ಕಾಪು ಪುರಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಎಲ್ಲಾ 23 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಕಾಪು: ಕಾಪು ಪುರಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುವ ಎಲ್ಲಾ 23 ಅಭ್ಯರ್ಥಿಗಳ ಪಟ್ಟಿಯನ್ನು ಸಚಿವ ವಿನಯಕುಮಾರ್ ಸೊರಕೆ ಸೋಮವಾರ ಬಿಡುಗಡೆ ಮಾಡಿದರು.
ಕೆಎಂಎಫ್ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ ಕಾಪು ಅವರು ದಂಡತೀರ್ಥ ವಾರ್ಡ್ನಿಂದ ಮಲ್ಲಾರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಕೊಂಬಗುಡ್ಡೆ ವಾರ್ಡ್ನಿಂದ ಕಣಕ್ಕಿಳಿದ ಪ್ರಮುಖರು.
ಕೈಪುಂಜಾಲು-ಜುಲೇಟ್ ರೇಶ್ಮಾ, ಕೋತಲಕಟ್ಟೆ-ಸೌಮ್ಯ, ಕರಾವಳಿ-ಪ್ರಭಾಕರ ಪೂಜಾರಿ, ಪೊಲಿಪುಗುಡ್ಡೆ-ಸರೋಜಿನಿ, ಕಲ್ಯಾ ಸುರೇಶ್ ದೇವಾಡಿಗ, ಭಾರತ್ ನಗರ-ಫರ್ಜಾನ, ಬೀಡುಬದಿ-ಆಶ್ವಿನಿ, ಪೊಲಿಪು-ಪ್ಯಾರೇಲಾಲ್ (ಲವ) ಕರ್ಕೇರ, ಕಾಪುಪೇಟೆ-ಮಾಧವ ಆರ್ ಪಾಲನ್, ಲೈಟ್ ಹೌಸ್-ಚಂದ್ರಾವತಿ ವಿ ಶ್ರೀಯಾನ್, ಕೊಪ್ಪಲಂಗಡಿ-ಕೆ.ಎಚ್. ಉಸ್ಮಾನ್, ತೊಟ್ಟಂ-ಅಮಿತಾ, ದುಗನ್ ತೋಟ-ಸುಲೋಚನಾ ಬಂಗೇರ, ಮಂಗಳಪೇಟೆ-ಹಮೀದ್, ಜನಾರ್ದನ ದೇವಸ್ಥಾನ-ವಿಜಯಲಕ್ಷ್ಮೀ, ಬಡಗರಗುತ್ತು ಮಹಮ್ಮದ್ ಇಮ್ರಾನ್, ಜನರಲ್ ಶಾಲೆ-ಮಾಲಿನಿ, ಗುಜ್ಜಿ- ರೇಶ್ಮಾ, ಗರಡಿ-ಶಾಂತಲತಾ, ಕುಡ್ತಿಮಾರ್-ಶಾಬು ಸಾಹೇಬ್, ಅಹಮ್ಮದ್ ಮೊಹಲ್ಲಾ-ಲೀಲಾ ಸ್ಪರ್ಧಿಸಲಿದ್ದಾರೆ. 20 ವಾರ್ಡ್ಗೆ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದರೆ 3 ಜನ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು.
ಬಿಜೆಪಿ ಬಾಕಿ ಪಟ್ಟಿ ಬಿಡುಗಡೆ: ಬಿಜೆಪಿ ಪಕ್ಷವು ಈ ಮೊದಲೇ ಮೂರು ವಾರ್ಡ್ಗೆ ಹೊರತು ಪಡಿಸಿ ಎಲ್ಲಾ ಪಟ್ಟಿಬಿಡುಗಡೆ ಮಾಡಿದ್ದು, ಬಾಕಿ ಉಳಿದಿದ್ದ ತೊಟ್ಟಂ, ದುಗ್ಗನ್ತೋಟ ಹಾಗೂ ಮಂಗಳಪೇಟೆ ವಾರ್ಡ್ಗಳ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಶಾಂಭವಿ ಕುಲಾಲ್, ಸೌಮ್ಯ, ಮಹಮ್ಮದ್ ಪಕೀರ್ ಸ್ಪರ್ದಿಸಲಿದ್ದಾರೆ. ಪಕ್ಷದ 18 ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸಿದ್ದು ಉಳಿದ 5 ಜನ ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಜೆಡಿಎಸ್, ಎಸ್ಡಿಪಿಐ ಸ್ಪರ್ಧೆ: ಪುರಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳು 6 ವಾರ್ಡ್ನಲ್ಲಿ ಸ್ಪರ್ಧಿಸಲಿದ್ದು, 2 ಕಡೆ ಎಸ್ಡಿಪಿಐ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.
ಕೊಪ್ಪಲಂಗಡಿ-ಜಯರಾಮ ಆಚಾರ್ಯ,ಮಂಗಳಪೇಟೆ-ಎಂ.ಎಚ್.ಬಿ.ಮಹಮ್ಮದ್, ಬಡಗರಗುತ್ತು-ಆನಂದ ಕೋಟ್ಯಾನ್, ಕೊಂಬಗುಡ್ಡೆ-ಸುಧಾಕರ ಶೆಟ್ಟಿ, ಜನರಲ್ ಶಾಲೆ-ವಿಮಲ, ಗರಡಿ ವಾರ್ಡ್-ಸಾಜಿದ ಬಾನು ಜೆಡಿಎಸ್ನಿಂದ ಸ್ಪರ್ಧಿಸಿದರೆ ಎಸ್ಡಿಪಿಐನ ಅಪ್ಸರಾ ಬಾನು ಗುಜ್ಜಿ ವಾರ್ಡ್ ಹಾಗೂ ಜುಲ್ಫೀಕರ್ ಅವರು ಕುಡ್ತಿಮಾರ್ ವಾರ್ಡ್ಗೆ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ.