Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂಘ ಪರಿವಾರದ ಗಾಳಕ್ಕೆ ಸಿಲುಕುತ್ತಿರುವ...

ಸಂಘ ಪರಿವಾರದ ಗಾಳಕ್ಕೆ ಸಿಲುಕುತ್ತಿರುವ ದಲಿತರು

- ವೀರಪ್ಪ. ಡಿ.ನ್‌. ಮಂಗಳೂರು- ವೀರಪ್ಪ. ಡಿ.ನ್‌. ಮಂಗಳೂರು6 April 2016 11:49 PM IST
share

ಮಾನ್ಯರೆ, ಸಂಘ ಪರಿವಾರದವರು ದಿನಕ್ಕೊಂದು ಹೊಸ ಪ್ರಚೋದನಾಕಾರಿ ಹೇಳಿಕೆ ನೀಡಿ ದಲಿತರನ್ನು ಮತ್ತು ಅಲ್ಪಸಂಖ್ಯಾತರನ್ನು ಅವಮಾನಿಸುತ್ತಲೇ ಇರುತ್ತಾರೆ. ಆದರೆ ದಲಿತ ಸಂಘಟನೆಗಳು ಬಾಯಿ ಮುಚ್ಚಿ ಕುಳಿತಿವೆ. ವಿಪರ್ಯಾಸವೆಂದರೆ ನಮ್ಮ ಕರ್ನಾಟಕದಲ್ಲಿ ಮನುವಾದಿ ಸಂಘ ಪರಿವಾರದೊಳಗೂ ಒಂದು ದಲಿತರ ಅಂಗ ಸಂಸ್ಥೆ ಹುಟ್ಟಿಕೊಂಡಿದೆ. ಹಿಂದೂ ಮಹಾಸಭಾದಂತೆ ಅದಕ್ಕೆ ದಲಿತ ಮಹಾಸಭಾ ಎಂದು ಹೆಸರಿಡಲಾಗಿದೆ. ಕೆಲವು ಸಮಯ ಸಾಧಕ ದಲಿತರು ಮನುವಾದಿಗಳೊಂದಿಗೆ ಕೈ ಜೋಡಿಸಿ ಮನುವಾದದ ಬದ್ಧ ವೈರಿಯಾದ ಡಾ.ಅಂಬೇಡ್ಕರರಿಗೇ ನೇರ ಅವಮಾನ ಮಾಡುತ್ತಿದ್ದಾರೆ. ನಿನ್ನೆ ಲಕ್ನೋದಲ್ಲಿ ಯುಪಿಯ ಮಹಿಳಾ ಮೋರ್ಚಾದ ನಾಯಕಿ ಮಧು ಮಿಶ್ರಾ ಎಂಬ ತಲೆತಿರುಕಿ ಹೇಳಿದ್ದೇನು ಗೊತ್ತೇ? "ಇಂದು ಸಂವಿಧಾನದ ನೆರವಿನೊಂದಿಗೆ ನಮ್ಮನ್ನು ಆಳುತ್ತಿರುವವರು ಹಿಂದೊಮ್ಮೆ ನಮ್ಮ ಚಪ್ಪಲಿಯನ್ನು ಶುಚಿಗೊಳಿಸುತ್ತಿದ್ದರು. ಒಂದು ಕಾಲದಲ್ಲಿ ನಾವು ಈ ಜನರ ನೆರಳು ಸಹ ನಮ್ಮ ಮೇಲೆ ಬಿದ್ದರೂ ಸಹಿಸುತ್ತಿರಲಿಲ್ಲ. ಆದರೂ ಮುಂದೊಂದು ದಿನ ನಮ್ಮ ಮಕ್ಕಳು ಇವರನ್ನು ಜೀ ಹುಝೂರ್ ಎಂದು ಕರೆಯಬೇಕಾಗಬಹುದು. ಹಾಗಾಗಿ ದಲಿತರಂತಹ ಹಿಂದುಳಿದವರ ಅಭಿವೃದ್ಧಿಯ ವಿರುದ್ಧ ನಾವು ಸವರ್ಣೀಯರು ಯುದ್ಧ ಸಾರಬೇಕಾಗಿದೆ" ಎಂಬ ಅಣಿಮುತ್ತುಗಳನ್ನು ಈ ಮನುವಾದಿ ಮಹಿಳೆ ಉದುರಿಸಿದಳು. ಕೇವಲ ಬಾಯಿ-ನಾಲಿಗೆ-ಗಂಟಲು ಮಾತ್ರ ಈ ಮೂರ್ಖ "ಮಧು" ವಿಷ ಮಿಶ್ರಾಳದ್ದು, ಆದರೆ ಮೆದುಳು ಸಂಘ ಪರಿವಾರದ್ದು. ಅಂದರೆ ಅವಳು ಹೇಳಿದ್ದು ನಾಗಪುರ ಹೆಡ್ ಆಫೀಸಿನವರ ಮನದಾಳದ ಮಾತು. ಕಾಫೀ ಫಿಲ್ಟರ್ ನಂತಹ ಮೀಸೆ ಇರುವ "ಮನು" ಭಾಗವತನ ಹೃದಯದ ಮಾತಿದು. ಚಪ್ಪಲಿ ಶುಚಿಗೊಳಿಸುತ್ತಿದ್ದವರು ದೇಶ ಆಳುವುದು ತಪ್ಪಾದರೆ ಲೈಸೆನ್ಸ್ ಇಲ್ಲದೆ ರೈಲಿನಲ್ಲಿ ಚಹಾ ಮಾರುತ್ತಿದ್ದವನೂ ದೇಶ ಆಳುವುದು ತಪ್ಪುಲ್ಲವೆ? ಮೇಲಾಗಿ ನರೇಂದ್ರ ಮೋದಿ ಹಿಂದುಳಿದ ಗಾಣಿಗ ಜಾತಿಯವರು. ಗುಜರಾತ್‌ನಲ್ಲಿ ಬ್ರಾಹ್ಮಣರು, ಜೈನರು ಮತ್ತು ವೈಶ್ಯರು ಈಗಲೂ ಗಾಣಿಗರ ಮನೆಯಲ್ಲಿ ನೀರು ಕುಡಿಯುವುದಿಲ್ಲ. ಬಾಬಾ ರಾಮ್ ದೇವ್ ಹಿಂದುಳಿದ ಯಾದವ ಜಾತಿಯವರು. ಉತ್ತರ ಪ್ರದೇಶದ ಮೇಲ್ಜಾತಿಯವರು ಈಗಲೂ ಯಾದವ ಜಾತಿಯವರ ಮನೆಯಲ್ಲಿ ನೀರು ಕುಡಿಯುವುದಿಲ್ಲ. ಆದರೂ ಈತ ವೈದಿಕ ಪರಶುರಾಮನ ಮರಿಯಂತೆ ಭಾರತ್ ಮಾತಾಕಿ ಜೈ ಅನ್ನದ ಲಕ್ಷಾಂತರ ಮಂದಿಯ ತಲೆ ಕಡಿಯುತಾರಂತೆ. ಎಂತಹ ರಕ್ತಪಿಪಾಸುಗಳ ಗುಂಪು ಈಗ ನಮ್ಮ ದೇಶದ ಮೇಲೆ ಹತೋಟಿ ಸಾಧಿಸಿದೆ ನೋಡಿ. ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರ ದೇವಸ್ಥಾನ ಪ್ರವೇಶವನ್ನು ಮೇಲ್ಜಾತಿಯವರು ನಿಷೇಧಿಸಿದರು. ಮಂಡ್ಯದಲ್ಲಿ ದಲಿತ ಹುಡುಗನನ್ನು ಮದುವೆಯಾದ ಮೇಲ್ಜಾತಿಯ ಹುಡುಗಿಯ ಮರ್ಯಾದಾ ಹತ್ಯೆ ಮಾಡಿ ಅದನ್ನು ಆತ್ಮಹತ್ಯೆ ಎಂಬುದಾಗಿ ಬಿಂಬಿಸಲಾಯಿತು. ತಮಿಳುನಾಡಿನಲ್ಲಿ ದಲಿತ ಇಂಜಿನಿಯರ್ ಹುಡುಗ ಮೇಲ್ಜಾತಿ ಹುಡುಗಿಯನ್ನು ಪ್ರೇಮಿಸಿ ಮದುವೆಯಾದುದಕ್ಕ್ಕಾಗಿ ಅವನನ್ನು ನಡುಬೀದಿಯಲ್ಲಿ ಕೊಚ್ಚಿ ಕೊಲ್ಲಲಾಯಿತು. ಕರ್ನಾಟಕದ ಮುಜರಾಯಿ ಇಲಾಖೆಗೂ ಮೀಸಲಾತಿ ನೀತಿ ಅನ್ವಯ ಆಗುತ್ತಿದ್ದರೂ ಕರಾವಳಿಯಲ್ಲಿ ದಲಿತ ಸರಕಾರಿ ಅಧಿಕಾರಿಯನ್ನು ಯಾವುದೇ ವೈದಿಕ ದೇವಸ್ಥಾನದಲ್ಲಿ ಆಡಳಿತಾಧಿಕಾರಿಯಾಗಿ ನೇಮಿಸುತ್ತಿಲ್ಲ. ದೇವಸ್ಥಾನದಲ್ಲಿಯ ಇತರ ನೌಕರಿಯಲ್ಲೂ ಮೀಸಲಾತಿ ನೀತಿ ಅನುಸರಿಸುತ್ತಿಲ್ಲ. ದೇವಸ್ಥಾನದ ಕಸಗುಡಿಸುವುದಕ್ಕೂ ಬ್ರಾಹ್ಮಣರೇ ಬೇಕು. ಕೇವಲ ಕೆನೆಪದರಿನ ಒಂದಷ್ಟು ದಲಿತರಿಗೆ ಸರಕಾರಿ ನೌಕರಿ ಸಿಕ್ಕ ಕೂಡಲೇ ಇಡೀ ದಲಿತ ಜನಾಂಗದ ಉದ್ಧಾರ ಆಗುವುದಿಲ್ಲ. ಭಾರತದ ಪ್ರತಿಯೊಂದು ರಾಜ್ಯದಲ್ಲೂ ದಲಿತರ ಜೀವನ ದಿನೇ ದಿನೇ ದುರ್ಭರ ಆಗುತ್ತಾ ಹೋಗುತ್ತಿರುವಾಗ ದಲಿತರು ಭಾರತ್ ಮಾತಾ ಕಿ ಜೈ (ಜೈಲ್ ?) ಎನ್ನ ಬೇಕಂತೆ. ಇವತ್ತು ಡಾ.ಅಂಬೇಡ್ಕರರು ಇದ್ದಿದ್ದರೆ ಖಂಡಿತಾ ಅವರು ಭಾರತೀಯನಾಗಿ ಹುಟ್ಟಿದ್ದೇನೆ ಆದರೆ ಭಾರತೀಯನಾಗಿ ಸಾಯಲಾರೆ ಎಂದೂ ಹೇಳುತ್ತಿದ್ದರೇನೋ!. 

share
- ವೀರಪ್ಪ. ಡಿ.ನ್‌. ಮಂಗಳೂರು
- ವೀರಪ್ಪ. ಡಿ.ನ್‌. ಮಂಗಳೂರು
Next Story
X