Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿರ್ದಯವಾಗಿ ನಾಲ್ಕು ಸಿಕ್ಸ್ ಚಚ್ಚಿದ...

ನಿರ್ದಯವಾಗಿ ನಾಲ್ಕು ಸಿಕ್ಸ್ ಚಚ್ಚಿದ ಬ್ರಾತ್ ವೇಟ್ ನ ಹೃದಯ ವೈಶಾಲ್ಯ ನೋಡಿ

ಇಂಗ್ಲಂಡ್ ಬೌಲರ್ ಸ್ಟೋಕ್ಸ್ ತಾಯಿಗೆ ನೀಡಿದ ಸಂದೇಶ ಓದಿ

ವಾರ್ತಾಭಾರತಿವಾರ್ತಾಭಾರತಿ7 April 2016 10:20 PM IST
share
ನಿರ್ದಯವಾಗಿ ನಾಲ್ಕು ಸಿಕ್ಸ್ ಚಚ್ಚಿದ ಬ್ರಾತ್ ವೇಟ್ ನ ಹೃದಯ ವೈಶಾಲ್ಯ ನೋಡಿ

ಹೊಸದಿಲ್ಲಿ , ಎ.7: ಟಿ20 ವಿಶ್ವಕಪ್ ಫೈನಲ್ ಬಳಿಕ ವೆಸ್ಟ್ ಇಂಡೀಸ್ ನ ಕಾರ್ಲೋಸ್ ಬ್ರಾತ್ ವೇಟ್ ತನ್ನ ದೇಶದ ಪಾಲಿಗೆ ಹೀರೋ ಆಗಿದ್ದರೆ ಕೊನೆಯ ಓವರ್ ನಲ್ಲಿ ಸತತ ನಾಲ್ಕು ಸಿಕ್ಸ್ ಬಿಟ್ಟು ಕೊಟ್ಟ  ಇಂಗ್ಲಂಡ್ ಬೌಲರ್ ಬೆನ್ ಸ್ಟೋಕ್ಸ್ ಸ್ವಾಭಾವಿಕವಾಗಿಯೇ ಹಲವರ ಪಾಲಿಗೆ ವಿಲನ್ ಆಗಿದ್ದಾರೆ. ಆದರೆ ಅವರನ್ನು ದ್ವೇಷಿಸುವವರು , ಹೀಯಾಳಿಸುವವರು ಕೇವಲ ಇಂಗ್ಲಂಡ್ ಗೆ ಮಾತ್ರ ಸೀಮಿತವಾಗಿಲ್ಲ. ಅವರ ಜನ್ಮ ಸ್ಥಳ ನ್ಯೂಜ್ಹಿಲ್ಯಾಂಡ್ ನಲ್ಲೂ ಅವರಿಗೆ ಅಪಹಾಸ್ಯ ಎದುರಿಸಬೇಕಾಗಿ ಬಂದಿದೆ. ಸ್ಟೋಕ್ಸ್ ಬಾಲ್ಯದಲ್ಲೇ ನ್ಯೂಜ್ಹಿಲ್ಯಾಂಡ್ ನ ಕ್ರೈಸ್ಟ್ ಚರ್ಚ್ ನಿಂದ ಇಂಗ್ಲಂಡ್ ಗೆ ವಲಸೆ ಬಂದವರು.

ಟಿ೨೦ ವಿಶ್ವಕಪ್ ಫೈನಲ್ ಬಳಿಕ ನ್ಯೂಜ್ಹಿಲ್ಯಾಂಡ್ ರೇಡಿಯೋ ಸ್ಟೇಶನ್ ಒಂದರ ಇಬ್ಬರು ಜಾಕಿಗಳು ಸ್ಟೋಕ್ಸ್ ರನ್ನು ಕಾರ್ಯಕ್ರಮದಲ್ಲಿ ಹೀಯಾಳಿಸಿದರು. ಇದು ನ್ಯೂಜ್ಹಿಲ್ಯಾಂಡ್ ನಲ್ಲೇ ಇರುವ ಸ್ಟೋಕ್ಸ್ ಅವರ ತಾಯಿ ದೆಬೋರ ಅವರನ್ನು ಕೆರಳಿಸಿದೆ. ಈ ಬಗ್ಗೆ ದೂರು ನೀಡಲು ರೇಡಿಯೋ ಸ್ಟೇಶನ್ ಗೆ ಕಾಲ್ ಮಾಡಿದಾಗ ಅವರು ಮಾತನಾಡಿದ್ದನ್ನು ಸ್ಟೇಶನ್ ನವರು ನೇರವಾಗಿ ಕೇಳುಗರಿಗೆ ಪ್ರಸಾರ ಮಾಡಿಬಿಟ್ಟಿದ್ದಾರೆ. ಇದರಿಂದ ಅವಮಾನಿತರಾದ ದೆಬೋರ ಸ್ಟೇಶನ್ ಮಾಲಕರಿಗೆ ದೂರು ನೀಡಿದ್ದಾರೆ. ತಕ್ಷಣ ಜಾಕಿಗಳನ್ನು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ. 

ಆಗ ರಂಗ ಪ್ರವೇಶ ಮಾಡಿದವರು ಫೈನಲ್ ಪಂದ್ಯದ ಹೀರೋ ಕಾರ್ಲೋಸ್ ಬ್ರಾತ್ ವೇಟ್. 

ಬಿಬಿಸಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬ್ರಾತ್ ವೇಟ್ " ನನಗೆ ಆಕೆಯ ಬಗ್ಗೆ ಕನಿಕರವಿದೆ. ಆಕೆ ಯಾವತ್ತೂ ತನ್ನ ತಲೆ ಎತ್ತಿ ನಿಲ್ಲಬೇಕು, ಆಕೆಯ ಪುತ್ರ ಈಗಲೂ , ಮುಂದೆಯೂ ಅತ್ಯುತ್ತಮ ಆಟಗಾರ. ಆಕೆಗೆ ಇಡೀ ವೆಸ್ಟ್ ಇಂಡೀಸ್ ಹಾಗು ಭಾರತದಿಂದ ಬೆಂಬಲವಿದೆ ಎಂದು ನಾನು ಹೇಳಬಯಸುತ್ತೇನೆ. ನಿಜವಾಗಿ ನಾನು ಬೆನ್ ಜೊತೆ ಮಾತನಾಡಿದೆ. ನಮಗಿಬ್ಬರಿಗೂ ಪರಸ್ಪರರ ಮೇಲೆ ಯಾವುದೇ ದ್ವೇಷವಿಲ್ಲ. ಬೆನ್ ಅವರ ತಾಯಿ ಹೆಮ್ಮೆಯಿಂದ ನೆನಪಿಸುವಂತಹ ಹಲವು ಸಾಧನೆಗಳನ್ನು ಬೆನ್ ಮಾಡಲಿದ್ದಾರೆ. ಜನರೂ ಆ ಒಂದು ಪ್ರದರ್ಶನದ ಆಧಾರದಲ್ಲಿ ಬೆನ್ ಅವರ ಪ್ರತಿಭೆಯನ್ನು ಅಳೆಯಬಾರದು. ಅವರು ಮುಂದೊಂದು ದಿನ ಅತ್ಯುತ್ತಮ ಆಲ್ ರೌಂಡರ್ ಆಗಲಿದ್ದಾರೆ " ಎಂದು ಹೇಳಿದ್ದಾರೆ. 

ಇದಲ್ಲವೇ ನಿಜವಾದ ಹೀರೋನ ಗುಣ ? ವೆಸ್ಟ್ ಇಂಡೀಸ್ ಗೆ ವಿಶ್ವಕಪ್ ಗೆದ್ದು ಕೊಟ್ಟ ಬ್ರಾತ್ ವೇಟ್ ತಮ್ಮ ಸಾಂತ್ವನದ ಮಾತುಗಳ ಮೂಲಕ ಜಗತ್ತಿನ ಮನಸ್ಸನ್ನೂ ಗೆದ್ದುಬಿಟ್ಟರು. 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X