ಕುಂದಾಪುರ ತಂಡಕ್ಕೆ ವೆಂಕಟೇಶ್ ಟ್ರೋಫಿ
ಪಡುಬಿದ್ರೆಯಲ್ಲಿ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯ
ಪಡುಬಿದ್ರೆ, ಎ.11: ಪಡುಬಿದ್ರೆಯ ಫ್ರೆಂಡ್ಸ್ 35ನೆ ವಾರ್ಷಿಕೋತ್ಸವ ಪ್ರಯುಕ್ತ ಸ್ಥಳೀಯ ಬೋರ್ಡು ಶಾಲಾ ಮೈದಾನದಲ್ಲಿ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಚ್ಯಾಲೆಂಜ್ ಕುಂದಾಪುರ ತಂಡವು ಫ್ರೆಂಡ್ಸ್ ಬೆಂಗಳೂರು ತಂಡವನ್ನು 6 ರನ್ನಿಂದ ರೋಮಾಂಚನಕಾರಿಯಾಗಿ ಮಣಿಸುವ ಮೂಲಕ ವೆಂಕಟೇಶ್ ಟ್ರೋಫಿ-2016ನ್ನು ಪಡೆದುಕೊಂಡಿತು. ಚ್ಯಾಲೆಂಜ್ ಕುಂದಾಪುರ ತಂಡವು ನಗದು 3,03,333 ರೂ. ಸಹಿತ ವೆಂಕಟೇಶ್ ಟ್ರೋಫಿ ಮತ್ತು ಫ್ರೆಂಡ್ಸ್ ಬೆಂಗಳೂರು ತಂಡವು 1,50,555 ರೂ. ಸಹಿತ ದ್ವಿತೀಯ ಟ್ರೋಫಿಯನ್ನು ಪಡೆದುಕೊಂಡಿತು.
ಟಾಸ್ ಜಯಿಸಿ ಬ್ಯಾಟಿಂಗ್ ಆರಂಭಿಸಿದ ಕುಂದಾಪುರ ತಂಡವು ನಿಗದಿತ 8 ಓವರನಲ್ಲಿ 3 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ಬೆಂಗಳೂರು ತಂಡವು 8 ಓವರ್ಗಳ ಅಂತ್ಯಕ್ಕೆ 9 ವಿಕೆಟ್ಗಳನ್ನು ಕಳೆದುಕೊಂಡು 47 ಗಳಿಸ ಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು. ಸೆಮಿಫೈನಲ್ನಲ್ಲಿ ಸೋತ ನ್ಯಾಶ್ ಬೆಂಗಳೂರು ಮತ್ತು ವೆಂಕಟರಮಣ ಪಿತ್ರೋಡಿ ನಗದು ತಲಾ 25,000 ರೂ. ಪಡೆಯಿತು. ವೈಯಕ್ತಿಕ ಪ್ರಶಸಿ
್ತ: ಸರಣಿ ಶ್ರೇಷ್ಠರಾಗಿ ನ್ಯಾಶ್ ಬೆಂಗಳೂರಿನ ಸ್ವಸ್ತಿಕ್,ಅತ್ಯುತ್ತಮ ಬ್ಯಾಟ್ಸ್ಮೆನ್ ಆಗಿ ಚ್ಯಾಲೆಂಜ್ ಕುಂದಾ ಪುರದ ಚರಣ್, ಅತ್ಯುತ್ತಮ ಬೌಲರ್ ಆಗಿ ಚ್ಯಾಲೆಂಜ್ ಕುಂದಾಪುರದ ರಾಘ ವೇಂದ್ರ ಆಚಾರ್ಯ ಹಾಗೂ ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠರಾಗಿ ಫ್ರೆಂಡ್ಸ್ ಬೆಂಗಳೂರಿನ ಯಾಸಿನ್ ವೈಯಕ್ತಿಕ ಪ್ರಶಸ್ತಿ ಪಡೆದರು.
ಬಹುಮಾನ ವಿತರ
ೆ: ವಿಜೇತರಿಗೆ ಉದ್ಯಮಿ ಪಾದೆಬೆಟ್ಟು ಸತೀಶ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರೆ ಫ್ರೆಂಡ್ಸ್ ಕ್ರಿಕೆಟ್ ಕ್ಲಬ್ ಅಧ್ಯಕ್ಷ ನವೀನ್ಚಂದ್ರ ಜೆ.ಶೆಟ್ಟಿ ವಹಿಸಿದ್ದರು. ಚಿತ್ರನಟಿ ತೇಜಸ್ವಿನಿ, ಸಂಗೀತ ನಿರ್ದೇಶಕ ಗುರುಕಿರಣ್, ನಟರಾದ ನಿರೂಪ್ ಭಂಡಾರಿ ಮತ್ತು ಅರ್ಜುನ್ ಕಾಪಿಕಾಡ್, ಮುಂಬೈ ಸಮಿತಿ ಅಧ್ಯಕ್ಷ ಜಿತೇಂದ್ರ ಜೆ,ಶೆಟ್ಟಿ, ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಮತ್ತು ವೈ.ಸುಕುಮಾರ್, ಸಂಚಾಲಕ ನವೀನ್ ಎನ್. ಶೆಟ್ಟಿ, ನಾಯಕ ಶರತ್ ಶೆಟ್ಟಿ, ಉಪನಾಯಕ ಸುಭಾಶ್ ಕಾಮತ್, ಕಾರ್ಯದರ್ಶಿ ರಮಾನಂದ ಗಡಿಯಾರ್, ಕೋಶಾಧಿಕಾರಿ ಸುರೇಶ್ ಕಾಮತ್, ಕಾಂಗ್ರೆಸ್ ಮುಖಂಡ ಅಬ್ದುಲ್ ಅಝೀಝ್ ಹೆಜಮಾಡಿ, ವೆಂಕಟೇಶ್ ಸಹೋದರ ಯೋಗೀಶ್ ಆಚಾರ್ಯ, ಉದ್ಯಮಿಗಳಾದ ನಯೇಶ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಗಣೇಶ್ ಕೋಟ್ಯಾನ್, ದೀಪಕ್ ಎರ್ಮಾಳ್, ವಿಜಯ್ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ: ಪ್ರೊಕಬಡ್ಡಿ ಆಟಗಾರರಾದ ರಿಶಾಂಕ್ ದೇವಾಡಿಗ, ಸುಖೇಶ್ ಹೆಗ್ಡೆ, ಪ್ರಶಾಂತ್ ರೈ, ಗೌರವ್ ಶೆಟ್ಟಿ, ಪಂದ್ಯವೊಂದರಲ್ಲಿ ದಾಖಲೆ 1,009 ರನ್ ಹೊಡೆದ ಮುಂಬೈ ಶಾಲಾ ಕ್ರಿಕೆಟಿಗ ಪ್ರಣವ್ ಧನವಾಡೆ,ಛತ್ರಪತಿ ಶಿವಾಜಿ ಪುರಸ್ಕೃತ ಜಯ ಎ. ಶೆಟ್ಟಿಯವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯಿತು.