ಹೊಳೆಗೆ ಸ್ನಾನಕ್ಕಿಳಿದ ಮದ್ರಸ ವಿದ್ಯಾರ್ಥಿಗಳಿಬ್ಬರು ಮೃತ್ಯು
ಕಾಸರಗೋಡು : ಹೊಳೆಗೆ ಸ್ನಾನಕ್ಕಿಳಿದ ಇಬ್ಬರು ಮದ್ರಸ ವಿದ್ಯಾರ್ಥಿಗಳು ಮೃತಪಟ್ಟ ದಾರುಣ ಘಟನೆ ಮಂಗಳವಾರ ಮಧ್ಯಾಹ್ನ ಬೇಡಡ್ಕ ಕುಂಡಗುಯಿ ಯಲ್ಲಿ ನಡೆದಿದೆ. ಜೊತೆಗಿದ್ದ ಐದು ಮಂದಿ ಅಪಾಯದಿಂದ ಪಾರಾಗಿದ್ದಾರೆ.
ಮ್ರತಪಟ್ಟ ವರನ್ನು ಕೇಳತ್ತೂರು ಕಲ್ಲಡಕುಟ್ಟಿಯ ಅಬ್ದುಲ್ಲ ರವರ ಪುತ್ರ ಜಾಬಿರ್ ( 12 ) ಮತ್ತು ಕೋಜಿಕ್ಕೋಡು ರಾಮನಟಕರದ ಅಬೂಬಕ್ಕರ್ ರವರ ಪುತ್ರ ಜೈನುಲ್ ಆಬಿದ್ ( 20 ) ಎಂದು ಗುರುತಿಸಲಾಗಿದೆ .
ಜಾಬಿರ್ ಕೋಜಿಕ್ಕೋಡು ಓಮನಶ್ಯೇರಿ ದಾರುಲ್ ಹರ್ಖಾ ಜೂನಿಯರ್ ಕಾಲೇಜಿನ ಏಳನೇ ತರಗತಿ ವಿದ್ಯಾರ್ಥಿಯಾಗಿದ್ದನು. ಸೋಮವಾರ ನಡೆದ
ಜಾಬಿರ್ ನ ಸಹೋದರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಜೈನುಲ್ ಆಬಿದ್ ಮತ್ತು ಸ್ನೇಹಿತರು ಬಂದಿದ್ದರು. ಮಧ್ಯಾಹ್ನ ಸ್ನೇಹಿತರ ಜೊತೆ ಹೊಳೆಗೆ ಸ್ನಾನಕ್ಕಿಳಿದಿದ್ದು, ಈ ಸಂದರ್ಭದಲ್ಲಿ ಘಟನೆ ನಡೆದಿದೆ. ಜೊತೆಗಿದ್ದವರು ರಕ್ಷಿಸಲೆತ್ನಿಸಿದರೂ ಸಾಧ್ಯವಾಗಲಿಲ್ಲ . ಬೊಬ್ಬೆ ಕೇಳಿ ದಾವಿಸಿ ಬಂದ ಸ್ಥಳೀಯರು ಮೇಲಕ್ಕೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲಾಗಲಿಲ್ಲ .
ಮ್ರತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿರಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟುಕೊಡಲಾಗುವುದು.





