ರಾಘವೇಶ್ವರ ಸ್ವಾಮೀಜಿ ವಿರುದ್ಧದ ಕೇಸು ವಜಾ : ಸುಳ್ಯದಲ್ಲಿ ಹವ್ಯಕ ಸಮಾಜದ ವಿಜಯೋತ್ಸವ
ಸುಳ್ಯ: ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ಸೆಶನ್ಸ್ ಕೋರ್ಟು ವಜಾ ಮಾಡಿದ್ದು, ಈ ಹಿನ್ನೆಲೆಯಲ್ಲಿ ಸುಳ್ಯ ಹವ್ಯಕ ಮಂಡಲದ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು.
ಸುಳ್ಯ ಶಿವಕೃಪಾ ಕಲಾಮಂದಿರದಲ್ಲಿ ಗುರುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ವಲಯ ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್ ಮಾತನಾಡಿ, ಪ್ರೇಮಲತಾ ಅವರು 3 ಕೋಟಿ ಸಿಗದ ಕಾರಣದಿಂದ ಸ್ವಾಮೀಜಿಯವರ ಮೇಲೆ ದುರುದ್ದೇಶದಿಂದ ಅತ್ಯಾಚಾರ ದೂರು ನೀಡಿದ್ದರು. ಇದನೆಲ್ಲಾ ಸಹಿಸದ ದೇವರು ದೈವಿರೂಪದಲ್ಲಿ ಬಂದು ಸ್ವಾಮೀಜಿಯವರ ಮೇಲಿನ ಕೇಸನ್ನು ವಜಾ ಮಾಡಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯ ಎಂದರು.
ಗಬ್ಬಲಡ್ಕ ಸುಬ್ರಹ್ಮಣ್ಯ ಭಟ್ ಮಾತನಾಡಿ, ಸ್ವಾಮೀಜಿಯವರ ಮೇಲಿನ ಕೇಸು ನಿಜಾವಾಗಿಯೂ ಸುಳ್ಳು ಎಂಬುದಾಗಿ ಕೋರ್ಟ್ ತೀರ್ಪು ನೀಡಿದೆ. ಇದರಿಂದ ಸ್ವಾಮೀಜಿಯವರು ನಿರಪಾರಾಧಿ ಎಂಬುದನ್ನು ಮತ್ತೊಮ್ಮೆ ಸಾಬೀತಾಗಿದೆ ಎಂದರು. ಮುಳ್ಳೇರಿಯಾ ಹವ್ಯಕ ಮಂಡಲ ಸುಳ್ಯ ವಲಯದ ಅಧ್ಯಕ್ಷ ಶ್ರೀಕೃಷ್ಣ ಭಟ್ ಮೀನಗದ್ದೆ, ಸುಳ್ಯ ವಲಯದ ಉಪಾಧ್ಯಕ್ಷ ಸದಾಶಿವ ಭಟ್, ಕಾರ್ಯದರ್ಶಿ ಲಕ್ಷ್ಮೀನಾರಾಯಣ ಭಟ್, ಸುಳ್ಯ ವಲಯದ ಅಧ್ಯಕ್ಷ ಶ್ರೀಕೃಷ್ಣ ಭಟ್ ಹಾಗೂ 150 ಮಂದಿ ಸದಸ್ಯರು ವಿಜಯೋತ್ಸವದಲ್ಲಿ ಭಾಗವಹಿಸಿದರು.