ಹಳ್ಳಿ ಹುಡುಗನ ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಿ
ಹೆಬ್ರಿ, ಎ.2: ಕಾರ್ಕಳ ತಾಲೂಕು ಹೊಸ್ಮಾರು ಕೊರಂಟ ಬೆಟ್ಟು ಗಂಗೇನೀರು ನಿವಾಸಿ ಪ್ರೇಮಾ ಆಚಾರ್ಯರ 8 ವರ್ಷ ಪ್ರಾಯದ ಪುತ್ರ ಪ್ರಣಮ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಹೆಚ್ಚಿನ ಚಿಕಿತ್ಸೆಗೆ ಸಹೃದಯಿಗಳ ನೆರವು ಕೋರಿದ್ದಾರೆ. ವಿದ್ಯಾರ್ಥಿಯಾಗಿರುವ ಪ್ರಣಮ್ನ ತಂದೆ ಇತ್ತೀಚೆಗಷ್ಟೆ ಮೃತರಾಗಿದ್ದು, ಯಜಮಾನನನ್ನು ಕಳೆದುಕೊಂಡ ಕುಟುಂಬಕ್ಕೆ, ಮನೆಯ ಪುಟ್ಟ ಕಂದ ರಕ್ತ ಕ್ಯಾನ್ಸರಿಗೆ ತುತ್ತಾಗಿರುವುದು ಆತಂಕಕ್ಕೀಡು ಮಾಡಿದೆ. ಇದೀಗ ಸಂಬಂಧಿಕರ ಆಸರೆಯಲ್ಲಿ ಮುದ್ರಾಡಿಯ ಬೆಳಗುಂಡಿಯಲ್ಲಿ ವಾಸವಿರುವ ಪ್ರೇಮಾ, ಈಗಾಗಲೇ ಲಕ್ಷಾಂತರ ರೂ. ಸಾಲ ಮಾಡಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.ಮುಂದೆ ಹೆಚ್ಚಿನ ಚಿಕಿತ್ಸೆಗೆ ಸುಮಾರು 6 ಲಕ್ಷ ರೂ.ಗಳ ಅಗತ್ಯವಿದ್ದು ಹಣ ಹೊಂದಿಸಲು ಕುಟುಂಬಕ್ಕೆ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ಸಂಘಸಂಸ್ಥೆಗಳ ನೆರವಿಗೆ ಪ್ರಾರ್ಥಿಸಿದ್ದಾರೆ. ನೆರವು ನೀಡಲು ಇಚ್ಛಿಸುವವರು ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಖಾತೆ ನಂಬ್ರ 89050102467(ಐಎಫ್ಎಸ್ಸಿ ಕೋಡ್- ಕೆವಿಜಿಬಿ 0008003) ಇಲ್ಲಿಗೆ ಹಣ ಕಳುಹಿಸಬಹುದು. ಹೆಚ್ಚಿನ ವಿವರಗಳಿಗೆ ಮೊ.ಸಂ.: 9480870706ನ್ನು ಸಂಪರ್ಕಿಸುವಂತೆ ಕೋರಲಾಗಿದೆ.