Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಗುಜರಾತ್ ವಿದ್ಯುತ್ ಘಟಕದ ಕುರಿತು ವಿಶ್ವ...

ಗುಜರಾತ್ ವಿದ್ಯುತ್ ಘಟಕದ ಕುರಿತು ವಿಶ್ವ ಬ್ಯಾಂಕ್ ವಿರುದ್ಧದ ಮೊಕದ್ದಮೆ ವಜಾ

ಅಮೆರಿಕ ಜಿಲ್ಲಾ ನ್ಯಾಯಾಧೀಶರ ತೀರ್ಪು

ವಾರ್ತಾಭಾರತಿವಾರ್ತಾಭಾರತಿ31 March 2016 11:43 PM IST
share

ನ್ಯೂಯಾರ್ಕ್, ಮಾ.31: ಗುಜರಾತ್‌ನ ವಿದ್ಯುತ್ ಘಟಕವೊಂದಕ್ಕೆ ಸಾಲ ನೀಡಿರುವ ಕುರಿತು ವಿಶ್ವ ಬ್ಯಾಂಕ್‌ನ ವಿರುದ್ಧ ಭಾರತೀಯ ಮೀನುಗಾರರು ಹಾಗೂ ರೈತರು ಹೂಡಿದ್ದ ಮೊಕದ್ದಮೆಯೊಂದನ್ನು ಅಮೆರಿಕ ಒಕ್ಕೂಟದ ನ್ಯಾಯಾಧೀಶರೊಬ್ಬರು ವಜಾಗೊಳಿಸಿದ್ದಾರೆ.

ವಿದ್ಯುತ್ ಘಟಕವು ಪರಿಸರವನ್ನು ನಾಶ ಗೊಳಿಸಿದೆಯೆಂದು ಅವರು ಆರೋಪಿಸಿದ್ದರು.
ವಿಶ್ವಬ್ಯಾಂಕ್‌ನ ಅಂತಾರಾಷ್ಟ್ರೀಯ ಹಣಕಾಸು ನಿಗಮವು (ಐಎಫ್‌ಸಿ) ರಕ್ಷಣೆಯನ್ನು ಹೊಂದಿದೆ. ಅದರ ವಿರುದ್ಧ ಅಮೆರಿಕದಲ್ಲಿ ಮೊಕದ್ದಮೆ ಹೂಡುವಂತಿಲ್ಲವೆಂದು ಅಮೆರಿಕದ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಆದೇಶ ನೀಡಿದ್ದಾರೆ.
ಕಲ್ಲಿದ್ದಲು ಇಂಧನಾಧಾರತಿ ಮುಂದ್ರಾ ವಿದ್ಯುತ್ ಘಟಕ ನಿರ್ಮಾಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ನಿಗಮವು 45 ಕೋಟಿ ಡಾಲರ್ ಸಾಲ ನೀಡಿತ್ತು. ಘಟಕವು 2013ರಲ್ಲಿ ಪೂರ್ಣ ಪ್ರಮಾಣದ ಉತ್ಪಾದನೆ ಆರಂಭಿಸಿತ್ತು.
ಯೋಜನೆಯನ್ನು ಅನುಷ್ಠಾನಗೊಳಿಸಿದ್ದ ಟಾಟಾ ಪವರ್‌ನ ಅಂಗ ಸಂಸ್ಥೆಯಾದ ಕೋಸ್ಟಲ್ ಗುಜರಾತ್ ಪವರ್ ಲಿಮಿಟೆಡ್, ಈ ಯೋಜನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ. 1.6ಕೋಟಿ ದೇಶೀಯ ಬಳಕದಾರರಿಗೆ ಲಾಭವಾಗುತ್ತದೆ ಹಾಗೂ ಕೈಗಾರಿಕೆಗಳಿಗೆ ಮತ್ತು ಕೃಷಿಗೆ ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್ ಒದಗಿಸುತ್ತದೆಂದು ಹೇಳಿತ್ತು.
ಆದರೆ, ಅದರಿಂದ ಪರಿಸರಕ್ಕೆ ಭಾರೀ ಹಾನಿಯಾಗಿದೆಯೆಂದು ಘಟಕದ ಬಳಿ ವಾಸಿಸುತ್ತಿರುವ ಬೆಸ್ತರು, ರೈತರು, ಮತ್ತಿತರರು ಆರೋಪಿಸಿದ್ದರು.
ವಿದ್ಯುತ್ ಘಟಕದಿಂದ ಸೋರಿಕೆಯಾಗುತ್ತಿರುವ ಉಪ್ಪು ನೀರು, ಅಂತರ್ಜಲವನ್ನು ಕುಡಿಯಲಾಗದಂತೆ ಹಾಗೂ ನೀರಾವರಿಗೆ ಯೋಗ್ಯವಲ್ಲದಂತೆ ಮಾಡಿದೆ. ಶೀರಲೀಕರಣ ವ್ಯವಸ್ಥೆಯ ಬಿಸಿ ನೀರು ಮೀನುಗಳಿಗೆ ಹಾನಿಯುಂಟು ಮಾಡಿದೆ ಹಾಗೂ ಗಾಳಿಯ ಗುಣಮಟ್ಟವನ್ನು ಕೆಡಿಸಿದೆಯೆಂದು ಕೊಲಂಬಿಯ ಜಿಲ್ಲೆಯಲ್ಲಿ ಕಳೆದ ವರ್ಷ ಹೂಡಿದ್ದ ಮೊಕದ್ದಮೆಯಲ್ಲಿ ಅವರು ಹೇಳಿದ್ದರು.
ನಿಧಿ ಒದಗಣೆ ಹಾಗೂ ಸಾಲದ ಮೇಲ್ವಿಚಾರಣೆಯಲ್ಲಿ ಐಎಫ್‌ಸಿ ಬೇಜವಾಬ್ದಾರಿ ಹಾಗೂ ನಿರ್ಲಕ್ಷ ತೋರಿಸಿದೆಯೆಂದು ಆರೋಪಿಸಿದ್ದ ದಾವೆದಾರರು, ತಮ್ಮ ಜೀವನ ಪದ್ಧತಿಯು ಮೂಲಭೂತವಾಗಿ ಬೆದರಿಕೆಗೊಳಗಾಗ ಬಹುದು ಅಥವಾ ನಾಶವಾಗಬಹುದೆಂದು ದೂರಿದ್ದರು.
ಆದರೆ, ಅಂತಾರಾಷ್ಟ್ರೀಯ ಸಂಘಟನೆಗಳ ರಕ್ಷಣಾ ಕಾಯ್ದೆಯನ್ವಯ,ಐಎಫ್‌ಸಿಯ ವಿರುದ್ಧ ಅಮೆರಿಕದಲ್ಲಿ ದಾವೆ ಹೂಡುವಂತಿಲ್ಲವೆಂದು ಅಮೆರಿಕದ ಜಿಲ್ಲಾ ನ್ಯಾಯಾಧೀಶ ಜೋನ್ ಬೇಟ್ಸ್ ಕಳೆದ ವಾರ ತೀರ್ಪು ನೀಡಿದ್ದಾರೆ.
ರೈತರು, ದಾವೆ ಹೂಡಿದ್ದ ಅಮೆರಿಕದ ಲಾಭೇತರ ಅರ್ತ್ ರೈಟ್ಸ್ ಇಂಟರ್ನ್ಯಾಶನಲ್‌ಗೆ ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿದ್ದಾರೆಂದು ಥಾಮನ್ಸ್ ರಾಯ್ಪುರ್ ಫೌಂಡೇಶನ್ ತಿಳಿಸಿದೆ.
 ಇದು ತಮ್ಮ ಜೀವ ಹಾಗೂ ಜೀವನಕ್ಕಾಗಿ ನಡೆಸುತ್ತಿರುವ ಹೋರಾಟವಾಗಿದೆ. ತಮಗೆ ಜಯ ಲಭಿಸುವುದೆಂದು ನಂಬಿದ್ದೇವೆ ಎಂದು ಪ್ರಕರಣದ ಒಂದು ಕಕ್ಷಿಯಾಗಿರುವ ನವೀನಾಲ್ ಪಂಚಾಯತ್‌ನ ಮುಖ್ಯಸ್ಥ ಗಜೇಂದ್ರ ಸಿಂಹ ಜಡೇಜಾ ಎಂಬವರು ಇ-ಮೇಲ್ ಒಂದರಲ್ಲಿ ಹೇಳಿದ್ದಾರೆ.
ಸಂಘಟನೆಯು ಸಕ್ರಿಯ ಕಾನೂನು ವಿಚಾರಗಳ ಕುರಿತಾಗಿ ಪ್ರತಿಕ್ರಿಯಿಸುವುದಿಲ್ಲ. ಕೋಸ್ಟಲ್ ಗುಜರಾತ್ ಪವರ್ ಜಾರಿಗೊಳಿಸುತ್ತಿರುವ ದೂರು ಪರಿಹಾರ ಕ್ರಮಗಳನ್ನೊಳಗೊಂಡಿದೆಯೆಂದು ಐಎಫ್‌ಸಿಯ ವಕ್ತಾರೆ ಹೇಳಿದರಾದರೂ, ಆ ಬಗ್ಗೆ ವಿವರ ನೀಡಲ್ಲ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X