ಕಬ್ಬಿನ ರಾಶಿಗೆ ಬೆಂಕಿ: ಲಕ್ಷಾಂತರ ರೂ.ನಷ್ಟ
ಬ್ರಹ್ಮಾವರ, ಎ.18: ಗದ್ದೆಯಲ್ಲಿ ಕಟಾವು ಮಾಡಿ ರಾಶಿ ಹಾಕಿದ್ದ ಲಕ್ಷಾಂತರ ರೂ. ವೌಲ್ಯದ ಕಬ್ಬಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿರುವ ಘಟನೆ ಕೊಕ್ಕರ್ಣೆಯ ಮೊಗವೀರಪೇಟೆ ಎಂಬಲ್ಲಿ ಎ.14ರಂದು ನಡೆದಿದೆ.
ಮೊಗವೀರಪೇಟೆಯ ಗೀತಾ ಶ್ರೀಕಾಂತ್ ಎಂಬವರ ಗದ್ದೆಯಲ್ಲಿದ್ದ ಸುಮಾರು 1 ಲಕ್ಷ ರೂ. ಮೌಲ್ಯದ ಕಬ್ಬಿನ ರಾಶಿಗೆ ಸುಧಾಕರ, ಪತ್ನಿ ದೇವಕಿ, ಮಗ ಶೈಲೇಶ್ ಎಂಬವರ ದುಷ್ಪ್ರೇರಣೆಯಿಂದ ಮಹೇಶ ಮತ್ತು ಅಪರಿಚಿತರು ಬೆಂಕಿ ಕೊಟ್ಟ ಸುಟ್ಟು ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story