‘ಉಂದು ದುಂಬುದ’ ಧ್ವನಿಸುರುಳಿ ಬಿಡುಗಡೆ
ಬಂಟ್ವಾಳ, ಎ.2: ತುಳು ರಂಗಭೂಮಿಯ ಹವ್ಯಾಸಿ ಹಾಗೂ ವೃತ್ತಿಪರ ಕಲಾವಿದ ರಿಂದ ರಚಿತಗೊಂಡ ಹಳೆಯ ತುಳು ನಾಟಕಗಳ ಹಾಡುಗಳು ೞಉಂದು ದುಂಬುದ
ೞಎನ್ನುವ ಧ್ವನಿಸುರುಳಿ ಇತ್ತೀ ಚೆಗೆ ಬಿಡುಗಡೆಗೊಂಡಿತು. ಕವಿ, ಸಾಹಿತಿ, ಉದ್ಯಮಿ ಹನೀಫ್ ಪರ್ಲಿಯ ನೇತೃತ್ವದಲ್ಲಿ ಸಿದ್ಧಗೊಂಡಿರುವ ಈ ಧ್ವನಿ ಸುರುಳಿಯನ್ನು ಸಾಹಿತಿ ಇಬ್ರಾಹೀಂ ತಣ್ಣೀರು ಬಾವಿ, ಹಿರಿಯ ನಾಟಕ ರಚನಾಕಾರ ಬಿ.ಆರ್.ಕುಲಾಲ್, ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೌನೇಶ ವಿಶ್ವಕರ್ಮ ಬಿಡುಗಡೆಗೊಳಿಸಿದರು.
ಈ ಧ್ವನಿ ಸುರುಳಿಯಲ್ಲಿನ ಹಾಡು ಗಳನ್ನು ರಹೀಂ, ಅಪೋಲೋ ಅಶ್ರಫ್, ಮುಹಮ್ಮದ್ ಹನೀಫ್ ಪರ್ಲಿಯಾ, ಶರೀಫ್ ಪರ್ಲಿಯ, ಮಲ್ಲಿಕಾ ಶೆಟ್ಟಿ, ಹಮೀದ್ ಕಡೂರು ಮತ್ತು ಬಿ.ರಾಮ ಚಂದ್ರ ರಾವ್ ಹಾಡಿದ್ದಾರೆ.
ಪತ್ರಕರ್ತರಾದ ರತ್ನದೇವ್ ಪೂಂಜಾ ಲಕಟ್ಟೆ, ಫಾರೂಕ್ ಗೂಡಿನಬಳಿ, ರಾಜಾ ಬಂಟ್ವಾಳ, ಪಿ.ಎ.ರಹೀಂ, ಕಲಾವಿದ ಎಚ್ಕೆ ನಯನಾಡು, ವೈಭವ್ ಮ್ಯೂಸಿಕಲ್ನ ಭಾಸ್ಕರ್ ರಾವ್ ಮತ್ತು ಹಾಡುಗಾರರು, ಕಲಾವಿದರು ಮತ್ತಿತರರು ಉಪಸ್ಥಿತರಿದ್ದರು. ಬಿ. ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.