ಕೊಣಾಜೆ: ಬ್ಯಾರಿಕೇಡ್ ಉದ್ಘಾಟನೆ
ಉಳ್ಳಾಲ, ಎ.3: ಮಂಗಳೂರು-ಕೊಣಾಜೆ ರಸ್ತೆಯಲ್ಲಿ ವಾಹನ ಸಂಚಾರ ದಟ್ಟವಾಗಿರುವುದರಿಂದ ಸಂಚಾರವನ್ನು ನಿಯಂತ್ರಿಸುವ ಸಲುವಾಗಿ ಅಲ್ ಮದೀನ ಸಂಸ್ಥೆಯ ವತಿಯಿಂದ ನಿರ್ಮಿಸಿದ ಬ್ಯಾರಿಕೇಡ್ನ್ನು ಮಂಗಳೂರು ಪೊಲೀಸ್ ಸಹಾಯಕ ಆಯುಕ್ತ ಕಲ್ಯಾಣ್ ಶೆಟ್ಟಿ ರವಿವಾರ ಉದ್ಘಾಟಿಸಿದರು. ಅಲ್ ಮದೀನ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ದುಆ ನೆರವೇರಿಸಿದರು. ಕೊಣಾಜೆ ಇನ್ಸ್ಪೆೆಕ್ಟರ್ ಅಶೋಕ್, ಎಸ್ಸೈ ಸುಧಾಕರ್, ಕೊಣಾಜೆ ಗ್ರಾಪಂ ಅಧ್ಯಕ್ಷ ಶೌಕತ್ ಕೊಣಾಜೆ, ಮಂಜನಾಡಿ ಗ್ರಾಪಂ ಅಧ್ಯಕ್ಷ ಮುಹಮ್ಮದ್ ಅಸೈ, ಸದಸ್ಯರಾದ ಕುಂಞಿಬಾವ ಕಲ್ಕಟ್ಟ, ಮುಹಮ್ಮದ್ ನಾಟೆಕಲ್, ಶೌಕತ್ ದೇರಳಕಟ್ಟೆ, ಪೊಡಿಯಬ್ಬ ಹಾಜಿ ಕಲ್ಕಟ್ಟ ಮೊದಲಾದವರು ಉಪಸ್ಥಿತರಿದ್ದರು. ಮುಹಮ್ಮದ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
Next Story