ಕಾರಾಜೆ: ಪ್ರತಿಭಾ ಪುರಸ್ಕಾರ, ರಂಗಮಂದಿರ ಉದ್ಘಾಟನೆ
ಬಂಟ್ವಾಳ, ಎ.7: ರಾಜ್ಯದಲ್ಲಿ ಸರಕಾರಿ ಶಾಲೆಗೆ ಮೂಲಭೂತ ಸೌಕರ್ಯದ ಜೊತೆಗೆ ಗುಣ ಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಇದಕ್ಕಾಗಿ ಹೆಚ್ಚಿನ ಅನುದಾನ ಒದಗಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು. ತಾಲೂಕಿನ ಸಜಿಪಮೂಡ ಗ್ರಾಮದ ಕಾರಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣಗೊಂಡ ನೂತನ ರಂಗಮಂದಿರ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಪಂ ಅಧ್ಯಕ್ಷ ಗಣಪತಿ ಭಟ್, ಉಪಾಧ್ಯಕ್ಷೆ ಲೀನಾ ಮಿರಾಂಡ, ಗ್ರಾಪಂ ಸದಸ್ಯರಾದ ರಮೇಶ್ ಪಣೋಲಿಬೈಲು, ಹರೀಶ್ ಕುಲಾಲ್, ಸೀತಾರಾಮ, ಅಝೀಝ್ ಬೊಳ್ಳಾಯಿ, ಜಯಲಕ್ಷ್ಮೀ, ಗೀತಾ ಚಂಚಲಾಕ್ಷ, ತಾಪಂ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಮಾಜಿ ಸದಸ್ಯೆ ಪುಷ್ಪಾವತಿ, ಶಾಲಾಭಿವೃದ್ಧಿ ಸಮಿತಿ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಐತಾಳ್, ಲಿಂಗಪ್ಪ ಮೂಲ್ಯ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಾಯಿಬು, ಉಪಾಧ್ಯಕ್ಷೆ ಪವಿತ್ರಾ, ರವಿಕಲಾ, ಬೊಳ್ಳಾಯಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ನೀಲ್ಯ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಗ್ರೇಸಿ ಪಿಂಟೊ ಪ್ರಾಸ್ತಾವಿಕ ಮಾತನಾಡಿದರು. ಕೆ.ಗೋಪಾಲ್ ಸ್ವಾಗತಿಸಿ, ಮೀನಾದೇವಿ ವಂದಿಸಿದರು. ಸುಜಾತಾ ರೈ ಕಾರ್ಯಕ್ರಮ ನಿರೂಪಿಸಿದರು.