Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಈ ಐದು ಸೂತ್ರಗಳನ್ನು ನೆನಪಿಟ್ಟು,...

ಈ ಐದು ಸೂತ್ರಗಳನ್ನು ನೆನಪಿಟ್ಟು, ಮನೆಕಟ್ಟು

ವಾರ್ತಾಭಾರತಿವಾರ್ತಾಭಾರತಿ9 April 2016 3:50 PM IST
share
ಈ ಐದು ಸೂತ್ರಗಳನ್ನು ನೆನಪಿಟ್ಟು, ಮನೆಕಟ್ಟು

ಮನೆ ಕಟ್ಟಿನೋಡು, ಮದುವೆ ಮಾಡಿನೋಡು ಎಂಬ ಗಾದೆಯನ್ನು ನಾವೆಲ್ಲ ಕೇಳಿದ್ದೇವೆ. ಮನೆಕಟ್ಟುವಾಗ ಎಷ್ಟು ಅನುಭವ ಇದ್ದರೂ ಕಡಿಮೆಯೇ. ಇದಕ್ಕೆ ತೀರಾ ಸೂಕ್ಷ್ಮಾತಿಸೂಕ್ಷ್ಮ ವಿಷಯಗಳ ಬಗೆಗೂ ಗಮನ ಹರಿಸಬೇಕಾಗುತ್ತದೆ. ಮನೆಯ ಗಾತ್ರ, ರಚನೆಯ ವಿಧಾನ, ಮನೆ ನಿರ್ಮಾಣವಾಗುವ ನಗರ, ಬಳಸಬೇಕಾದ ಸಲಕರಣೆಗಳು ಮತ್ತಿತರ ಅಂಶಗಳು ವೆಚ್ಚದ ಮೇಲೆ ನೇರ ಪರಿಣಾಮ ಬೀರುವಂಥವು. ನಿಮ್ಮ ಕಟ್ಟಡ ಯೋಜನೆಗೆ ಅನುಗುಣವಾಗಿ ವೆಚ್ಚವನ್ನು ನಿರ್ಧರಿಸಲು ಸಹಾಯಕವಾಗುವ ಕೆಲ ಅಂಶಗಳು ಇಲ್ಲಿವೆ ನೋಡಿ.

* ಒಟ್ಟು ನಿರ್ಮಾಣ ವೆಚ್ಚ ನಿರ್ಧರಿಸುವಲ್ಲಿ ಮನೆಯ ಸುತ್ತಳತೆ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಆಕೃತಿ ಕೂಡಾ ವೆಚ್ಚ ನಿರ್ಧರಣೆಯ ಪ್ರಮುಖ ಅಂಶ. ಸಂಕೀರ್ಣ ಆಕೃತಿಯಾಗಿದ್ದಲ್ಲಿ ಪ್ರತಿ ಚದರ ಅಡಿಯ ವೆಚ್ಚ ಸಹಜವಾಗಿಯೇ ಹೆಚ್ಚುತ್ತದೆ. ಮನೆಯ ಸುತ್ತಳತೆಯಲ್ಲಿ ಗ್ಯಾರೆಜ್ ಸೇರಿದಂತೆ ಒಟ್ಟು ಪ್ರಮಾಣದ ಸ್ಥೂಲ ಅಂದಾಜು ಸಿಗುತ್ತದೆ.

* ಆದರ್ಶ ಮನೆಗಳು ಇತರ ಐಷಾರಾಮಿ ಮನೆಗಳಿಗಿಂತ ತುಲನಾತ್ಮಕವಾಗಿ ಅಗ್ಗ. ನಿಮ್ಮ ವಿಶಿಷ್ಟತೆಗೆ ಅನುಗುಣವಾದ ಮನೆ ನಿರ್ಮಿಸುವುದಾದರೆ, ವೆಚ್ಚ ಅಧಿಕವಾಗುತ್ತದೆ. ಇದು ಇತರ ಆದರ್ಶ ಮನೆಗಳಷ್ಟೇ ಗಾತ್ರದ್ದಾದರೂ ವೆಚ್ಚ ದುಪ್ಪಟ್ಟಾಗುತ್ತದೆ. ಉದಾಹರಣೆಗೆ ವೃತ್ತಾಕಾರದ ಒಂದು ಕೊಠಡಿ ನಿರ್ಮಿಸುವುದಾದಲ್ಲಿ ಅದರ ಹೊಗಾಂಗಣ ಹಾಗೂ ಒಳಾಂಗಣ ವಿನ್ಯಾಸದ ವೆಚ್ಚ ಅಧಿಕ.ಜತೆಗೆ ಬಾಗಿಲು, ಕಿಟಕಿ, ಅಡುಗೆ ಮನೆ, ಸ್ನಾನಗೃಹ, ಫ್ಲೋರಿಂಗ್ ಕೂಡಾ ವೆಚ್ಚ ಹೆಚ್ಚುವಂತೆ ಮಾಡುತ್ತದೆ.

* ಒಟ್ಟು ಸ್ಥಳಾವಕಾಶ ಕೂಡಾ ಪ್ರಮುಖವಾಗುತ್ತದೆ. ಅಂದರೆ ಮುಖ್ಯ ಛಾವಣಿಯಡಿ ಬರುವ ಎಲ್ಲವೂ ಇದರಲ್ಲಿ ಸೇರುತ್ತದೆ. ಕಟ್ಟಡದ ಗೋಡೆಯೂ ಸಏರಿದಂತೆ ಸಮಗ್ರವಾಗಿ ನಿರ್ಮಾಣವಾಗಬೇಕಾದ ಪ್ರಮಾಣ. ಆದರೆ ಇದರಲ್ಲಿ ಬೇಸ್‌ಮೆಂಟ್, ಪೋರ್ಚ್ ಅಥವಾ ಗ್ಯಾರೆಜ್ ವೆಚ್ಚ ಸೇರುವುದಿಲ್ಲ. ಅದನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡಬೇಕು. ಸಾಮಾನ್ಯವಾಗಿ ದೊಡ್ಡಕಟ್ಟಡ ಹೆಚ್ಚು ವೆಚ್ಚದಾಯಕ.

* ಬಾಲ್ಕನಿಗಳು ಖರೀದಿದಾರರ ಅಪೇಕ್ಷೆಗಳಲ್ಲೊಂದು. ಇದು ಬೆಲೆಯಲ್ಲಿ ಸೇರುತ್ತದೆ. ಆದರೆ ಬೇಸ್‌ಮೆಂಟ್, ಗ್ಯಾರೇಜ್ ಹಾಗೂ ಪೋರ್ಚ್‌ಗಳು ಲಿವಿಂಗ್ ಏರಿಯಾದಲ್ಲಿ ಸೇರದಿದ್ದರೂ ಹೆಚ್ಚು ವೆಚ್ಚವನ್ನು ತರುತ್ತವೆ.

* ನಿರ್ಮಾಣದಲ್ಲಿ ಬಳಸುವ ಪರಿಕರಗಳಾದ ಇಟ್ಟಿಗೆ, ಸಿಮೆಂಟ್, ಮರಳು ಮತ್ತಿತರ ಅಂಶಗಳ ಬೆಲೆ ಕೂಡಾ ನಗರದಿಂದ ನಗರಕ್ಕೆ ಬದಲಾಗುತ್ತವೆ. ಕೂಲಿ ವೆಚ್ಚ ಕೂಡಾ ಬದಲಾಗುತ್ತದೆ. ಮಹಾನಗರಗಳಲ್ಲಿ ಇವುಗಳ ವೆಚ್ಚ ಅಧಿಕ.

ವೆಚ್ಚ ಇಳಿಸಲು ಸೂತ್ರಗಳು

* ಮನೆ ನಿರ್ಮಾಣ ಪ್ರದೇಶಕ್ಕೆ ಪ್ರತಿದಿನ ಭೇಟಿ ನೀಡಿ, ಗುತ್ತಿಗೆದಾರರು ಹಾಗೂ ಕಾರ್ಮಿಕರು ದುರ್ಬಳಕೆ ಮಾಡದಂತೆ ನೋಡಿಕೊಳ್ಳಿ.

* ಗೋಡೆ ನಿರ್ಮಾಣಕ್ಕೆ ಗಮನ ಕೊಡಿ. ಉತ್ತಮವಾಗಿ ಗೋಡೆ ಕಟ್ಟಿದರೆ ಕಡಿಮೆ ಸಿಮೆಂಟ್ ಹಾಗೂ ಕಡಿಮೆ ವೆಚ್ಚ ತಗುಲುತ್ತದೆ.

* ಆಯತಾಕಾರದ ಕೊಠಡಿಗಳಿಗೆ ಕಡಿಮೆ ಉಕ್ಕಿನ ಸರಳುಗಳು ಸಾಕು.

* ಪ್ರಬಲ ಮೆಟ್ಟಲುಗಳಿಗೆ ಸಾದರಹಳ್ಳಿ ಕಲ್ಲುಗಳನ್ನು ಬಳಸಿ. ಇದಕ್ಕೆ ಎರಡು ಆರ್‌ಸಿಸಿ ಬೀಮ್‌ಗಳಷ್ಟೇ ಸಾಕು.

* ಟೆರೇಸ್‌ಗೆ ತುಂಡು ಇಟ್ಟಿಗೆ ಹಾಗು ಕಲ್ಲುಗಳನ್ನು ಬಳಸಿ. ಇದನ್ನು ಆವರಣಗೋಡೆಗೂ ಬಳಸಬಹುದು. ವೆಚ್ಚ ಸಹಜವಾಗಿಯೇ ಕಡಿಮೆಯಾಗುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X