ತುಳುವನ್ನು 8ನೆ ಪರಿಚ್ಛೇಧಕ್ಕೆ ಸೇರಿಸಲು ಆಗ್ರಹ
ಉಡುಪಿ, ಎ.18: ತುಳು ಭಾಷೆಯನ್ನು ಸಂವಿಧಾನದ 8ನೆೆ ಪರಿಚ್ಛೇಧಕ್ಕೆ ಸೇರ್ಪಡೆಗೊಳಿಸಬೇಕು ಹಾಗೂ ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸಬೇಕೆಂದು ತುಳುನಾಡ ರಕ್ಷಣಾ ವೇದಿಕೆಯು ಸೋಮವಾರ ಉಡುಪಿ ಸರ್ವಿಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಬಳಿ ಧರಣಿ ನಡೆಸಿತು.
ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಉಡುಪಿ ಜಿಲ್ಲಾ ಅಧ್ಯಕ್ಷ ಐಕಳ ಬಾವ ಚಿತ್ತರಂಜನ್ದಾಸ್ ಶೆಟ್ಟಿ, ತುಳುಕೂಟ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಸಿನೆಮಾ ನಟಿ ಚೈತ್ರಾ ಅಂಚನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಝರುದ್ದೀನ್, ಮಹೇಶ್ ಕೋತ್ವಾಲ್, ರಮೇಶ್ ಪೂಜಾರಿ ಶಿರೂರು, ರಿಚರ್ಡ್ ಮಸ್ಕರೇನಸ್, ಜ್ಯೋತಿಕಾ ಜೈನ್, ಸುರೇಂದ್ರ ನಿಟ್ಟೂರು, ಮುಶ್ತಾಕ್ ಅಹ್ಮದ್, ಸುಭಾಷ್ ಸುಧನ್, ರವಿ ಕಾರ್ಕಳ, ನಝೀರ್ ಕೋಟೇಶ್ವರ, ಮಮತಾ ಪಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Next Story