Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹೆತ್ತವರ ವಿರುದ್ಧವೇ ದೂರು ನೀಡಿದ ಬಾಲಕಿ...

ಹೆತ್ತವರ ವಿರುದ್ಧವೇ ದೂರು ನೀಡಿದ ಬಾಲಕಿ !

ವಾರ್ತಾಭಾರತಿವಾರ್ತಾಭಾರತಿ11 April 2016 2:35 PM IST
share
ಹೆತ್ತವರ ವಿರುದ್ಧವೇ ದೂರು ನೀಡಿದ ಬಾಲಕಿ !

ಅಹಮದಾಬಾದ್ : ಗಾಂಧಿನಗರದಿಂದ ಸುಮಾರು 10 ಕಿ.ಮಿ. ದೂರವಿರುವ ಕೊಲವಾಡ ಗ್ರಾಮದ 17 ವರ್ಷದ ರಾಜಲ್ ಠಾಕೋರ್ (ಹೆಸರು ಬದಲಾಯಿಸಲಾಗಿದೆ) ಕಳೆದ ಶನಿವಾರ 181 ಅಭಯಂ ಸಹಾಯವಾಣಿಗೆ ಕರೆಮಾಡಿದಾಗ ಮೊದಲ ಕೆಲವು ನಿಮಿಷಗಳಲ್ಲಿ ಆಕೆಯ ಬಾಯಿಯಿಂದ ಮಾತೇಹೊರಟಿರಲಿಲ್ಲ. ಅದಕ್ಕೆ ಕಾರಣವೂ ಇತ್ತು-ಆಕೆ ತನ್ನ ಸ್ವಂತ ಹೆತ್ತವರ ವಿರುದ್ಧವೇ ದೂರು ದಾಖಲಿಸುವ ಮನಸ್ಸು ಮಾಡಿದ್ದಳು.

ಜೂನ್ 1999ರಲ್ಲಿ ಹುಟ್ಟಿದ ರಾಜಲ್ ವಿವಾಹ ಎಪ್ರಿಲ್ 18ಕ್ಕೆ ನಡೆಯುವುದೆಂದು ತೀರ್ಮಾನಿಸಲಾಗಿತ್ತು ಹಾಗೂ ಆಕೆಯ ಹೆತ್ತವರು ಈಗಾಗಲೇ ಸಂಬಂಧಿಕರೆಲ್ಲರಿಗೂ ಆಹ್ವಾನ ಪತ್ರಿಕೆಗಳನ್ನೂ ಹಂಚಿದ್ದರು. ಆದರೆ ರಾಜಲ್ ಳಿಗೆ ಈ ಮದುವೆ ಸುತರಾಂ ಇಷ್ಟವಿಲ್ಲವಾಗಿತ್ತು. ಆಕೆಗೆ ಕಲಿಯುವುದನ್ನು ಮುಂದುವರಿಸುವ ಹಂಬಲವಿದ್ದರೂ ಅದಕ್ಕೆ ಆಕೆಯ ಹೆತ್ತವರು ತಣ್ಣೀರೆರಚಿದ್ದರು.

ಕೊನೆಗೆ ದಾರಿ ಕಾಣದೆ ಆಕೆ ಸಹಾಯವಾಣಿಗೆ ಕರೆ ಮಾಡಿ ತನ್ನ ಸಮಸ್ಯೆಯನ್ನು ತೋಡಿಕೊಂಡಿದ್ದಳು. ತನ್ನ ಹೆತ್ತವರು ತನಗೆ ತೊಂದರೆಯುಂಟು ಮಾಡಬಹುದೆಂದು ಹೆದರಿ ತಾನು ಅವರೊಂದಿಗಿರುವುದಿಲ್ಲವೆಂದೂ ಆಕೆ ತಿಳಿಸಿದ್ದಳು.

ಅಧಿಕಾರಿಗಳು ಹಾಗೂ ಮಹಿಳಾ ಪೊಲೀಸರು ಯುವತಿಯ ಮನೆಗೆ ಆಗಮಿಸಿದಾಗಆಕೆಯ ಹೆತ್ತವರು ಆಕೆಗೆ ವಿವಾಹ ನಿಶ್ಚಯವಾಗಿದೆಯೆಂಬುದನ್ನು ನಿರಾಕರಿಸಿದರಾದರೂ ಅಧಿಕಾರಿಗಳು ಮದುವೆಯ ಆಹ್ವಾನ ಪತ್ರಿಕೆಯನ್ನು ನೋಡಿದ್ದರು.  

ಹುಡುಕಿಯಂತೂ ಭಯಭೀತಳಾಗಿದ್ದಳು. ಆದರೆ ಆಕೆಯನ್ನು ಹೆತ್ತವರಿಂದ ದೂರ ಕರೆದುಕೊಂಡು ಹೋಗಿ ವಿಚಾರಿಸಿದಾಗ ಆಕೆ ತನ್ನ 10ನೇ ತರಗತಿಯ ಅಂಕ ಪಟ್ಟಿ ತೋರಿಸಿದಳು.

ಅದರಲ್ಲಿ ಆಕೆಗೆ 88.11% ಅಂಕಗಳು ಬಂದಿತ್ತೆಂದು ತಿಳಿದಿತ್ತು.‘‘ಆಕೆಯ ಶಿಕ್ಷಣ ಮುಂದುವರಿಸಲು ಹೆತ್ತವರು ನಿರಾಕರಿಸಿದ್ದರೂ ರಾಜಲ್‌ತಾನೇ 2017ರಲ್ಲಿ ನಡೆಯುವ 12ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಳು,’’ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಮಹಿಳಾ ಪೊಲೀಸರು ಆಕೆಯ ಹೆತ್ತವರಿಗೆ ಬಾಲ್ಯ ವಿವಾಹ ನಿಷೇಧದ ಬಗ್ಗೆ, ಬಾಲ್ಯ ವಿವಾಹ ನಡೆದಲ್ಲಿ ಅವರು ಅನುಭವಿಸಬೇಕಾದ ಶಿಕ್ಷೆಯ ಬಗ್ಗೆವಿವರಿಸಿದ ನಂತರ ಆಕೆ ತಾವು ತಮ್ಮ ಮಗಳಿಗೆ ಆಕೆಯ ಇಚ್ಛೆಯಂತೆಯೇ ಶಿಕ್ಷಣ ನೀಡುವುದಾಗಿಯೂ ಆಕೆಗೆ ವಿವಾಹಕ್ಕೆ ಬಲವಂತ ಮಾಡುವುದಿಲ್ಲವೆಂದು ಅವರು ಲಿಖಿತ ಹೇಳಿಕೆ ನೀಡಿದರು.

ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 15 ಬಾಲ್ಯ ವಿವಾಹ ನಡೆಯುತ್ತದೆಯಾದರೂ ವಧುವೊಬ್ಬಳೇ ಬಾಲ್ಯ ವಿವಾಹದ ವಿರುದ್ಧ ದೂರಿರುವುದು ಇದೇ ಮೊದಲು, ಎಂದು 181 ಸಹಾಯವಾಣಿಯ ಅಧಿಕಾರಿಯೊಬ್ಬರು ತಿಳಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X