ಇಸ್ಪಿಟ್ ಜೂಜು: ಮೂವರ ಬಂಧನ
ಬೈಂದೂರು, ಎ.12: ಕಾಲ್ತೋಡು ಗ್ರಾಮದ ಮೆಟ್ಟಿನ ಹೊಳೆ ಗುಂಗರ ಮಕ್ಕಿ ಮೈದಾನದ ಬಳಿ ಸಂಜೆ 5 ಗಂಟೆ ಸುಮಾರಿಗೆ ಇಸ್ಪಿಟು ಜೂಜಾಟವಾಡುತ್ತಿದ್ದ ಹೇರೂರಿನ ಸುಕುಮಾರ ಪೂಜಾರಿ(28), ಬೆಂಗಳೂರಿನ ಗಜೇಂದ್ರ (27), ಮೆಟ್ಟಿನಹೊಳೆಯ ಉಮೇಶ (24) ಎಂಬವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.
ದಾಳಿ ವೇಳೆ ಸೀತಾರಾಮ ಕುಲಾಲ್, ರಾಘು ಕುಲಾಲ್, ರಮೇಶ ಕುಲಾಲ್, ಗಣೇಶ ಕುಲಾಲ್, ವಿಜಯ ಕುಲಾಲ್ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 1,890ರೂ., 1 ಬೈಕ್ ಹಾಗೂ 2 ಮೊಬೈಲ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story