ಎ.9: ಕಂಚಿಲದಲ್ಲಿ ಬುರ್ದಾ ಮಜ್ಲಿಸ್
ಎ.3: ಬೊಳ್ಳಾಯಿ ಕಂಚಿಲದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ನ 5ನೆ ವಾರ್ಷಿಕೋತ್ಸವದ ಅಂಗವಾಗಿ ಬುರ್ದಾ ಮಜ್ಲಿಸ್ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮವು ಎ.9ರಂದು ಕಂಚಿಲ ಬಿ.ಕೆ. ಮೈದಾನದಲ್ಲಿ ನಡೆಯಲಿದೆ.
ಸೌಹಾರ್ದ ಸಂಗಮದ ಅಧ್ಯಕ್ಷತೆಯನ್ನು ಸಚಿವ ಬಿ. ರಮಾನಾಥ ರೈ ವಹಿಸುವರು. ಬುರ್ದಾ ಮಜ್ಲಿಸ್ ಕಾರ್ಯಕ್ರಮವನ್ನು ಬೊಳ್ಳಾಯಿ ಬಿಜೆಎಂನ ಮಾಜಿ ಖತೀಬ್ ಅಬ್ದುರ್ರಝಾಕ್ ಸಖಾಫಿ ಉದ್ಘಾಟಿಸಲಿದ್ದು, ಹಾಲಿ ಖತೀಬ್ ಅಬ್ಬಾಸ್ ಸಅದಿ ಅಲ್-ಅಫ್ಳಲಿ ಅಧ್ಯಕ್ಷತೆ ವಹಿಸುವರು. ಸೈಯದ್ ಮುಹಮ್ಮದ್ ಹಬೀಬ್ ಪೂಕೋಯ ತಂಙಳ್ ಪೆರುವಾಯಿ ದುಆಶೀರ್ವಚನಗೈಯುವರು.
ಕೇರಳ ಕೋಝಿಕ್ಕೋಡ್ನ ಖುತುಬುಝ್ಝಮಾನ್ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story