ಮಂಗಳೂರು : 21ರಂದು ನಾರಾಯಣ ಗುರು ಜ್ಞಾನ ಮಂದಿರ ಲೋಕಾರ್ಪಣೆ
ಮಂಗಳೂರು, ಎ. 18: ಬಂಟ್ವಾಳದ ಸಜಿಪಮೂಡ ಗ್ರಾಮದ ಸುಭಾಶ್ ನಗರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ಎ.21ರಂದು ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆ ಮಾಡಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಅಖಿಲ ಭಾರತ ಬಿಲ್ಲವ ಮಹಾಮಂಡಲ ಮುಲ್ಕಿಯ ವಕ್ತಾರ ಹರಿಕೃಷ್ಣ ಬಂಟ್ವಾಳ, ಅಂದು ಬೆಳಗ್ಗೆ 10.30 ಕ್ಕೆ ಉದ್ಘಾಟನೆ ನಡೆಯಲಿದೆ ಎಂದರು.
ಕೆಂಪು ಮುರಕಲ್ಲಿನಿಂದ ನಿರ್ಮಾಣಗೊಂಡಿರುವ ದಕ್ಷಿಣ ಭಾರತದ ಪ್ರಥಮ ಜ್ಞಾನ ಮಂದಿರ ಇದಾಗಿದೆ. 1 ಕೋಟಿ ರೂ. ಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಜ್ಞಾನ ಮಂದಿರ ಶಾಖ ನಿರೋಧಕ ಮೇಲ್ಛಾವಣಿ ಹೊಂದಿದೆ. ಮಂದಿರದ ಮೇಲ್ಗಡೆ ರಾಜಗೋಪುರ ಮತ್ತುತಿ ಗರ್ಭಗುಡಿ ಮೇಲಿನ ಗೋಪುರ ತಾಂಜಾವೂರು ಶೈಲಿಯಲ್ಲಿದೆ. ನಾರಾಯಣ ಗುರುಗಳ ಪಂಚಲೋಹದ ಮೂರು ಅಡಿ ಎತ್ತರದ ಪದ್ಮಾಸನ ಭಂಗಿಯ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು.
ಜ್ಞಾನ ಮಂದಿರದ ಲೋಕಾರ್ಪಣೆ ಅಂಗವಾಗಿ ಎ._ 20ರಂದು ಮಧ್ಯಾಹ್ನ 2 ಗಂಟೆಗೆ ನಾರಾಯಣ ಗುರುಗಳ ಪಂಚಲೋಹದ ವಿಗ್ರಹ ಸಹಿತ ಹೊರೆಕಾಣಿಕೆ ಮೆಲ್ಕಾರ್ ಜಂಕ್ಷನ್ನಿಂದ ಗುರು ಮಂದಿರದವರೆಗೆ ಮೆರಣಿಗೆ ನಡೆಯಲಿದೆಎಂದವರು ಹೇಳಿದರು. ಗೋಷ್ಠಿಯಲ್ಲಿ ಸಂಜೀವ ಪೂಜಾರಿ, ಯಶವಂತ ಡಿ., ಸಂತೋಷ್ ಕುಮಾರ್ ಉಪಸ್ಥಿತರಿದ್ದರು.