರೂ. ವ್ಯತ್ಯಾಸವಿರುವ ಹಿನ್ನೆಲೆಯಲ್ಲಿ ಈ ಬದಲಾವಣೆಗೆ ತೀರ್ಮಾನಿಸಲಾಗಿೆ ಎಂದು ಶಶಿಧರ್ ಹೆಗ್ಡೆ ತಿಳಿಸಿದರು.
ಘನತ್ಯಾಜ್ಯ ಕರ ಪರಿಷ್ಕರಣೆಗೆ ಅನುಮೋದನೆ
ಮನಪಾ ಸಭಾಂಗಣದಲ್ಲಿ ಮಾರ್ಚ್ 8ರಂದು ನಡೆದ ಬಜೆಟ್ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ಘನತ್ಯಾಜ್ಯ ಕರ ಪರಿಷ್ಕರಣೆಯನ್ನು ಮನಪಾ ಸಾಮಾನ್ಯ ಭೆಯಲ್ಲಿಂದು ಅನುಮೋದಿಸಲಾಯಿತು.
ಸಾಕು ನಾಯಿಗೆ ಪರವಾನಿಗೆ ಕಡ್ಡಾಯ! 300 ರೂ. ಶುಲ್ಕ- ವಿಪಕ್ಷ ಆಕ್ಷೇಪ
ಮನಪಾ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಪರವಾನಿಗೆ ಕಡ್ಡಾಯಗೊಳಿಸುವ ಹಾಗೂ ತಲಾ 300 ರೂ. ಶುಲ್ಕ ಪಾವತಿಸುವ ಕುರಿತಾದ ನಿರ್ಣಯಕ್ಕೆ ಇಂದಿನ ಸೆಯಲ್ಲಿ ಅನುಮೋದನೆ ನೀಡಲಾಯಿತು.
ಮನಪಾ ವ್ಯಾಪ್ತಿಯಲ್ಲಿ ನಾಯಿಗಳ ಸಂತಾನೋತ್ಪತ್ತಿಯನ್ನು ಕಡಿಮೆ ಮಾಡುವ ಬಗ್ಗೆ ನಾಯಿಗಳ ಸರ್ವೆ, ಸಾಕು ನಾಯಿಗಳಿಗೆ ಪರವಾನಿಗೆ ನೀಡುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಪ್ರತಿ ವರ್ಷ ಮಾರ್ಚ್ 31ರೊಳಗೆ ಸಾಕು ನಾಯಿಗಳಿಗೆ ಪರವಾನಿಗೆಯನ್ನು ನವೀಕರಿಸುವುದು ಸೇರಿದಂತೆ ವಿವಿಧ ಷರತ್ತುಗಳಿಂದ ಕೂಡಿದ ಕಾರ್ಯಸೂಚಿಯನ್ನು ಅನುಮೋದಿಸಲಾಯಿತು.
ಬೀದಿ ನಾಯಿಗಳ ಕಾಟವನ್ನು ತಡೆಯುವ ದೃಷ್ಟಿಯಿಂದ ಈ ಹೆಜ್ಜೆ ಉತ್ತಮವಾಗಿದ್ದರೂ ಸಾಕು ನಾಯಿಗಳಿಗೆ 300 ರೂ. ಶುಲ್ಕವನ್ನು ಸಂಗ್ರಹಿಸುವುದು ಸರಿಯಲ್ಲ ಎಂದು ವಿಪಕ್ಷ ಸದಸ್ಯು ಸಭೆಯಲ್ಲಿ ಆಕ್ಷೇಪಿಸಿದರು.