Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಉಪ್ಪಿನಂಗಡಿ: ಖಾಸಗಿ ಹಣಕಾಸು ಸಂಸ್ಥೆಯಿಂದ...

ಉಪ್ಪಿನಂಗಡಿ: ಖಾಸಗಿ ಹಣಕಾಸು ಸಂಸ್ಥೆಯಿಂದ 27 ಸಾವಿರ ರೂಪಾಯಿ ಲಪಟಾಯಿಸಿದ ವಿದೇಶಿ ಜೋಡಿ

ವಾರ್ತಾಭಾರತಿವಾರ್ತಾಭಾರತಿ14 April 2016 9:01 PM IST
share
ಉಪ್ಪಿನಂಗಡಿ: ಖಾಸಗಿ ಹಣಕಾಸು ಸಂಸ್ಥೆಯಿಂದ 27 ಸಾವಿರ ರೂಪಾಯಿ ಲಪಟಾಯಿಸಿದ ವಿದೇಶಿ ಜೋಡಿ

ಉಪ್ಪಿನಂಗಡಿ: ಇಲ್ಲಿನ ಖಾಸಗಿ ಹಣಕಾಸು ಸಂಸ್ಥೆಯೊಂದಕ್ಕೆ ಬಂದ ವಿದೇಶಿ ಜೋಡಿಯೊಂದು ಅಲ್ಲಿ ತಮ್ಮ ಕೈಚಳಕ ತೋರಿಸಿ 27 ಸಾವಿರ ರೂಪಾಯಿ ಲಪಟಾಯಿಸಿದ ಘಟನೆ ಬುಧವಾರ ನಡೆದಿದ್ದು, ಸಂಸ್ಥೆಯ ಮೆನೇಜರ್ ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಿಂದ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ ತೆರಳುವ ರಸ್ತೆಯ ಬದಿಯಿರುವ ಖಾಸಗಿ ಹಣಕಾಸು ಸಂಸ್ಥೆಯೊಂದಕ್ಕೆ ಬುಧವಾರ ವಿದೇಶಿ ಜೋಡಿಯೊಂದು ಆಗಮಿಸಿದ್ದು, ಇಲ್ಲಿದ್ದ ಹಣಕಾಸು ಸಂಸ್ಥೆಯ ವ್ಯವಸ್ಥಾಪಕ ಶಶಿಕುಮಾರ್‌ನಲ್ಲಿ 500 ರೂಪಾಯಿಗೆ ಚಿಲ್ಲರೆ ಕೇಳಿದರು.

ಈತ 100ರ ಐದು ನೋಟುಗಳನ್ನು ಇವರಿಗೆ ನೀಡಿದ ಬಳಿಕ ಈತನೊಂದಿಗೆ ಆಪ್ತವಾಗಿ ಮಾತನಾಡತೊಡಗಿದರಲ್ಲದೆ, ಮಾತು ಮುಂದುವರಿಯುತ್ತಿದ್ದಂತೆಯೇ ಈ ವಿದೇಶಿಗರು ಈತನಲ್ಲಿ ನಮಗೆ 2016ರ ಇಸವಿಯ ಒಂದು ಸಾವಿರ ರೂಪಾಯಿ ನೋಟು ಬೇಕಾಗಿದೆ ಎಂದು ಕೇಳಿದರು. ಈ ಸಂದರ್ಭ ಶಶಿಕುಮಾರ್ ತನ್ನಲ್ಲಿದ್ದ ಒಂದು ಸಾವಿರದ ಮುಖ ಬೆಲೆಯ ಎಪ್ಪತ್ತು ನೋಟುಗಳ ಬಂಡಲೊಂದರಿಂದ 2016ರ ನೋಟಿಗಾಗಿ ಹುಡುಕತೊಡಗಿದ್ದರು. ಆಗ ಈ ವಿದೇಶಿ ಜೋಡಿ ಬಂಡಲನ್ನು ನಮಗೆ ನೀಡಿ ನಾವೇ ಅದರಿಂದ ಒಂದು ನೋಟನ್ನು ಹುಡುಕಿ ತೆಗೆಯುತ್ತೇವೆ ಎಂದರಂತೆ. ಆದರೆ ಆತ ಅವರಿಗೆ ನೀಡದಿದ್ದಾಗ, ವಿದೇಶಿ ಯುವಕ ತನ್ನಲ್ಲಿದ್ದ ಪರ್ಸ್ ಅನ್ನು ಆತನ ಟೇಬಲ್ ಮೇಲಿಟ್ಟು ನಿಮ್ಮ ಹಣದ ಕಟ್ಟನ್ನು ನಾನು ಎತ್ತಿಕೊಂಡು ಓಡಿಹೋಗುತ್ತೇನೆಂಬ ಭಯ ನಿಮಗೆ ಬೇಡ. ನನ್ನ ಪರ್ಸ್‌ನಲ್ಲಿ ಇದಕ್ಕಿಂತ ಜಾಸ್ತಿ ಹಣ ಇದೆ ಎಂದು, ಮತ್ತೊಮ್ಮೆ ಹಣದ ಬಂಡಲ್ ತನಗೆ ನೀಡುವಂತೆ ಕೇಳಿದ್ದರು. ಈ ಸಂದರ್ಭ ಹಣಕಾಸು ಸಂಸ್ಥೆ ವ್ಯವಸ್ಥಾಪಕ ಶಶಿಕುಮಾರ್ ಇವರ ಮೇಲಿನ ವಿಶ್ವಾಸದಿಂದ ಹಣದ ಬಂಡಲನ್ನು ಅವರಿಗೆ ನೀಡಿದ್ದ.

ವಿದೇಶಿ ವ್ಯಕ್ತಿ ಈತನೆದುರು ಒಂದು ಸಾವಿರದ ಒಂದು ನೋಟನ್ನು ತೆಗೆದುಕೊಂಡಿದ್ದು, ಇದಕ್ಕೆ ಪ್ರತಿಯಾಗಿ ಆತನ ಪರ್ಸ್‌ನಲ್ಲಿದ್ದ ಒಂದು ಸಾವಿರ ರೂಪಾಯಿಯ ನೋಟೊಂದನ್ನು ನೀಡಿ ಈ ವಿದೇಶಿ ಜೋಡಿ ತೆರಳಿತ್ತು. ಅವರು ಹಿಂತಿರುಗಿದ ಬಳಿಕ 70,000 ರೂಪಾಯಿ ಬಂಡಲ್‌ನಿಂದ ಒಂದು ಸಾವಿರ ವಿದೇಶಿಗರು ತೆಗೆದಿದ್ದರಿಂದ ಅದಕ್ಕೆ ಮತ್ತೆ ಒಂದು ಸಾವಿರವನ್ನು ಭರ್ತಿಗೊಳಿಸಲು ವಿದೇಶಿಗರು ನೀಡಿದ ಒಂದು ಸಾವಿರದ ನೋಟನ್ನು ಅದರಲ್ಲಿಟ್ಟಿದ್ದರು. ಹಣ ಎಣಿಸುವ ವೇಳೆಗೆ ಶಶಿಕುಮಾರ್ ಬಂಡಲ್‌ಗಳನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ 27 ಸಾವಿರ ರೂಪಾಯಿ ಕಡಿಮೆ ಇರುವುದು ಬೆಳಕಿಗೆ ಬಂದಿದೆ. ಈ ಸಂದರ್ಭ ತಾನು ಮೋಸ ಹೋಗಿರುವುದು ಅರಿವಾಗಿ ಈ ವಿದೇಶಿ ಜೋಡಿಯನ್ನು ಹುಡುಕಾಡಿದಾಗ ಇವರು ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದು, ಅದನ್ನು ರಾಷ್ಟ್ರೀಯ ಹೆದ್ದಾರಿ ಬದಿ ನಿಲ್ಲಿಸಿದ್ದರು. ಹಣಕಾಸು ಸಂಸ್ಥೆಯಿಂದ ನೇರ ಅವರು ನಿಲ್ಲಿಸಿದ್ದ ಕಾರಿನ ಬಳಿ ಹೋಗಿ ಕಾರು ಹತ್ತಿ ಹೋಗಿದ್ದಾರೆ ಎಂಬುದು ಸ್ಥಳೀಯರಿಂದ ತಿಳಿದು ಬಂದಿತ್ತು.  ಬಳಿಕ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿದ್ದರು. ಪೊಲೀಸರು ಸ್ಥಳಕ್ಕಾಗಮಿಸಿ, ಆ ಪ್ರದೇಶದ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X