ಕುಂಬಳೆ ವಿದ್ಯಾರ್ಥಿಗಳಿಗೆ ಸಲಿಂಗರತಿ ಕಿರುಕುಳ: ಮದ್ರಸಾ ಅಧ್ಯಾಪಕನ ಬಂಧನ
ಮಂಜೇಶ್ವರ : ವಿದ್ಯಾರ್ಥಿಗಳನ್ನು ತರಗತಿಗಳಲ್ಲಿ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣದಲ್ಲಿ ಮದ್ರಸಾ ಅಧ್ಯಾಪಕನೋರ್ವನನ್ನು ಕುಂಬಳೆ ಎಸ್.ಐ ಬೆಲ್ಬಿನ್ ಜೋಸ್ ಬಂಧಿಸಿದ್ದಾರೆ. ಬಂಧಿತನನ್ನು ಕಣ್ಣೂರು ಇರಿಕ್ಕೂರಿನ ಅಬ್ದುಲ್ಲ ಮೌಲವಿ(46) ಎಂದು ಗುರುತಿಸಲಾಗಿದೆ. ಮೌಲವಿಯನ್ನು ಇರಿಕ್ಕೂರಿನ ಮನೆಯಿಂದ ಬಂಧಿಸಲಾಗಿದೆ. ಇವರ ವಿರುದ್ದ ಕುಂಬಳೆ ಮಾವಿನ ಕಟ್ಟೆಯ ವಿದ್ಯಾರ್ಥಿಯ ಪೋಷಕರು ನೀಡಿದ ದೂರಿನಂತೆ ಒಂದು ತಿಂಗಳ ಹಿಂದೆ ಕುಂಬಳೆ ಪೋಲೀಸರು ಪ್ರಕರಣ ದಾಖಲಿಸಿದ್ದರು. ಸಲಿಂಗರತಿ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿಗಳು ಮನೆಯವರಲ್ಲಿ ತಿಳಿಸಿದ್ದು ಇದರಂತೆ ಮನೆಯವರು ದೂರು ನೀಡಿದ್ದರು. ದೂರು ನೀಡಿರುವ ಬಗ್ಗೆ ಸರುತ ಅಬ್ದುಲ್ಲ ಬಳಿಕ ತಲೆ ಮರೆಸಿಕೊಂಡಿದ್ದರು.
Next Story