ರಸ್ತೆ ಅಪಘಾತ: ಇಬ್ಬರು ಮೃತ್ಯು

ಕಾಸರಗೋಡು, ಎ.12: ಮಡಿಕೇರಿ ಸಮೀಪ ಸ್ಕೂಟರ್ ಮತ್ತು ಬಸ್ ಢಿಕ್ಕಿ ಹೊಡೆದ ಪರಿಣಾಮ ಕಾಞಂಗಾಡಿನ ಇಬ್ಬರು ಯುವಕರು ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ.
ಮೃತಪಟ್ಟವರನ್ನು ಕಾಞಂಗಾಡ್ ಸೌತ್ನ ದೀಪು (25) ಮತ್ತು ವಿಜೇಶ್ (25) ಎಂದು ಗುರುತಿಸಲಾಗಿದೆ. ಮೈಸೂರು-ಹುಣಸೂರು ರಸ್ತೆಯ ಪಿರಿಯಾಪಟ್ಟಣದಲ್ಲಿ ಅಪಘಾತ ಸಂಭವಿಸಿದೆ. ಮೈಸೂರಿನಲ್ಲಿ ಉದ್ಯೋಗ ಸಂದ ರ್ಶನಕ್ಕೆಂದು ಇಬ್ಬರೂ ಕೂಡಾ ನಾಲ್ಕು ದಿನಗಳ ಹಿಂದೆ ತೆರಳಿದ್ದರು. ಅಲ್ಲಿಂದ ಸ್ಕೂಟರ್ನಲ್ಲಿ ವಾಪಸಾಗುತ್ತಿದ್ದ ವೇಳೆ ಪಿರಿಯಾಪಟ್ಟಣದಲ್ಲಿ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇವರ ಬಳಿಯಿದ್ದ ದಾಖಲೆಪತ್ರಗಳಿಂದ ಊರಿನ ಬಗ್ಗೆ ಮಾಹಿತಿ ಲಭ್ಯವಾಗಿದೆ. ದೀಪು ಕಾಞಂಗಾಡ್ನ ಕೊವ್ವಲ್ಪಳ್ಳಿಯಲ್ಲಿ ಪೋಟೋ ಗ್ರಾಫರ್ ಆಗಿದ್ದರು. ವಿಜೇಶ್ ಕಾಂಞಂಗಾಡ್ನಲ್ಲಿ ಟ್ಯಾಕ್ಸಿ ಚಾಲಕರಾಗಿ ದುಡಿಯುತ್ತಿದ್ದರು. ಗಲ್ಫ್ ಉದ್ಯೋಗಿಯಾಗಿದ್ದ ವಿಜೇಶ್ ಡಿಸೆಂಬರ್ನಲ್ಲಿ ಊರಿಗೆ ಬಂದಿದ್ದು, ವಿಷು ಹಬ್ಬ ಕಳೆದು ತೆರಳುವವರಿದ್ದರು.
ಮೃತದೇಹವನ್ನು ಪಿರಿಯಾಪಟ್ಟಣದ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.





