ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು: ಪ್ರಕರಣ ದಾಖಲು
ಭಟ್ಕಳ,ಎ.16: ತಾಲೂಕಿನ ಮುರ್ಡೇಶ್ವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ವ್ಯಕ್ತಿಯೋರ್ವ ಮರಳಿ ದಡಸೇರಬೇಕಾದರೆ ಸಮುದ್ರದಲೆಗೆ ಸಿಲುಕಿ ಆಯತಪ್ಪಿ ಬಿದ್ದು ಬೋಟಿನ ಫ್ಯಾನ್ ತಲೆಗೆ ತಗಲಿದ ಕಾರಣ ಮೀನುಗಾರ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.
ಮೃತ ಮೀನುಗಾರನನ್ನು ತಾಲೂಕಿನ ಮುರ್ಡೇಶ್ವರದ ಮನಾಲಿ ಗಾರ್ಡನ್ ನಿವಾಸಿಯಾದ ವಿನಾಯಕ ರಾಮ ಹರಿಕಾಂತ್(23) ಎಂದು ಗುರುತಿಸಲಾಗಿದೆ.
ವಿನಾಯಕರನ್ನು ರಕ್ಷಿಸಲು ಸಮುದ್ರಕ್ಕೆ ಧುಮುಕಿದ ಲೋಕೇಶ ಕಾಮಾಜಿ ಹರಿಕಂತ್ರ (27) ಎಂಬವರಿಗೆ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಮುರ್ಡೇಶ್ವರದ ಆರ್ಎನ್ಎಸ್. ಆಸ್ಪತ್ರೆಯಲ್ಲಿ ಮೃತದೇಹವನ್ನು ಇರಿಸಲಾಗಿದೆ.
ಬೋಟ್ ಮುರ್ಡೇಶ್ವರದ ಮಾವಳ್ಳಿ ಗ್ರಾಮದ ಕೃಷ್ಣ ನಾರಾಯಣ ಹರಿಕಾಂತ್ರರಾಗಿದೆ ಎಂದು ತಿಳಿದು ಬಂದಿದ್ದು, ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





