ರಿಕ್ಷಾ ಢಿಕ್ಕಿ: ಪಾದಚಾರಿಗಳಿಗೆ ಗಾಯ
ಮಂಜೇಶ್ವರ, ಎ.14: ರಾ.ಹೆ. 66 ರ ಉದ್ಯಾವರ ಮಾಡ ಬಳಿ ಆಟೊ ರಿಕ್ಷಾವೊಂದು ಪಾದಚಾರಿಗಳಿಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾದ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ.
ರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಉದ್ಯಾವರ ನಿವಾಸಿ ಮುಹಮ್ಮದ್ ಯಾನೆ ಮೋನುಚ್ಚ (65), ಮತ್ತು ಇವರ ಸಂಬಂಧಿ ಖಾದರ್ ಎಂಬವರು ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ ಮೋನುಚ್ಚರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಂಜತ್ತೂರಿನ ಸಭಾಂಗಣವೊಂದರಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ರಿಕ್ಷಾ ಚಾಲಕನ ವಿರುದ್ಧ ಮಂಜೇಶ್ವರ ಠಾಣಾ ಪೊಲೀಸರು ಕೇಸು ದಾಖಲಿಸಿದ್ದಾರೆ.
Next Story