Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಕೈಗೆಟಕುವ ದರದಲ್ಲಿ ಶ್ರವಣ ಯಂತ್ರ:...

ಕೈಗೆಟಕುವ ದರದಲ್ಲಿ ಶ್ರವಣ ಯಂತ್ರ: ಇಂಡಿಯನ್ ಅಮೆರಿಕನ್ ಹುಡುಗನ ಸಾಧನೆ

ವಾರ್ತಾಭಾರತಿವಾರ್ತಾಭಾರತಿ13 April 2016 11:41 AM IST
share
ಕೈಗೆಟಕುವ ದರದಲ್ಲಿ ಶ್ರವಣ ಯಂತ್ರ: ಇಂಡಿಯನ್ ಅಮೆರಿಕನ್ ಹುಡುಗನ ಸಾಧನೆ

ಹೌಸ್ಟನ್:

ಅಮೆರಿಕದ 16 ವರ್ಷದ ಹುಡುಗ ದುಬಾರಿ ಸಾಧನಗಳನ್ನು ಖರೀದಿಸಲು ಸಾಧ್ಯವಾಗದವರಿಗಾಗಿ 60 ಡಾಲರ್ ಬೆಲೆ ಬಾಳುವ ಕಡಿಮೆ ವೆಚ್ಚದ ಶ್ರವಣ ಸಾಧನವನ್ನು ನಿರ್ಮಿಸಿದ್ದಾರೆ. ಕೆಂಟುಕಿಯ ಲೌಸ್ವಿಲ್ಲೆ ನಗರದ ಮುಕುಂದ್ ವೆಂಕಟ ಕೃಷ್ಣನ್ ಕಳೆದ ಎರಡು ವರ್ಷಗಳಿಂದ ಈ ಶ್ರವಣ ಸಾಧನದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಅದನ್ನು ಜೆಫ್ರೆಸನ್ ಕೌಂಟಿ ಪಬ್ಲಿಕ್ ಸ್ಕೂಲ್ಸ್ ಐಡಿಯಾ ಫೆಸ್ಟಲ್ಲಿ ಪ್ರದರ್ಶಿಸಿದ್ದಾರೆ. ಕೆಂಟುಕಿ ರಾಜ್ಯ ವಿಜ್ಞಾನ ಮತ್ತು ಇಂಜಿನಿಯರಿಂಗ್ ಜಾತ್ರೆಯಲ್ಲಿ ಅವರ ಶ್ರವಣ ಸಾಧನಕ್ಕೆ ಪ್ರಥಮ ಪ್ರಶಸ್ತಿ ದೊರೆತಿದೆ.

ಈ ಸಾಧನವು ಅತೀ ಅಗ್ಗದ ಹೆಡ್ ಫೋನುಗಳಲ್ಲೂ ಬಳಸಬಹುದಾಗಿದೆ. ಹೆಡ್ ಫೋನುಗಳ ಮೂಲಕ ಹಲವು ವಿಭಿನ್ನ ಧ್ವನಿಗಳಲ್ಲಿ ಏಳು ಭಿನ್ನ ತರಂಗಗಳಲ್ಲಿ ಕೇಳುವ ಮೂಲಕ ಸಾಧನವು ಧ್ವನಿ ಪರೀಕ್ಷೆ ಮಾಡಿಕೊಳ್ಳುತ್ತದೆ. ನಂತರ ಅದು ಸ್ವತಃ ಶ್ರವಣ ಸಾಧನವಾಗಿ ಪ್ರೋಗ್ರಾಂ ಆಗುತ್ತದೆ. ಪರೀಕ್ಷೆಯಲ್ಲಿ ಪಡೆದುಕೊಂಡ ಫಲಿತಾಂಶಕ್ಕೆ ತಕ್ಕಂತೆ ಧ್ವನಿಯನ್ನು ವರ್ಧಿಸಿಕೊಳ್ಳುತ್ತದೆ.

ಇದು ವೈದ್ಯರ ಅಗತ್ಯವನ್ನು ಪೂರ್ಣವಾಗಿ ನಿವಾರಿಸುತ್ತದೆ. ಎಷ್ಟರ ಮಟ್ಟಿಗೆ ಶ್ರವಣ ಸಮಸ್ಯೆ ವ್ಯಕ್ತಿಗೆ ಇದೆ ಎಂದು ತಿಳಿದುಕೊಂಡು ಧ್ವನಿಯ ಶಕ್ತಿಯನ್ನು ಇದು ವಿಸ್ತರಿಸುತ್ತದೆ. ಈ ಸಾಧನವನ್ನು 60 ಡಾಲರುಗಳಲ್ಲಿ ಮಾಡಬಹುದಾಗಿರುವಾಗ ಅವರು ಪ್ರತೀ ಶ್ರವಣ ಸಾಧನಕ್ಕೆ 1500 ಡಾಲರ್ ನಿಗದಿಪಡಿಸಿರುವುದು ನಿಜಕ್ಕೂ ವಿಚಿತ್ರ ಎಂದು ಡುಪಾಂಟ್ ಮ್ಯಾನುವಲ್ ಹೈಸ್ಕೂಲ್ ವಿದ್ಯಾರ್ಥಿ ಮುಕುಂದ್ ಹೇಳಿದ್ದಾರೆ. ಒಳಬರುವ ಸಂಕೇತದ ಧ್ವನಿಯನ್ನು ಏರಿಸಿ ಕೇಳಿಸಲು ಶ್ರವಣ ಸಾಧನದಲ್ಲಿರುವ ಪ್ರೊಸೆಸರ್ ಸಹಾಯ ಮಾಡುತ್ತದೆ. ಇದಕ್ಕೆ 45 ಡಾಲರ್ ಬೆಲೆ ಇದೆ. ಉಳಿದ ಭಾಗಗಳನ್ನು 15 ಡಾಲರಿಗೆ ಪಡೆಯಬಹುದು ಎನ್ನುತ್ತಾರೆ ಮುಕುಂದ್.

ಎರಡು ವರ್ಷಗಳ ಹಿಂದೆ ಭಾರತದಲ್ಲಿರುವ ತಮ್ಮ ತಾತನ ಮನೆಗೆ ಹೋದ ಸಮಯದಲ್ಲಿ ಮುಕುಂದ್ ಈ ಶ್ರವಣ ಸಾಧನವನ್ನು ತಯಾರಿಸಲು ಪ್ರೇರಣೆ ಪಡೆದುಕೊಂಡಿದ್ದರು. ತಮ್ಮ ತಾತನಿಗೆ ಶ್ರವಣ ಪರೀಕ್ಷೆಗೆ ಕರೆದೊಯ್ದು ಶ್ರವಣ ಸಾಧನ ಜೋಡಿಸುವಾಗ ಜೊತೆಯಲ್ಲಿದ್ದ ಮುಕುಂದ್, ಸಾಧನ ದುಬಾರಿಯಾಗಿದ್ದ ಕಾರಣ ಖರೀದಿಸಲು ಸಾಧ್ಯವಾಗಿರದೆ ಇದ್ದುದು ತಿಳಿದುಕೊಂಡಿದ್ದರು. ಹೀಗಾಗಿ ಪರ್ಯಾಯ ಸಾಧನ ತಯಾರಿಸಲು ನಿರ್ಧರಿಸಿದ್ದರು. ಆಡಿಯಾಲಜಿಸ್ಟ್ ವಿಶೇಷಜ್ಞರಾಗಿರುವ ಕಾರಣ ಭಾರತದಲ್ಲಿ ಅವರನ್ನು ಭೇಟಿಯಾಗುವುದೇ ಕಠಿಣ. ಆಮೇಲೆ ದುಬಾರಿ ಸಾಧನ ಖರೀದಿಸಬೇಕಾಗುತ್ತದೆ ಎನ್ನುತ್ತಾರೆ ಮುಕುಂದ್.

ತಾತನ ಚಿಕಿತ್ಸೆಗಾಗಿ ವೈದ್ಯರ ಭೇಟಿಗೇ 400-500 ಡಾಲರ್ ತೆತ್ತಿದ್ದರು. ಶ್ರವಣ ಸಾಧನಕ್ಕೆ ಮತ್ತೆ 1900 ತೆರಬೇಕಾಗಿತ್ತು. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಷ್ಟೊಂದು ಹಣವನ್ನು ಒಗ್ಗೂಡಿಸುವುದು ಬಹುತೇಕರಿಗೆ ಸಾಧ್ಯವಾಗದು ಎನ್ನುವುದನ್ನು ಮುಕುಂದ್ ತಿಳಿದಿದ್ದರು. ಭಾರತದಲ್ಲಿ ಕೆಳ ವರ್ಗದ ಆದಾಯವೇ ವಾರ್ಷಿಕ 616 ಡಾಲರ್ ಆಗಿರುವಾಗ ಶ್ರವಣ ಸಾಧನ ಪಡೆಯುವುದು ಸಾಧ್ಯವಾಗದು. ನಾನು ತಯಾರಿಸಿದ ಶ್ರವಣ ಸಾಧನದಲ್ಲಿ ಇತರ ಪಾರಂಪರಿಕ ಸಾಧನಗಳಂತಲ್ಲದೆ, ಇಯರ್ ಪೀಸ್ ಹಾಳಾದಲ್ಲಿ ಬದಲಿಸುವುದು ದುಬಾರಿಯಾಗುವುದಿಲ್ಲ. ಮಾಮೂಲಿ ಮತ್ತೊಂದು ಸೆಟ್ ಇಯರ್ ಬಡ್ ಖರೀದಿಸಬಹುದು. ಈಗಿನ ರೂಪದಲ್ಲಿ ಸಾಧನ ಎರಡು ಇಂಚುಗಳಿದ್ದು ಕಂಪ್ಯೂಟರ್ ಪ್ರೊಸೆಸರ್ ತರಹ ಕಾಣುತ್ತದೆ ಎನ್ನುತ್ತಾರೆ.

1000 ಡಾಲರ್ ತೆತ್ತು ಶ್ರವಣ ಸಾಧನ ಖರೀದಿಸಲಾಗದವರಿಗೆ ಈ ಸಾಧನ ಎನ್ನುವುದು ಮುಕುಂದ್ ಗುರಿ. ಹಲವಾರು ಸಂಸ್ಥೆಗಳು ಮುಕುಂದರನ್ನು ಸಂಪರ್ಕಿಸಿ ಈ ಶ್ರವಣ ಸಾಧನವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲು ಅನುಮತಿ ಕೋರಿವೆ. ಈ ಬೇಸಗೆಯಲ್ಲಿ ಬೆಂಗಳೂರಿಗೆ ಬರಲಿರುವ ಮುಕುಂದ್ ತಮ್ಮ ತಾತನಿಗೆ ತಾನು ತಯಾರಿಸಿದ ಶ್ರವಣ ಸಾಧನ ಕೊಡಲು ಬಯಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X