Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಸುರತ್ಕಲ್ : ರಾಜಕೀಯದೊಂದಿಗೆ ಧರ್ಮ...

ಸುರತ್ಕಲ್ : ರಾಜಕೀಯದೊಂದಿಗೆ ಧರ್ಮ ಸೇರಿಕೊಂಡರೆ ಸರ್ವನಾಶ ಖಂಡಿತ - ಎಸ್.ಆರ್. ಹಿರೇಮಠ್

ವಾರ್ತಾಭಾರತಿವಾರ್ತಾಭಾರತಿ3 April 2016 8:24 PM IST
share
ಸುರತ್ಕಲ್ : ರಾಜಕೀಯದೊಂದಿಗೆ ಧರ್ಮ ಸೇರಿಕೊಂಡರೆ ಸರ್ವನಾಶ ಖಂಡಿತ - ಎಸ್.ಆರ್. ಹಿರೇಮಠ್


 “ ಸುರತ್ಕಲ್, ಎ.3: ರಾಜಕೀಯದೊಂದಿಗೆ ಧರ್ಮ ಸೇರಿಕೊಂಡರೆ ಸರ್ವನಾಶ ಕಂಡಿತ. ಹೆತ್ತವರು ಮಾಡುವ ಧರ್ಮದ ಪಾಠ ಮತ್ಯಾರೋ ಮಾಡುವಂತಾಗಿದೆ ಇದು ದೇಶಕ್ಕೆ ಮಾರಕ. ಭಾರತ ರಾಜಕೀಯವಾಗಿ ಸ್ವರಾಜ್ಯ ಎನಿಸಿಕೊಂಡಿದೆ ಹೊರತು ಆರ್ಥಿಕ ಸಾಮಾಜಿಕವಾಗಿ ಸ್ವರಾಜ್ಯಗೊಂಡಿಲ್ಲ ಎಂದು ಹೋರಾಟಗಾರ ಎಸ್.ಆರ್. ಹಿರೇಮಠ್ ಹೇಳಿದರು. ಅವರು ಕೃಷಿಭೂಮಿ ಸಂರಕ್ಷಣಾ ಸಮಿತಿ ಕುತ್ತೇತ್ತೂರಿನಲ್ಲಿ ಆಯೋಜಿಸಿದ್ದ ಎಂ.ಆರ್.ಪಿ.ಎಲ್‌ನ ಬೃಹತ್ ವಿಸ್ತರಣಾ ಯೋಜನೆಯ ಹಿನ್ನೆಲೆ ರೂಪಿಸಲಾಗಿದ್ದ ಬೃಹತ್ ಯೋಜನೆಗಳು- ಭೃಷ್ಟಾಚಾರ- ಜನವಿರೋಧ”  ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವ ಎಲ್ಲರಿಗೂ ಸಮಾನತೆಯನ್ನು ಕಲ್ಪಸಿದೆಯಾದರೂ ಇಲ್ಲಿನ ಧರ್ಮ ಪ್ರೇರಿತ ರಾಜಕೀಯ ಕೃಷಿಕರನ್ನು ಹೊಸಕಿ ಹಾಕಲು ಹುನ್ನಾರ ನಡೆಸುತ್ತಿದೆ. ಸ್ವಾತಂತ್ಯ ಪೂರ್ವದಿಂದಲೂ ಬಂದಿರುವ ಎಲ್ಲಾ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸ್ವಾರ್ಥ ಸಾಧನೆಯನ್ನಷ್ಟೇ ಮಾಡುತ್ತ ಬಂದಿದೆ. ಅಭಿವೃದ್ಧಿಯ ಮಾತುಗಳನ್ನಾಡುತ್ತಿರುವ ಕಾರ್ಪೊರೇಟ್ ಕಂಪೆನಿಗಳಿಗೆ ನೈತಿಕತೆಯೇ ಇಲ್ಲ. ಅವುಗಳು ಈ ವರೆಗೂ ಬಡಪಾಯಿ ರೈತರಿಗೆ ಕವಡೆ ಕಾಸಿನ ಬೆಲೆ ನೀಡಿಲ್ಲ ಎಂದ ಹರೇಮಠ್, ಸಹಕಾರಿ ಕ್ಷೇತ್ರದ ಬುಡ ಗಟ್ಟಿಗೊಳಿಸಿದರೆ ರೈತರು ಸಧೃಡರಾಗಿ ಕಂಪೆನಿಗಲನ್ನು ಎದುರಿಸಲು ಸಶಕ್ತರಾಗಲಿದ್ದಾಋಎ ಎಂದರು.
 ನೈಸರ್ಗಿಕ ದತ್ತ ವಸ್ತುಗಳನ್ನು ಭಟ್ಟಭದ್ರ ಹಿತಾಸಕ್ತಿಗಳು ಹಾಳುಮಾಡುತ್ತಿವೆ ಇದನ್ನು ಕಂಡು ಸುಮ್ಮನಿರುವ ಸಂಗತಿ ಇಲ್ಲ. ಪೊಲೀಸರ ಅಸ್ತ್ರಕಿಂತಲೂ ಹೋರಾಟಗಾರರು ವಿನಯದಿಂದ ತಮ್ಮ ಪ್ರತಿಭಟನೆಯನ್ನು ನಡೆಸಬೇಕು. ಜನ ಶಕ್ತಿ ಹೋರಾಟದ ಇಂಜಿನ್ ಆಗಬೇಕು ಎಂದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಚೆರ್ರಿ ಪಾಯಸ್, ಪ್ರಜಾಪ್ರಭುತ್ವ ದೇಶದಲ್ಲಿ ಬಡವರು ರೈತರಿಗೆ ನ್ಯಾಯ ಮರೀಚಿಕೆಯಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಕಾಡುಜನರು ಮತ್ತು ಅವರ ಸಂಸ್ಕೃತಿಗೆ ಕೊಡಲಿ ಏಟುಗಳು ನೀಡಲಾಗುತ್ತಿದೆ. ದೇಶದಲ್ಲಿ ಭಯಬೀತಿಯ ವಾತಾವರಣ ಇದ್ದು, ರೈತರು ಬಡವರನ್ನು ಹೆದರಿಸಿ ಬೆದರಿಸಿ ಭೂಮಿಗಳನ್ನು ಕಿತ್ತುಕೊಳ್ಳಲಾಗುತ್ತಿದೆ ಎಂದರು. ಸಭೆಯಲ್ಲಿ ಸಮೀತಿಯ ಅಧ್ಯಕ್ಷ ಮಧುಕರ ಅಮೀನ್, ಉಪಾಧ್ಯಕ್ಷ ವಿಲಿಯಂ ಡಿಸೋಜಾ, ಕೃಷಿಕ ಲಾರೆನ್ಸ್ ಡಿಕುನ್ಹಾ ಮೊದಲಾದವರು ಉಪಸ್ಥಿತರಿದ್ದರು.

ಈ ವೇಳೆ ಕೈಗೊಂಡ ನಿರ್ಣಯಗಳು,

1 ಕೃಷಿ ಭೂಮಿಯಲ್ಲಿ ಕೃಷಿಯೇತರ ಕೈಗಾರಿಕೆಗೆ ನೀಡಬಾರದು.
2 ಭೂ ಬಳಕೆಯ ನಿಯಮ ಜಾರಿಯಾಗಬೇಕು.
3 ಹುಲುವವನೇ ಹೊದೊಡೆಯ ನೀತಿ ಮತ್ತೆ ಗಟ್ಟಿಯಾಗಿ ಪುನಸ್ಥಾಪಿತ ಗೊಳಿಸಬೇಕು.
4 ಸಹಕಾರಿ ಕ್ಷೇತ್ರಗಳನ್ನು ಬಲವರ್ಧನೆ ಗೊಳಿಸುವುದು.


ಇದೇ ವೇಳೆ ಗ್ರಾಮಸ್ಥರಿಗೆ ಹಿರೇಮಠ್‌ರೊಂದಿಗೆ ಪ್ರಶ್ನೋತ್ತರ ಸಮಯವನ್ನು ಕಲ್ಪಿಸಲಾಗಿತ್ತು. ಹಲವರು ತಮ್ಮ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು ಮತ್ತು ಹೋರಾಟದ ರೂಪುರೇಶೆಗಳನ್ನು ತಯಾರಿಸುವ ಬಗ್ಗೆ ಹಿರೇಮಠ್ ಗ್ರಾಮಸ್ಥರಿಗೆ ತಿಳಿಹೇಳಿದರು.

ಎಂಆರ್‌ಪಿಎಲ್ ಮತ್ತು ಎಸ್‌ಇಝೆಡ್ ಮಂಗಳೂರು ತಾಲೀಕಿನಿ ತೋಕೂರು, ಬೈಕಂಪಾಡಿ, ತಣ್ಣೀರು ಬಾವಿ, ಕಳವಾರು, ಬಾಳ, ಜೋಕಟ್ಟೆ, ಪೆರ್ಮುದೆ, ಕುತ್ತೆತ್ತೂರು, ಸೂರಿಂಜೆ ಮತ್ತು ದೆಲಮತಬೆಟ್ಟು ಪರಿಸರದಲ್ಲಿ ಕೃಷಿಕರಿಂದ ವಶಪಟಿಸಿ ಕೊಂಡಿರುವ ಸಾವಿರಾರು ಎಕ್ಕರೆ ಭೂಮಿಯಲ್ಲಿ ಬಳಕೆಯಾಗಿರುವ ಭೂಮಿ, ಬಳಕೆಯಾಗದಿರುವ ಭೂಮಿಯ ಲೆಕ್ಕಾಚಾರಗಳು ಸೇರಿದಂತೆ ಹಲವು ಪ್ರಶ್ನೆಗಳನ್ನು ಆರ್‌ಟಿಐಯಡಿ ಎಲ್ಲಾ ಗ್ರಾಮಸ್ಥರು ಸೇರಿ ಸರಕಾರದಿಂದ ಪಡೆಯುವ ಬಗ್ಗೆ ಪ್ರತಿಜ್ಞೆ ಮಾಡಲಾಯಿತು.

ಸಭೆ ಆರಂಭಕ್ಕೂ ಮೊದಲು ಎಂಆರ್‌ಪಿಎಲ್ ಕಂಪೆನಿಯ ಮಾಹಿತಿದಾರರಿಬ್ಬರನ್ನು ಸ್ಥಳೀಯರು ತರಾಟೆಗೆ ತೆಗೆದು ಕೊಂಡ ಘಟನೆ ನಡೆಯಿತು. ಉತ್ತರ ಕನ್ನಡ ಮೂಲದ ಸತೀಶ್ ಮತ್ತು ಚೇತನ್ ಎಂಬಿಬ್ಬರನ್ನು ಸ್ಥಳೀಯರು ತರಾಟೆಗೆ ತೆಗೆದು ಕೊಂಡು ಹಲ್ಲೆ ಮುಂದಾದರು. ಅಲ್ಲದೆ, ಕಂಪೆನಿಯ ಅಧಿಕಾರಿಗಳಿಗೆ ಫೋನಾಯಿಸಿ ಸ್ಥಳಕ್ಕೆ ಬರುವಂತೆ ಸ್ಥಳೀಯರು ತಿಲಿಸಿದರದರೂ ಮರು ಉತ್ತರ ಬರದಿದ್ದ ಕಾರಣ ಯುವಕರಿಬ್ಬರ ಮೊಬೈಲ್ ಫೋನ್‌ಗಳನ್ನು ಸ್ಥಳೀಯರು ವಶಕ್ಕೆ ಪಡೆದು ದಿಗ್ಭಂಧನ ವಿಧಿಸಿ ಸಭೆಯಲ್ಲಿ ಭಾಗವಹಿಸುವಂತೆ ಮಾಡಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X