ಪತ್ರಕರ್ತ ಹೈಮದ್ ಹುಸೈನ್ ಕುಟುಂಬಕ್ಕೆ 1 ಲಕ್ಷ ರೂ. ನೆರವು
ಮಂಗಳೂರು, ಎ.9: ನಿನ್ನೆ ನಿಧನರಾದ ಯುವ ಪತ್ರಕರ್ತ ಹೈಮದ್ ಹುಸೈನ್ರ ಕುಟುಂಬಕ್ಕೆ ಮಾಜಿ ಸಚಿವ ಬಿ.ಜರ್ನಾದನ ಪೂಜಾರಿ, ಶಾಸಕ ಜೆ.ಆರ್.ಲೋಬೊ ಸಹಿತ ನಾಲ್ವರು ಒಟ್ಟು ಸೇರಿ 1 ಲಕ್ಷ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಮಂಗಳೂರಿನಲ್ಲಿ ಪ್ರೆಸ್ಕ್ಲಬ್ನಲ್ಲಿಂದು ಮಾತನಾಡಿದ ಬಿ.ಜನಾರ್ದನ ಪೂಜಾರಿಯವರು ಹೈಮದ್ ಕುಟುಂಬಕ್ಕೆ ವೈಯಕ್ತಿಕವಾಗಿ 25 ಸಾವಿರ ರೂ., ಅವರ ಪುತ್ರ ದೀಪಕ್ ಪೂಜಾರಿ 25 ಸಾವಿರ ರೂ., ಶಾಸಕ ಜೆ.ಆರ್.ಲೋಬೊ 25 ಸಾವಿರ ರೂ. ಹಾಗೂ ಕುದ್ರೋಳಿ ಶ್ರೀ ಗೋಕರ್ಣಥೇಶ್ವರ ದೇವಳದ ವತಿಯಿಂದ 25 ಸಾವಿರ ರೂ. ನೆರವು ನೀಡುವುದಾಗಿ ಪ್ರಕಟಿಸಿದರು.
ಇದೇ ಸಂದರ್ಭ ಒಂದು ನಿಮಿಷ ವೌನ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು
Next Story