ಪಾಣೆಮಂಗಳೂರು ನೂತನ ಮೀನು ಮಾರುಕಟ್ಟೆ ಬಂಟ್ವಾಳ ಪುರಸಭೆಗೆ ಹಸ್ತಾಂತರ
ಮೀನು ಮಾರಟಗಾರರಿಗೆ ಶೀತಲೀಕರಣ ಪೆಟ್ಟಿಗೆ ವಿತರಣೆ
ಬಂಟ್ವಾಳ: ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಪಾಣೆಮಂಗಳೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಮೀನು ಮಾರುಕಟ್ಟೆ ಕಟ್ಟಡವನ್ನು ಬಂಟ್ವಾಳ ಪುರಸಭೆಗೆ ಹಸ್ತಾಂತರಿಸುವ ಸರಳ ಕಾರ್ಯಕ್ರಮ ಬುಧವಾರ ಪುರಸಭೆಯಲ್ಲಿ ನಡೆಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ ಅವರು ಮಾರುಕಟ್ಟೆ ಕಟ್ಟಡದ ಕೀಯನ್ನು ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ ಅವರಿಗೆ ಹಸ್ತಾಂತರಿಸಿದರು. ಇದೇ ವೇಳೆ ಮೀನು ಮಾರಾಟಗಾರರಿಗೆ ಶೀತಲೀಕರಣದ ಪೆಟ್ಟಿಗೆಯನ್ನು ಕೂಡಾ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ವ್ಯವಸ್ತಾಪಕಿ ಲೀಲಾವತಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ವಲಯಾಧಿಕಾರಿ ಹರಿಹರ ವಿ.ಹರಿಕಾಂತ, ಪುರಸಭಾ ಸದಸ್ಯರಾದ ವಸಂತಿ ಚಂದಪ್ಪ, ವಾಸು ಪೂಜಾರಿ, ಚಂಚಲಾಕ್ಷಿ, ಪ್ರಭಾ ಸಲ್ಯಾನ್ , ಸಂಜೀವಿ, ಮುಮ್ತಾರ್, ಭಾಸ್ಕರ್ ಟೈಲರ್, ಪ್ರವೀಣ್ ಕಿಣಿ, ನೋಬರ್ಟ್ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.
Next Story