‘ನೇಸರು’ ಮಾಸಿಕದ ಜಾಗತಿಕ ಕನ್ನಡ ಕವನ ಸ್ಪರ್ಧೆ ವಿಜೇತರು
ಮುಂಬೈ, ಎ.10: ಮೈಸೂರು ಅಸೋಸಿಯೇಷನ್ ಮುಂಬೈ ಮುಖವಾಣಿ ‘ನೇಸರು’ ಮಾಸಿಕವು ನಡೆಸಿದ ಜಾಗತಿಕ ಕನ್ನಡ ಕವನ ಸ್ಪರ್ಧೆಯ ವಿಜೇತರು.
ಪ್ರಥಮ: ಚೈತ್ರಿಕಾ ಶ್ರೀಧರ್ ಹೆಗಡೆ, ಹಾರ್ಸಿಕಟ್ಟಾ, ಸಿದ್ದಾಪುರ (ಕವನ: ದಣಪೆಯ ಈಚೆ ಬದಿಗೆ)
ದ್ವಿತೀಯ: ಛಾಯಾ ಗವತಿ, ವಿಜಯನಗರ, ಬೆಂಗಳೂರು (ಕವನ: ಅಪರೂಪಕೊಮ್ಮೊಮ್ಮೆ)
ತೃತೀಯ: ವೀಣಾ ಬಡಿಗೇರ್, ಬೆಳಗಾವಿ (ಕವನ: ಹೆಣ್ಣಾಗಬೇಕು)
ಪ್ರೋತ್ಸಾಹ ಬಹುಮಾನ : ಗಣಪತಿ ದಿವಾಣ, ಅಂಬಲಪಾಡಿ, ಉಡುಪಿ (ಕವನ: ನಾನೊಬ್ಬ ಇದ್ದೇನೆ)
ರಾಮಚಂದ್ರ ಪೈ, ಮೂಡುಬಿದಿರೆ, ದ.ಕ. ಜಿಲ್ಲೆ (ಕವನ: ಎಲೆ ಎಲೆಯ ಎದೆಯ ದನಿ)
ಬಿ.ಎಸ್. ಕುರ್ಕಾಲ್ (ಖ್ಯಾತ ಕವಿ, ಮುಂಬಯಿ) ಹಾಗೂ ಡಾ ಹೆಚ್.ಎಸ್ ವೆಂಕಟೇಶ್ ಮೂರ್ತಿ (ಖ್ಯಾತ ಕವಿ, ಬೆಂಗಳೂರು) ಸ್ಪರ್ಧಾ ತೀರ್ಪು ನೀಡಿದ್ದರು ಎಂದು ಮೈಸೂರು ಅಸೋಸಿಯೇಷನ್ನ ಅಧ್ಯಕ್ಷೆ ಕೆ. ಕಮಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story