ಹೊಸಂಗಡಿ: ಜಗಜೀವನರಾಂ 109ನೆ ಜಯಂತಿ ಆಚರಣೆ
ಹೊಸಂಗಡಿ, ಎ.7: ಹೊಸಂಗಡಿಯ ಕೆಪಿಸಿ ಎನರ್ಜಿ ಕ್ಲಬ್ ಸಭಾಂಗಣದಲ್ಲಿ ಬಾಬು ಜಗಜೀವನ ರಾಂ ಅವರ 109ನೆ ಜಯಂತಿಯನ್ನು ಕೆಪಿಸಿ ಪರಿಶಿಷ್ಟ ಜಾತಿ, ಪಂಗಡಗಳ ನೌಕರರ ಸಂದ ಆಶ್ರಯದಲ್ಲಿ ಇತ್ತೀಚೆಗೆ ಆಚರಿಸಲಾಯಿತು. ಕರ್ನಾಟಕ ವಿದ್ಯುತ್ ನಿಗಮದ ವಾರಾಹಿ ಜಲವಿದ್ಯುತ್ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ (ಹೈಡಲ್)ಜಿ.ರತ್ನಮ್ಮ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಧೀಕ್ಷಕ ಅಭಿಯಂತರ (ವಾರಾಹಿ) ಎನ್.ಉದಯ ನಾಯ್ಕಾ ಮಾತನಾಡಿದರು. ಬಾಬು ಜಗಜೀವನ ರಾಂ ಜಯಂತಿ ಸಂಬಂಧ ಆಯೋಜಿಸಲಾಗಿದ್ದ ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಗರ ಎಚ್.ಎ. ಸ್ವಾಗತಿಸಿದರು. ಎಚ್.ಎಲ್. ಧರ್ಮೇಶ್ ಕಾರ್ಯಕ್ರಮ ನಿರೂಪಿಸಿದರು.
Next Story