ಚುಟುಕು ಸುದ್ದಿಗಳು
ಉಪನ್ಯಾಸಕರ ಹೋರಾಟಕ್ಕೆ ಅಮುಕ್ತ್ ಬೆಂಬಲ
ಮಂಗಳೂರು, ಎ.8: ಕುಮಾರ್ ನಾಯಕ್ ವರದಿಯ ಅನುಷ್ಠಾನ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಿಯುಸಿ ವೌಲ್ಯ ಮಾಪನ ಬಹಿಷ್ಕರಿಸಿ ಮುಷ್ಕರ ನಡೆಸುತ್ತಿರುವ ಪದವಿಪೂರ್ವ ಉಪನ್ಯಾ ಸಕರ ಹೋರಾಟಕ್ಕೆ ಅಮುಕ್ತ್ ತನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದೆ.ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ವೌಲ್ಯಮಾಪನಬಹಿಷ್ಕಾರಕ್ಕೆ ಪರಿಹಾರವನ್ನು ಕಂಡುಕೊಂಡು ವಿದ್ಯಾರ್ಥಿ ಗಳ ಹಿತವನ್ನು ಕಾಯಬೇಕು ಎಂದು ಅಮುಕ್ತ್ ಸರಕಾರವನ್ನು ಆಗ್ರಹಿಸಿದೆ.ಕ್ಯಾ.ಕಾರ್ಣಿಕ್ ಬೆಂಬಲ: ಪಿಯುಸಿ ಉಪನ್ಯಾಸಕರು ವೌಲ್ಯ ಮಾಪನವನ್ನು ಬಹಿಷ್ಕರಿಸಿ ನಡೆಸುತ್ತಿರುವ ಮುಷ್ಕರಕ್ಕೆ ವಿಧಾನ ಪರಿಷ ತ್ನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿರುವ ಕ್ಯಾ.ಗಣೇಶ್ ಕಾರ್ಣಿಕ್ ಪೂರ್ಣ ಬೆಂಬಲವನ್ನು ಸೂಚಿಸಿದ್ದಾರೆ.
ನಾಳೆ ಉಚಿತ ವೈದ್ಯಕೀಯ ಶಿಬಿರ
ಮಂಗಳೂರು, ಎ.8: ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಸಾಯಿ ಫ್ರೆಂಡ್ಸ್ ಅಸೈಗೋಳಿ, ಯು.ಟಿ.ಫರೀದ್ ಫೌಂಡೇ ಶನ್ ಮಂಗಳೂರು, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ-ಮಂಗಳೂರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬದ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಎ.10ರಂದು ಅಸೈಗೋಳಿ ಕೇಂದ್ರ ಮೈದಾನದಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ನೇತ್ರ ತಪಾಸಣೆ ನಡೆಯಲಿದೆ.ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರವರೆಗೆ ತಪಾಸಣೆ ನಡೆಯಲಿದ್ದು, 1 ಗಂಟೆಯೊಳಗೆ ನೋಂದಣಿ ಮಾಡಬೇಕು. ಶಿಬಿರದಲ್ಲಿ ಕಣಚೂರು ಕ್ಯಾಂಪ್ ಕಾರ್ಡ್ ಹಾಗೂ ಕಣಚೂರು ಆರೋಗ್ಯ ಕಾರ್ಡ್ನ ಅರ್ಜಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಕೊಡಾಜೆ: ಇಂದು ಕ್ರಿಕೆಟ್ ಪಂದ್ಯಾಟ
ವಿಟ್ಲ, ಎ.8: ಆಝಾದ್ ಕ್ರಿಕೆಟರ್ಸ್ ಕೊಡಾಜೆ ಹಾಗೂ ಚಾಯ್ಸ್ ಕ್ರಿಕೆಟರ್ಸ್ ಪಂತಡ್ಕ ಇವುಗಳ ಜಂಟಿ ಆಶ್ರಯದಲ್ಲಿ ಮುಕ್ತ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟವು ಎ.9ರಂದು ರಾತ್ರಿ ಪಂತಡ್ಕ ಚಾಯ್ಸಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಪಂದ್ಯಾವಳಿ ಉದ್ಘಾಟಿಸುವರು. ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ಅಧ್ಯಕ್ಷತೆ ವಹಿಸುವರು. ವಿಜೇತ ತಂಡಗಳಿಗೆ ಪ್ರಥಮ ರೂ. 10,016, ದ್ವಿತೀಯ ರೂ. 7,016 ಹಾಗೂ ಅರಝಾದ್ ಟ್ರೋಫಿ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ
ಎಸ್ಡಿಪಿಐ ಚಿಂತನ ಮಂಥನ ಸಭೆ
ಊಟಿ, ಎ.8: ಎಸ್ಡಿಪಿಐ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸಮಿತಿಯ ಚಿಂತನ ಮಂಥನ ಸಭೆಯು ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ಅಬ್ದುಲ್ ಹನ್ನಾನ್ರ ಅಧ್ಯಕ್ಷತೆಯಲ್ಲಿ ತಮಿಳುನಾಡಿನ ಊಟಿಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಪಕ್ಷದ ಪ್ರಸ್ತುತ ಕಾರ್ಯವೈಖರಿ ಮತ್ತು ಭವಿಷ್ಯದಲ್ಲಿ ಪಕ್ಷದ ಕಾರ್ಯವೈಖರಿ ಹೇಗಿರಬೇಕು ಎಂಬುದರ ಬಗ್ಗೆ ರಾಜ್ಯ ಮತ್ತು ಜಿಲ್ಲಾ ನಾಯಕರು ತಮ್ಮ ವಿಚಾರ ಮಂಡಿಸಿದರು. ಮುಖ್ಯ ಅತಿಥಿಯಾಗಿದ್ದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ.ಸಯೀದ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹೋರಾಟ ಪ್ರಭಾವಶಾಲಿಯಾಗಿ ದೇಶ1 ಜನರ ಒಟ್ಟು ಹಿತಾಸಕ್ತಿಯನ್ನು ಕಾಪಾಡಬೇಕಾಗಿದೆ ಎಂದರು. ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ಲತೀಫ್ ಮತ್ತು ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಕಾರ್ಯದರ್ಶಿ ಅಕ್ರಂ ಹಸನ್ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ವಿಚಾರ ಮಂಡಿಸಿದರು. ಮುಂಬರುವ ಎಲ್ಲ ಸ್ಥಳೀಯ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ರಾಜ್ಯದ್ಯಂತ ಸ್ಪರ್ಧಿಸುವ ಬಗ್ಗೆ ಮಹತ್ವಪೂರ್ಣ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ವಂದಿಸಿದರು. ಉಪಾಧ್ಯಕ್ಷ ಪ್ರೊ.ಶಬ್ಬೀರ್ ಮುಸ್ತಫಾ, ರಾಜ್ಯ ಸಮಿತಿಯ ಸದಸ್ಯರಾದ ಕೂಸಪ್ಪಪುತ್ತೂರು ಮತ್ತು ಬಿಬಿಎಂಪಿ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಮುಜಾಹಿದ್ ಪಾಶಾ ಉಪಸ್ಥಿತರಿದ್ದರು.
ರಾಜ್ಯ ಸಮಿತಿಯ ಸದಸ್ಯ ರಿಯಾಝ್ ಫರಂಗಿಪೇಟೆ ಕಾರ್ಯಕ್ರಮ ನಿರೂಪಿಸಿದರು.
ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಎ. 8: ಜೆಪ್ಪು ಕುಡುಪಾಡಿ ರಸ್ತೆಯಲ್ಲಿರುವ ಬದ್ರಿಯಾ ಜುಮಾ ಮಸೀದಿ ಮತ್ತು ಹಯಾತುಲ್ ಇಸ್ಲಾಮ್ ಮದ್ರಸ ಸಮಿತಿಯ ಮಹಾಸಭೆ ಇತ್ತೀಚೆಗೆ ವಕ್ಫ್ ಸಮಿತಿಯ ಸದಸ್ಯ ಹಾಜಿ ಬಶೀರ್ ಅಧ್ಯಕ್ಷತೆಯಲ್ಲಿ ನಡೆಯಿತು. ಮಸೀದಿಯ ಖತೀಬ್ ಮುಹಮ್ಮದ್ ರಶೀದ್ ಸಅದಿಯವರ ದುಆದೊಂದಿಗೆ ಸಭೆ ಆರಂಭಗೊಂಡಿತು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೂಲರಪಟ್ನ ವರದಿ ವಾಚಿಸಿದರು.ಈ ಸಂದರ್ಭದಲ್ಲಿ ನೂತನ ಸಮಿತಿಯ ಆಯ್ಕೆ ನಡೆಯಿತು.ಹಾಜಿ ಹಸನಬ್ಬ, ಉಪಾಧ್ಯಕ್ಷರಾಗಿ ಹಾಜಿ ಮುಹಮ್ಮದ್ ಸ್ವಾಲಿಹ್, ಕೋಶಾಧಿಕಾರಿಯಾಗಿ ಹಾಜಿ ಮುಹಮ್ಮದ್ ಅಲಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮೂಲರಪಟ್ನ, ಜೊತೆ ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಸಹಿತ ಇತರ ಎಂಟು ಮಂದಿಯನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಉಪನ್ಯಾಸಕ ಹಾಜಿ ಮುಹಮ್ಮದ್ ಹನೀಫ್ ವೀಕ್ಷಕರಾಗಿ ಕಾರ್ಯನಿರ್ವಹಿಸಿದರು.
ಹಾಜಿ ಹಸನಬ್ಬ ವಂದಿಸಿದರು.
ಕನ್ಹಯ್ಯ ಸತ್ಯಘಟನೆ ಬಗ್ಗೆ ಕರಪತ್ರ
ತುಮಕೂರಿಗೆ ಮಂಗಳೂರಿನಿಂದ ತಂಡ
ಮಂಗಳೂರು, ಎ.8: ಜೆಎನ್ಯು ವಿದ್ಯಾರ್ಥಿ ನಾಯಕ ಕನ್ಹಯ್ಯಾಕುಮಾರ್ ವಿವಾದಕ್ಕೆ ಸಂಬಂಧಿಸಿ ನೈಜ ಘಟನೆಯ ಬಗ್ಗೆ ಕರಪತ್ರ ಹಂಚುತ್ತಿದ್ದ ಎಐಎಸ್ ಎಫ್ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸಿ ಎ.14ರಂದು ತುಮಕೂರಿನಲ್ಲಿ ಕರಪತ್ರ ಹಂಚಿ ಪ್ರತಿಭಟನೆ ನಡೆಯಲಿದೆ. ಆ ಪ್ರಯುಕ್ತ ಮಂಗಳೂರಿನಿಂದ ತಂಡವೊಂದು ಎ.13ರಂದು ತುಮಕೂರಿಗೆ ತೆರಳಲಿದೆ.
ಹಲ್ಲೆ ಘಟನೆ ನಡೆದು ಹಲವು ದಿನಗಳಾದರೂ ಆರೋಪಿಗಳನ್ನು ಪೊಲೀಸರು ಬಂಧಿಸದೇ ಇರುವುದರಿಂದ ಸಿಪಿಐ ಮತ್ತು ಎಐಟಿಯುಸಿಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಕರಪತ್ರ ಹಂಚಲು ತೀರ್ಮಾನಿಸಲಾಗಿದೆ.ಆ ಪ್ರಕಾರ ಮಂಗಳೂರಿನಿಂದ ಸಿಪಿಐ, ಎಐಟಿಯುಸಿ, ಎಐವೈಎಫ್, ಎಐಎಸ್ಎಫ್ ಕಾರ್ಯಕರ್ತರು ತುಮಕೂರಿಗೆ ತೆರಳಿ ಕರಪತ್ರ ಹಂಚುವ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟನೆ ತಿಳಿಸಿದೆ.
ಮೇ 1ರಂದು ರೊಸಾರಿಯೊಚರ್ಚ್ನಲ್ಲಿ ಸಾಮೂಹಿಕ ವಿವಾಹ
ಮಂಗಳೂರು, ಎ. 8: ನಗರದ ರೊಸಾರಿಯೊ ಚರ್ಚ್ ಅಧೀನದ ಸಂತ ವಿನ್ಸೆಂಟ್ ದಿ.ಪಾವ್ಲ್ ಸೊಸೈಟಿ ವತಿಯಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವು ಈ ಬಾರಿ ಮೇ 1ರಂದು ನಡೆಯಲಿದೆ.
ಕೆಥೊಲಿಕ್ ಕ್ರೈಸ್ತ ಜೋಡಿಗಳಿಗೆ ಮಾತ್ರ ಇದರ ಫಲಾನುಭವಿಗಳಾಗಲು ಅವಕಾಶ ಇದ್ದು, ಅಂತರ್ಜಾತಿ ಮತ್ತು ಎರಡನೆ ವಿವಾಹಕ್ಕೆ ಅವಕಾಶ ಇಲ್ಲ. ಆಸಕ್ತ ಜೋಡಿಗಳು ತಮ್ಮ ಹೆಸರನ್ನು ಎ.15ರೊಳಗೆ ರೊಸಾರಿಯೊ ಚರ್ಚ್ ಕಚೇರಿ ಅಥವಾ ಎಸ್.ವಿ.ಪಿ. ಅಧ್ಯಕ್ಷರಲ್ಲಿ ನೋಂದಾಯಿಸಿಕೊಳ್ಳಬಹುದು. ವಧು-ವರರಿಗೆ ಚಿನ್ನದ ಉಂಗುರ ಹಾಗೂ ಇತರ ಆಕರ್ಷಕ ಉಡುಗೊರೆಗಳನ್ನು ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಚರ್ಚ್ ಧರ್ಮಗುರು ರೆ.ಫಾ. ಜೆ.ಬಿ.ಕ್ರಾಸ್ತಾ ದೂ.ಸಂ.: 0824-2420942 ಅಥವಾ ಸಿ.ಜೆ.ಸೈಮನ್ ಮೊ.ಸಂ.:9844921299ನ್ನು ಸಂಪರ್ಕಿಸಲು ಪ್ರಕಟನೆಯಲ್ಲಿ ಕೋರಲಾಗಿದೆ.
ಇಂದಿನಿಂದ ರಜಬ್ ಆರಂಭ
ಮಂಗಳೂರು, ಎ. 8: ಎಪ್ರಿಲ್ 8ರಂದು ಮುಸ್ಸಂಜೆ ರಜಬ್ ತಿಂಗಳ ಚಂದ್ರದರ್ಶನವಾಗಿರುವುದರಿಂದ ಎ.9ರಂದು ರಜಬ್ 1 ಎಂದು ದ.ಕ. ಜಿಲ್ಲಾ ಖಾಝಿ ತ್ವಾಕ ಅಹ್ಮದ್ ಮುಸ್ಲಿಯಾರ್ ತೀರ್ಮಾನಿಸಿದ್ದಾರೆ ಎಂದು ಝೀನತ್ ಬಕ್ಷ್ ಜುಮಾ ಮಸೀದಿಯ ಕೋಶಾಧಿಕಾರಿ ಹಾಜಿ ಎಸ್.ಎಂ.ರಶೀದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ನಾಳೆ ಸಲಫಿ ಸಮಾವೇಶ
ಮಂಗಳೂರು, ಎ.8: ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ನ ಸಂದೇಶ ಪ್ರಚಾರ ಅಭಿಯಾನದ ಅಂಗವಾಗಿ ಎಪ್ರಿಲ್ 10ರಂದು ಮಗ್ರಿಬ್ ನಮಾಝಿನ ಬಳಿಕ ತಲಪಾಡಿ ಸಮೀಪದ ಕೆ.ಸಿ.ನಗರ ಜಂಕ್ಷನ್ನಲ್ಲಿ ಸಲಫಿ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ವೌಲವಿ ಸಜ್ಜಾದ್ ಸಖಾಫಿ ಪ್ರವಚನ ನೀಡಲಿದ್ದಾರೆ. ಸಲಫಿ ಮೂವ್ಮೆಂಟ್ನ ಕೇಂದ್ರೀಯ ಉಪಾಧ್ಯಕ್ಷ ಇಸ್ಮಾಯೀಲ್ ಶಾಫಿ ಸಮಾವೇಶವನ್ನು ಉದ್ಘಾಟಿಸಲಿದ್ದು, ತಲಪಾಡಿಯ ಅಬ್ರಾರ್ ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಅಬ್ಬಾಸ್ ತಲಪಾಡಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಯೆನೆಪೊಯ ಆಸ್ಪತ್ರೆಯಲ್ಲಿ 2ನೆ ಬಾರಿ ಯಶಸ್ವಿ ಕಿಡ್ನಿ ಕಸಿ
ಮಂಗಳೂರು,ಎ.8: ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡು ಮೃತರಾದ ಕೇರಳದ ವ್ಯಕ್ತಿಯೊಬ್ಬರ ಕಿಡ್ನಿಯನ್ನು ಕರ್ನಾಟಕದಲ್ಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ದೇರಳಕಟ್ಟೆಯ ಯೆನೆಪೊಯ ವೈದ್ಯಕೀಯ ಆಸ್ಪತ್ರೆೆಯಲ್ಲಿ ಯಶಸ್ವಿಯಾಗಿ ಕೆಡವರಿಕ್ ಕಿಡ್ನಿ ಕಸಿ ಮಾಡಲಾಯಿತು.
ಅಪಘಾತವೊಂದಲ್ಲಿ ಪಯ್ಯನ್ನೂರಿನ ಬಾಬು ಎಂಬವರ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರ ಕಿಡ್ನಿಯನ್ನು ಯೆನೆಪೊಯ ವೈದ್ಯಕೀಯ ಆಸ್ಪತ್ರೆೆಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯಬ್ಬರಿಗೆ ಕಸಿ ಮಾಡಲಾಯಿತು. ಯೆನೆಪೊಯದಲ್ಲಿ ಕಳೆದ 2 ವಾರಗಳಲ್ಲಿ ಮಾಡಿದ 2ನೆ ಕೆಡವರಿಕ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ತಂಡದಲ್ಲಿ ನೆಫ್ರೋಲಾಜಿ ವಿಭಾಗದ ಡಾ.ಸಂತೋಷ್ ಪೈ, ಯೂರೋಲಜಿ ವಿಭಾಗದ ಡಾ.ಮುಜೀಬುರ್ರಹ್ಮಾನ್, ಡಾ.ಅಲ್ತಾಫ್ ಖಾನ್, ಡಾ. ನಿಸ್ಚಿತ್ ಡಿಸೋಜ, ಅರಿವಳಿಕೆ ಭಾಗದ ಮುಖ್ಯಸ್ಥ ಡಾ.ಪದ್ಮನಾಭ ಸಂಪತ್ತಿಲ ಮತ್ತು ಡಾ.ರಾಮಮೂರ್ತಿ ಉಪಸ್ಥಿತರಿದ್ದರು. ಯೆನೆಪೊಯ ಆಸ್ಪತ್ರೆಯು ಅತ್ಯಂತ ಕಡಿಮೆ ಖರ್ಚಿನಲ್ಲಿ ಮೂತ್ರಪಿಂಡ ವೈಫಲ್ಯ ಹೊಂದಿರುವ ರೋಗಿಗಳಿಗೆ ಕಿಡ್ನಿ ಕಸಿಯನ್ನು ಮಾಡಲಾಗುವುದಲ್ಲದೆ, ಕೆಡವರಿಕ್ ಕಿಡ್ನಿ ದಾನಿಗಳನ್ನು ಪಡೆಯಲು ನೋಂದಣಿ ವ್ಯವಸ್ಥೆಯನ್ನೂ ಹೊಂದಿದೆ ಎಂದು ಯೆನೆಪೊಯ ಹಣಕಾಸು ವಿಭಾಗದ ಹಣಕಾಸು ನಿರ್ದೇಶಕ ವೈ.ಫರ್ಹಾದ್ ತಿಳಿಸಿದ್ದಾರೆ.
ಕಾಲ್ತೋಡಿನಲ್ಲಿ ಪ್ರಾಚೀನ ಕನ್ನಡ ಶಾಸನ ಪತ್ತೆ
ಉಡುಪಿ, ಎ.8: ಕುಂದಾಪುರ ತಾಲೂಕಿನ ಕಾಲ್ತೋಡು ಗ್ರಾಮದ ಉಂತುನ ಹೊಳೆಯ ಈರಣ್ಣನಮಕ್ಕಿಯಲ್ಲಿ 13ನೆ ಶತಮಾನದ ಕನ್ನಡ ಶಾಸನವೊಂದು ಪತ್ತೆಯಾಗಿದೆ. ಶಾಸನ ಶಿವಸ್ತುತಿಯೊಂದಿಗೆ ಪ್ರಾರಂಭವಾಗಿದೆ. ಶಾಸನದಲ್ಲಿ ಶಕ ವರ್ಷ 1219ರ ಉಲ್ಲೇಖವಿದ್ದು, ಅದು ಕ್ರಿ.ಶ.1293ಕ್ಕೆ ಸರಿಹೊಂದುತ್ತದೆ. ಶಾಸನ ಲ್ಲಿ ಶ್ರೀಮತ್ಪ್ರಾಪ ಚಕ್ರವರ್ತಿ ದೇವರ್ಸ ಎಂಬ ಹೆಸರು ಕಂಡು ಬರುತ್ತಿದೆ. ಆದರೆ ಶಾಸನದ ವಿವರಗಳಿಂದ ಈ ದೇವರ್ಸ ಯಾರು ಎಂದು ಸ್ಪಷ್ಟವಾಗುವುದಿಲ್ಲ ಎಂದು ಶಾಸನದ ವಿವರ ಗಳನ್ನು ನೀಡಿದ ಶಿರ್ವ ಎಂಎಸ್ಆರ್ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ್ರಾಧ್ಯಾಪಕ ಪ್ರೊ.ಟಿ.ಮುರುಗೇಶಿ ತಿಳಿಸಿದ್ದಾರೆ.
ಶಾಸನೋಕ್ತ ಕಾಲದಲ್ಲಿ ನಾಗದೇವರ್ಸ ಎಂಬ ಆಳುಪ ದೊರೆ ತುಳು ನಾಡಿನಲ್ಲಿ ಆಳ್ವಿಕೆ ನಡೆಸು ತ್ತಿದ್ದ ಬಗ್ಗೆ ದಾಖಲೆಗಳಲ್ಲಿ ಉಲ್ಲೇಖವಿದೆ. ಆದ್ದ ರಿಂದ ಶಾಸನೋಕ್ತ ದೇವರ್ಸ ಆಳುಪ ದೊರೆ ನಾಗದೇವ ರ್ಸನೆಂದು ಭಾವಿಸಬಹುದಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಈತನ ಆಳ್ವಿಕೆಯ ಕಾಲದಲ್ಲಿ ಹೇರಳಿಯ ಅಂದರೆ ಈಗಿನ ಹೇರಂಜಾಲುವಿನ ಹೆಬ್ಬಾರಿಯರ ಮಠಕ್ಕೆ ಕೊಟ್ಟ ಭೂಮಿ ದಾನವನ್ನು ಶಾಸನದಲ್ಲಿ ದಾಖಲಿಸಲಾಗಿದೆ. ಶಾಸನದ ಕೊನೆಯಲ್ಲಿ ಶಾಪಾಶ ಯವಿದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ, ಎಡಬಲದಲ್ಲಿ ಎರಡು ನಂದಿಯ ಶಿಲ್ಪಗಳು, ತ್ರಿಶೂಲ, ದೀಪ, ಯೂಪ(ಬಲಿ ಪೀಠ) ಹಾಗೂ ನಿಧಿಕುಂಭದ ಉಬ್ಬುಶಿಲ್ಪಗಳಿವೆ ಎಂದು ಪ್ರೊ.ಮುರುಗೇಶಿ ವಿವರಿಸಿದ್ದಾರೆ. ಶಾಸನದ ಮಹತ್ವ: ಶಾಸನೋಕ್ತ ಹೆಬ್ಬಾರಿಯರ ಮಠವನ್ನು ಈಗ ಹೇರಂಜಾಲು ಮಠವೆಂದು ಕರೆಯಲಾಗುತ್ತಿದೆ. ತುಳುನಾಡಿನ ಹೆಬ್ಬಾರರು ಮೂಲತಃ ಕಂದಾವರದ ಕುಲಕ್ಕೆ ಸೇರಿದವರು. ಪ್ರಸ್ತುತ ಹೇರಂಜಾಲು ಮಠದ ಉಡುಪರ ಕುಲದೇವರು ಕಂದಾವರದ ಕಾರ್ತೀಕನೆ. ಆದರೆ ಹೇರಂಜಾಲು ಮಠದ ಆರಾಧ್ಯದೇವತೆ ಶ್ರೀ ಲಕ್ಷ್ಮೀಯೂ ಮೂಲತಃ ಶೈವ ದೇವತೆಯೇ. ಶಾಸನ ದಲ್ಲಿನ ನಿಧಿಕುಂಭದ ಉಬ್ಬುಶಿಲ್ಪ ಸಹ ಮಠದ ಆದಿಲಕ್ಷ್ಮೀಗೆ ನೀಡಿದ ದಾನ ಎಂಬು ದನ್ನು ಸ್ಪಷ್ಟಪಡಿಸುತ್ತದೆ. ಶಾಸನೋಕ್ತ ಹೆಬ್ಬಾರಿಯರ ಮಠ ಆದಿಶಕ್ತಿ ಆರಾಧನೆಯ ಕರ್ನಾಟಕದ ಅತ್ಯಂತ ಪ್ರಾಚೀನ ಮಠ ಎನ್ನುವುದು ಈ ಶಾಸನದ ಮಹತ್ವದ ವಿಷಯವಾಗಿದೆ. ಈ ಶಾಸನದ ಇರುವಿಕೆಯನ್ನು ಗುರುತಿಸಿದವರು, ಬಟ್ನಾಡಿಯ ರಾಮಯ್ಯ ಶೆಟ್ಟಿ.
ಈ ಶಾಸನದ ಅಧ್ಯಯನಕ್ಕೆ ಬೆನ್ನೆಲುಬಾಗಿ ನಿಂತವರು ಕೊ ಲ್ಲೂರಿನ ಮುರುಳೀಧರ ಹೆಗ್ಡೆ ಮತ್ತು ರಾಘವೇಂದ್ರ ಐತಾಳ್. ಶಾಸನದ ಪ್ರತಿ ತಯಾರಿಸುವಲ್ಲಿ ದ್ವಿತೀಯ ಬಿ.ಎ. ಪುರಾತತ್ವ ವಿದ್ಯಾರ್ಥಿಗಳಾದ ಅನಿಲ್, ರಾಜೇಶ್, ವಿಘ್ನೇಶ್, ಲೋಹಿತ್ ಮತ್ತು ಅಂತಿಮ ಎಂ.ಎ. ಪುರಾತತ್ವ ವಿದ್ಯಾರ್ಥಿ ಸುಭಾಷ್, ಉಂತುನ ಹೊಳೆಯ ಗೋಪಾಲ್ ಹಾಗೂ ಕೊಠಾರಿ ಮನೆಯವರು ಸಹಕರಿಸಿದ್ದಾರೆ ಎಂದು ಪ್ರೊ.ಮುರುಗೇಶಿ ತಿಳಿಸಿದ್ದಾರೆ.
ವಿವಿ ಯಕ್ಷಗಾನ ಕೇಂದ್ರದಲ್ಲಿ ‘ಮಿಜಾರು ನೆನಪು’
ಕೊಣಾಜೆ, ಎ.8: ಯಕ್ಷಗಾನದ ಮೂರು ತಲೆಮಾರುಗಳ ಜೊತೆಗಿದ್ದು ಸಾಕಷ್ಟು ಅನುಭವವನ್ನು ಹೊಂದಿದ ಕಲಾವಿದ ಮಿಜಾರು ಅಣ್ಣಪ್ಪಆರಂಭದ ದಿನಗಳಲ್ಲಿ ರಾಕ್ಷಸ ವೇಷ, ಪುಂಡುವೇಷ ಇತ್ಯಾದಿಗಳನ್ನು ನಿರ್ವಹಿಸಿ ಪ್ರಸಿದ್ಧರಾದವರು. ಏಕಾಏಕಿ ಹಾಸ್ಯ ಪಾತ್ರಗಳನ್ನು ನಿರ್ವಹಿಸಬೇಕಾಗಿ ಬಂದ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿದ ಅವರು ಬಳಿಕ ಹಾಸ್ಯರತ್ನವಾಗಿ ಮೂಡಿಬಂದಿದು,್ದ ಇತಿಹಾಸ ಎಂದು ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ ವತಿಯಿಂದ ಶುಕ್ರವಾರ ನಡೆದ ‘ಮಿಜಾರು ನೆನಪು’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಮಿಜಾರು ಅಣ್ಣಪ್ಪ ನಟಿಸಿರುವ ಯಕ್ಷಗಾನದ ಹಾಸ್ಯದ ತುಣುಕುಗಳ ಸಂಗ್ರಹ ಮತ್ತು ಅಧ್ಯಯನ ತುಳು ಮತ್ತು ತೆಂಕುತಿಟ್ಟು ಯಕ್ಷಗಾನದ ಅಧ್ಯಯನಕ್ಕೆ ಪೂರಕವಾಗಬಲ್ಲುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ.ರಾಜಶ್ರೀ, ಸಂಶೋಧನಾ ಸಹಾಯಕ ಸತೀಶ್ ಕೊಣಾಜೆ, ಯುವ ಯಕ್ಷಗಾನ ಕಲಾವಿದ ದೀವಿತ್ ಶ್ರೀಧರ್ ಕೋಟ್ಯಾನ್, ಭಾಗವತರಾದ ಶ್ರೀನಿವಾಸ ಬಳ್ಳಮಂಜ ಮತ್ತು ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭೆಯ ಮುಕ್ತಾಯಕ್ಕೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.1
ಬಾಲವನದಲ್ಲಿ ಮಲ್ಟಿ ಜಿಮ್ ಉದ್ಘಾಟನೆ
ಪುತ್ತೂರು, ಎ.8: ದ.ಕ. ಜಿಪಂ, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ವತಿಯಿಂದ ಪರ್ಲಡ್ಕ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಮಲ್ಟಿ ಜಿಮ್ನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್
ಉದ್ಘಾಟಿಸಿದರು. ಶಾಸಕಿ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕಮಿಷನರ್ಡಾ.ರಾಜೇಂದ್ರ ಕೆ.ವಿ., ಎ.ಎಸ್ಪಿರಿಷ್ಯಂತ್, ಬಾಲವನ ಈಜುಕೊಳ ಸಮಿತಿಯ ಅಧ್ಯಕ್ಷ ಸೀತಾ ರಾಮ ರೈ ಸವಣೂರು, ಬಾಲವನ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಿಜಯ ಹಾರ್ವಿನ್, ಯುವಜನ ಸೇವಾ ಕ್ರೀಡಾ ಇಲಾಖೆಯ ಉಪನಿರ್ದೇಶಕ ಪಾಂಡುರಂಗ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ನಿವೃತ್ತ ಅಧಿಕಾರಿ ಮಾಧವ ಬಿ.ಕೆ., ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್ ರಹೀಂ, ಪ್ರಧಾನ ಕಾರ್ಯದರ್ಶಿ ಮಹೇಶ್ ರೈ ಅಂಕೊತ್ತಿಮಾರ್, ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ತಹಶೀಲ್ದಾರ ಸಣ್ಣರಂ ಗಯ್ಯ ಮತ್ತಿತರರು ಉಪಸ್ಥಿತರಿದ್ದರು.
ಸೀತಾರಾಮ ರೈ ಸವಣೂರು ಸ್ವಾಗತಿಸಿದರು. ವಿಜಯ ಹಾರ್ವಿನ್ ವಂದಿಸಿದರು. ಎವರೆಸ್ಟ್ ರೊಡ್ರಿಗಸ್ ಕಾರ್ಯಕ್ರಮ ನಿರೂಪಿಸಿದರು.