ಭಟ್ಕಳ: ಶಾಸಕ ಮಾಂಕಾಳ ರಿಂದ ನೂತನ ಎಂ.ಟ.ಸಿ ಸೆಂಟರ್ ಉದ್ಘಾಟನೆ

ಭಟ್ಕಳ: ಇಲ್ಲಿನ ನವಾಯತಕಾಲೋನಿಯಲ್ಲಿನ ನೂತನಕಟ್ಟಡದಲ್ಲಿ ಎಂ.ಟಿ.ಸಿ. (ಮೆನೋಫ್ಯಾಕ್ಚರಿಂಗ್ಟೆಕ್ನೋಲಜಿ ಸೆಂಟರ್) ಉದ್ಘಾಟನೆಯನ್ನು ಶಾಸಕ ಮಂಕಾಳ ಎಸ್. ವೈದ್ಯ ನೆರವೇರಿಸಿದರು.
ನಂತರ ಮಾತನಾಡಿದಅವರುಒಂದು ಕಂಪೆನಿ ಒಂದೇ ಬಾರಿಗೆ ವಿದೇಶವೂ ಸೇರಿದಂತೆ 13 ಕಡೆಗಳಲ್ಲಿ ಕಚೇರಿತೆರೆಯುತ್ತಿರುವುದು ಸಂತಸತಂದಿದೆ. ಕಂಪೆನಿಯಿಂದ ಭಟ್ಕಳದಲ್ಲಿಯೇ ಸಿ.ಸಿ.ಟಿ.ವಿ. ಸೇರಿದಂತೆ ವಿವಿಧಇಲೆಕ್ಟ್ರೋನಿಕ್ ಉಪಕರಣಗಳನ್ನು ತಯಾರು ಮಾಡುತ್ತಿರುವುದುಗ್ರಾಹಕರಿಗೆಅತೀಕಡಿಮೆ ಬೆಲೆಗೆ ಉತ್ತಮ ವಸ್ತುಗಳು ದೊರೆಯುವಂತಾಗಿದೆ.ಸುರಕ್ಷತೆಗೆಇಂದುಎಲ್ಲರೂ ಮಹತ್ವವನ್ನುಕೊಡಬೇಕಾಗಿದ್ದುಇಲೆಕ್ಟ್ರೋನಿಕ್ಸ್ ಯಂತ್ರಗಳ ಮೊರೆ ಹೋಗುವುದು ಅನಿವಾರ್ಯವಾಗಿದೆ.ಸಾಮಾನ್ಯರಿಗೆಕಡಿಮೆದರದಲ್ಲಿಇಂತಹ ಸೆಕ್ಯುರಿಟೆ ವಸ್ತುಗಳು ದೊರೆಯುವುದರಿಂದಇಲ್ಲಿಯೇಖರೀಧಿಸಲು ಅನುಕೂಲವಾಗಿದೆಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ಸರ್ವಿಸ್ ಸೆಂಟರ್ ಉದ್ಘಾಟಿಸಿ ಮಾತನಾಡಿದ ಸಹಾಯಕಕಮಿಷನರ್ಚಿದಾನಂದ ವಠಾರೆ, ನಾವು ಆಧುನಿಕತಂತ್ರಜ್ಞಾನದಕಡೆಗೆ ಸಾಗುತ್ತಿದ್ದಂತೆಯೇಎಲ್ಲವೂಅವಶ್ಯಕವಾಗುತ್ತದೆ. ಭಟ್ಕಳದಲ್ಲಿ ಇಂತಹತಂತ್ರಜ್ಞಾನದ ಸೇವೆಯನ್ನು ಆರಂಭಿಸಿರುವುದು ಸ್ವಾಗತಾರ್ಹಕ್ರಮಎಂದರು.
ಇಲ್ಲಿನ ಅಲಿ ಪಬ್ಲಿಕ್ ಸ್ಕೂಲ್ನಚೇರ್ಮೆನ್ಮೌಲಾನಮುಹಮ್ಮದ್ಇಲ್ಯಾಸ್ ನದ್ವಿ ಮಾತನಾಡಿ ಭಟ್ಕಳ ನಗರ ಹಿಂದೂಸ್ಥಾನದಲ್ಲಿಯೇಉತ್ತಮ ವ್ಯವಸ್ಥೆಯೊಂದಿಗೆಆರ್ಥಿಕವಾಗಿ ಸದೃಢವಾಗಿರುವ ನಗರವಾಗಿದೆ. ಇಲ್ಲಿನಜನತೆಯಆರ್ಥಿಕ ಸ್ಥಿತಿಯನ್ನು ನೋಡಿ ಹೊರಗಿನಿಂದ ಬಂದು ಕಳ್ಳತನಕ್ಕೆ ಮುಂದಾಗುತ್ತಾರೆ.ಅಂತಹ ಸಂದರ್ಭಗಳಲ್ಲಿ ಸಿ.ಸಿ.ಕ್ಯಾಮರಾದಂತಹ ವ್ಯವಸ್ಥೆಯಿಂದ ನಿಯಂತ್ರಣ ಸಾಧ್ಯ.ದೇವರ ಭಯವಿದ್ದರೆಯಾವುದೇಅನಾಚಾರವಾಗಲಾರದು, ಆದರೆಇಂದು ಸಿ.ಸಿ.ಕ್ಯಾಮರಾದ ಭಯದಿಂದಲೇ ಅನೇಕ ಅನಾಚಾರಗಳು ನಿಯಂತ್ರಣದಲ್ಲಿವೆ. ದೇವರಕ್ಯಾಮರಾ ಶಾಶ್ವತವಾದದ್ದು ಮತ್ತು ನಮ್ಮಜೀವಿತಾವಧಿಯ ನಂತರವೂಅದುರೀಪ್ಲೇ ಮಾಡುವಂತದ್ದುಎಂದಅವರುಆಧುನೀಕರಣ ಅನಿವಾರ್ಯವಾಗಿದೆಎಂದರು.
ತಂಜೀಂ ಪ್ರಧಾನ ಕಾರ್ಯದರ್ಶಿ ಅಲ್ತಾಫ್ಖರೂರಿ, ಹಿರಿಯಉಪಾಧ್ಯಕ್ಷಇನಾಯತುಲ್ಲಾ ಶಾಬಂದ್ರಿ, ಮಂಕಿ ಜಿಲ್ಲಾ ಪಂಚಾಯತ್ ಸದಸ್ಯ ದೀಪಕ್ ನಾಯ್ಕ ಮುಂತಾದವರು ಮಾತನಾಡಿದರು. ಸಂಸ್ಥೆಯ ಆಡಳಿತ ನಿರ್ದೇಶಕಅಬ್ದುಲ್ಖಾದರ್ ಉಪಸ್ಥಿತರಿದ್ದರು.
ಹಫಿಜ್ಅಮಿನ್ಜುಬೇರ್ಖುರಾನ್ ಪಠಣ ಮಾಡಿದರು. ಅವಿನಾಶ ನಾಯ್ಕ, ದೀಪ್ತಿ ಕುಡಾಲ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯಕುರಿತು ವಿವರಿಸಿದರು.ಮುಬಾಷಿರ್ ಹಲ್ಲಾರೆ ನಿರ್ವಹಿಸಿದರು.ಮಹಮ್ಮದ್ ಶಫಿ ವಂದಿಸಿದರು.







