ಮತಯಂತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ
ಕಾಸರಗೋಡು, ಎ.17: ರಾಜ್ಯ ವಿಧಾನ ಸಭೆಗೆ ಮೇ 16ರಂದು ನಡೆಯುವ ಚುನಾವಣೆೆಯ ಮತಯಂತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ ಅಳವಡಿಸಲಾಗುವುದು. ಅಭ್ಯರ್ಥಿಯ ಭಾವಚಿತ್ರ ನೋಡಿ ಮತಯಂತ್ರದ ಬಟನ್ ಒತ್ತುವ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಇ. ದೇವದಾಸನ್ ತಿಳಿಸಿದ್ದಾರೆ.
ದೇರಳಕಟ್ಟೆ ರೇಂಜ್ ಮ್ಯಾನೇಜ್ಮೆಂಟ್, ಸಮಸ್ತಾಭಿಮಾನಿಗಳ ಸಭೆ ಉಳ್ಳಾಲ, ಎ.17: ದೇರಳಕಟ್ಟೆ ರೇಂಜ್ ಮ್ಯಾನೇಜ್ಮೆಂಟ್ ಮತ್ತು ಸಮಸ್ತಾಭಿಮಾನಿಗಳ ಸಭೆಯು ಇತ್ತೀಚೆಗೆ ದೇರಳಕಟ್ಟೆಯಲ್ಲಿ ಮ್ಯಾನೇಜ್ಮೆಂಟ್ ಅಧ್ಯಕ್ಷ ಹಾಜಿ ಮೊದಿನ್ ಕುಂಞಿಯ ಅಧ್ಯಕ್ಷತೆಯಲ್ಲಿ ನಡೆಯಿತು. ದೇರಳಕಟ್ಟೆ ರೇಂಜ್ ಮಟ್ಟದಲ್ಲಿ ಮೇ 13ರಂದು ಸಮಸ್ತದ ನೂತನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಶೈಖುನಾ ಆಲಿಕುಟ್ಟಿ ಉಸ್ತಾದ್ರಿಗೆ ಅಭಿನಂದನೆ ಹಾಗೂ ಚೆರುಶ್ಶೇರಿ ಉಸ್ತಾದ್ ಅನುಸ್ಮರಣಾ ಕಾರ್ಯಕ್ರಮವನ್ನು ದೇರಳಕಟ್ಟೆಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಸೈಯದ್ ಅಮೀರ್ ತಂಙಳ್ ದುಆ ನೆರವೇರಿಸಿದರು. ಖತೀಬ್ ಅಬ್ದುನಾಸೀರ್ ಫೈಝಿ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಇಬ್ರಾಹೀಂ ಬಾಖವಿ ಕೆ.ಸಿ. ರೋಡ್, ಖಾಸಿಂ ದಾಲಿಯಾ, ಲತೀಫ್ ದಾರಿಮಿ ಕೊಂಚಾಡಿ ಮಾತನಾಡಿದರು. ಸಭೆಯಲ್ಲಿ ಮ್ಯಾನೇಜ್ಮೆಂಟಿನ ಗೌರವಾಧ್ಯಕ್ಷ ಡಾ. ಸುಲೈಮಾನ್, ಉಪಾಧ್ಯಕ್ಷ ಎಂ.ಎ. ಅಬ್ದುಲ್ಲಾ, ಕೋಶಾಧಿಕಾರಿ ಅಬುಸಾಲಿಹ್ ಹಾಜಿ ಕುರಿಯಕರ್, ದೇರಳಕಟ್ಟೆ ಬದ್ರಿಯಾ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಇಸ್ಮಾಯೀಲ್ ಹಾಜಿ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಮ್ಯಾನೇಜ್ಮೆಂಟಿನ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೊಣಾಜೆ ಸ್ವಾಗತಿಸಿ, ವಂದಿಸಿದರು.