Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವಿದೇಶಕ್ಕೆ ಹೋಗುವ ಮುನ್ನ ದೇಶದಲ್ಲೇ ಇರುವ...

ವಿದೇಶಕ್ಕೆ ಹೋಗುವ ಮುನ್ನ ದೇಶದಲ್ಲೇ ಇರುವ ಈ ಸುಂದರ ಸ್ಥಳಗಳಿಗೆ ಒಮ್ಮೆ ಭೇಟಿ ಕೊಡಿ

ವಾರ್ತಾಭಾರತಿವಾರ್ತಾಭಾರತಿ19 April 2016 12:03 PM IST
share
ವಿದೇಶಕ್ಕೆ ಹೋಗುವ ಮುನ್ನ ದೇಶದಲ್ಲೇ ಇರುವ ಈ ಸುಂದರ ಸ್ಥಳಗಳಿಗೆ ಒಮ್ಮೆ ಭೇಟಿ ಕೊಡಿ

ವಿದೇಶದಲ್ಲಿ ಅದ್ಭುತ ಜಾಗಕ್ಕೆ ಪ್ರವಾಸ ಹೋಗುವ ಯೋಜನೆ ಹಾಕುತ್ತೀರಿ. ಆದರೆ ನಿಮ್ಮದೇ ನಗರವನ್ನು ನೋಡಿರುವುದಿಲ್ಲ. ಆದರೆ ಕೆಲವೊಮ್ಮೆ ವಿದೇಶಿ ಪ್ರವಾಸಿಗನೊಬ್ಬ ಯಾವುದೋ ಒಂದು ಜಾಗದ ಬಗ್ಗೆ ನಿಮ್ಮೂರಲ್ಲೇ ನಿಮ್ಮನ್ನು ವಿಚಾರಿಸಿದಾಗ, ಅರೆ, ಈ ಜಾಗ ನಾನು ನೋಡೇ ಇಲ್ಲ ಎಂದುಕೊಳ್ಳುವಿರಿ. ಇಲ್ಲಿ ನಾವು ಅಂತಹ ಕೆಲವು ವಿಶೇಷ ತಾಣಗಳ ಬಗ್ಗೆ ತಿಳಿಸಿದ್ದೇವೆ.

ಮುಂಬೈ

►ಅಫ್ಘನ್ ಚರ್ಚ್

ಹಳೇ ಆಂಗ್ಲಿಕನ್ ಚರ್ಚ್ ಬ್ರಿಟಿಷರು ಕಟ್ಟಿಸಿದ್ದಾರೆ. ನೇವಿ ನಗರದ ಶಾಂತ ರಸ್ತೆಯಲ್ಲಿ ಈ ಪಾರಂಪರಿಕ ಕಟ್ಟಡವಿದೆ.

► ಗೋಸ್ಟಾನ

ಸಣ್ಣ ಕಾಫಿ ಮನೆಯನ್ನು ಬಾಂದ್ರದಲ್ಲಿ ಕಂಡು ಹಿಡಿಯುವುದು ಬಹಳ ಕಷ್ಟ. ಇದಿರುವ ಕಟ್ಟಡದ ಹಿಂದೆ ಅಡಗಿಕೊಂಡಿದೆ. ಇಲ್ಲಿ ಸಾಕು ನಾಯಿ ಇದೆ. ಸಂಗೀತ ಉಪಕರಣಗಳನ್ನು ಬಳಸಬಹುದು. ಕಾದಂಬರಿಗಳನ್ನು ಓದಬಹುದು. ಆಡಬಹುದು. ಮನೆಯಂತಹ ಭಾವ ಬರುವ ಪೀಠೋಪಕರಣಗಳೂ ಇವೆ. ಆಹಾರವೂ ಅತ್ಯುತ್ತಮವಾಗಿರುತ್ತದೆ.

► ಮಂಡಪೇಶ್ವರ ಗುಹೆಗಳು

ಪ್ರಸಿದ್ಧ ಕನಹೇರಿ ಗುಹೆಗಳಷ್ಟು ಪ್ರಸಿದ್ಧವಿಲ್ಲ. ಇವು ಬೊರಿವಿಲಿಯಲ್ಲಿ ಪಾಯ್ನಸರ್ ಪರ್ವತಗಳ ಮೇಲಿವೆ.

► ಸಿಯಾನ್ ಹಿಲಾಕ್ ಕೋಟೆ

ಈ ಪಾರಂಪರಿಕ ಕಟ್ಟಡವನ್ನು ಈಸ್ಟ್ ಇಂಡಿಯಾ ಕಂಪನಿ 1670ರಲ್ಲಿ ಕಟ್ಟಿದೆ. ಥಾಣೆಯ ಕಟ್ಟಡಗಳ ಅದ್ಭುತ ದೃಶ್ಯ ಇಲ್ಲಿ ಸಿಗುತ್ತದೆ.

ಪುಣೆ

► ಹೆನ್ರಿ ಗೌರ್ಮೆಟ್

ಪುಣೆಯ ಆಹಾರ ಕೇಂದ್ರಗಳಲ್ಲಿ ಒಂದು. ಎನ್‌ಐಬಿಎಂ ಬಳಿ ಇದೆ. ಇಲ್ಲಿನ ವಾಫಲ್ಸ್ ರುಚಿಯಾಗಿರುತ್ತವೆ.

►ಖಡ್ಕಿ ವಾರ್ ಸಿಮೆಟ್ರಿ

ಕಿರ್ಕೀ ಎಂದು ಪ್ರಸಿದ್ಧವಾಗಿರುವ ಶಾಂತವಾದ ಸಿಮೆಟರಿಯನ್ನು ಯುದ್ಧದ ಹುತಾತ್ಮರಿಗಾಗಿ ಕಟ್ಟಲಾಗಿದೆ. ಸುತ್ತ ಹಸಿರು ಇರುವ ಜಾಗಕ್ಕೆ ಭೇಟಿ ನೀಡುವುದರಿಂದ ಪ್ರಶಾಂತ ಪರಿಸರದ ಆನಂದ ಪಡೆಯಬಹುದು.

►ಡೈವ್ ಘಾಟ್ ರಸ್ತೆ

ಮಾಗರಪಟ್ಟ ನಗರದ ಹೊರಗೆ ಹೋದಾಗ ಡೈವ್ ಘಾಟ್ ರಸ್ತೆ ಸಿಗುತ್ತದೆ. ಇಲ್ಲಿ ನಿಂತರೆ ಪುಣೆ ನಗರದ ಅತ್ಯುತ್ತಮ ದೃಶ್ಯವನ್ನು ಕಾಣಬಹುದು.

ಬೆಂಗಳೂರು

►ದೊಡ್ಡ ಆಲದ ಮರ 

ಇದು ಕೆಟ್ಟೊಹಳ್ಳಿ ಗ್ರಾಮದಲ್ಲಿದೆ. 400 ವರ್ಷ ಹಳೇ ಮರ 3 ಎಕರೆಗಳಷ್ಟು ಜಾಗವನ್ನು ಹರಡಿಕೊಂಡಿದೆ. ಒಂದು ಮರದ ಬೇರುಗಳಿಂದಲೇ ಪಸರಿಸಿರುವ ಜಾಗದಲ್ಲಿ ಕಳೆದು ಹೋಗಿಬಿಡಿ.

►ಬ್ರಾಹ್ಮಣರ ಕಾಫಿ ಬಾರ್

ಬಸವನಗುಡಿಯಲ್ಲಿರುವ ಇದು ದಕ್ಷಿಣ ಭಾರತೀಯ ಹೊಟೇಲ್. ಇಲ್ಲಿನ ಉಪಹಾರ ಬಹಳ ಪ್ರಸಿದ್ಧ. ರುಚಿಕರ ಫಿಲ್ಟರ್ ಕಾಫಿ ಸಿಗುತ್ತದೆ. ಇಡ್ಲಿಗಳು ಮತ್ತಷ್ಟು ರುಚಿಕರ.

► ಮಹಾಬೋಧಿ ಸಮಾಜ

ಬೌದ್ಧಮತೀಯರು ಮತ್ತು ಇತರರೂ ಆತ್ಮಾವಲೋಕನಕ್ಕಾಗಿ ಇಲ್ಲಿಗೆ ಭೇಟಿ ಕೊಡಬಹುದು. ಮರದ ಅಡಿಯಲ್ಲಿರುವ ಬುದ್ಧನ ಪ್ರತಿಮೆ ನಿಮ್ಮಲ್ಲಿ ಧಾರ್ಮಿಕ ಭಾವನೆ ಮೂಡಿಸದೆ ಇರದು.

ದೆಹಲಿ

►ಅಗ್ರೇಸನ್ ಕಿ ಬವೋಲಿ

ಬವೋಲಿ ಎಂದರೆ ಉತ್ತಮ ಹೆಜ್ಜೆ ಹಾಕು. ಪುರಾತನ ಬವೋಲಿ ಕನ್ನಾಟ್ ಪ್ಲೇಸಲ್ಲಿ ಅಡಗಿದೆ. ರಾಜ ಉಗ್ರಸೇನನ ಸಾಂಸ್ಕೃತಿಕ ಪರಂಪರೆ ಇಲ್ಲಿದೆ.

►ಚೀಸ್ ಚಾಪ್ಲಿನ್

ಎಂದಾದರೂ ರಸ್ತೆಗಳಲ್ಲಿ ತಿರುಗಾಡಿ ಅಚಾನಕ್ ಆಗಿ ಉತ್ತಮ ಹೊಟೇಲ್ ಸಿಕ್ಕಿದೆಯೇ? ಚೀಸ್ ಚಾಪ್ಲಿನ್ ಅಂತಹ ಸ್ಥಳ. ರುಚಿಕರ ಆಹಾರ ಅಗ್ಗದಲ್ಲಿ ಸಿಗುತ್ತದೆ.

► ಮೆಹ್ರೌಲಿ

ಇಲ್ಲಿ ಬಾಲಬನ್ ಸಮಾಧಿಗೆ ಭೇಟಿ ನೀಡಬಹುದು. 13 ಅಡಿಗಳ ಮಹಾವೀರನ ಬಂಡೆಯ ಪ್ರತಿಮೆಯೂ ಇಲ್ಲಿದೆ.

ಹೈದರಾಬಾದ್

►ರಾತ್ರಿ ಸಂಭಾಷಣೆ

ಸಂಪೂರ್ಣ ಕತ್ತಲಲ್ಲಿರುವ ರೆಸ್ಟೊರೆಂಟಿಗೆ ಹೋದಾಗ ಕೈಯಲ್ಲಿರುವ ಸಾಮಾನೆಲ್ಲವನ್ನೂ ರಿಸೆಪ್ಷನಿನಲ್ಲೇ ಇಡಬೇಕು. ಒಳಗೆ ನೀವು ಕುರುಡರು. ಇಲ್ಲಿ ಕಗ್ಗತ್ತಲಲ್ಲಿ ನಿಮ್ಮ ಆಹಾರವನ್ನು ಕೇವಲ ಸ್ಪರ್ಶಿಸಿ ಅನುಭೂತಿ ಪಡೆದು ತಿನ್ನಬೇಕು. ಜೀವನದಲ್ಲಿ ಒಮ್ಮೆ ಈ ಅನುಭವ ಪಡೆಯಲೇಬೇಕು.

►ಮೊಜಂಜಾಹಿ ಮಾರುಕಟ್ಟೆ

ನಿಜವಾದ ಹೈದರಾಬಾದನ್ನು ತೋರಿಸುವ ಕಿರಿದಾದ ಗಲ್ಲಿಗಳು. ಅಸಂಖ್ಯ ಅಂಗಡಿಗಳು, ತಿನಿಸುಗಳ ಜಾಗ ಮತ್ತು ಸ್ನಾಕ್‌ಗಳನ್ನು ಇಲ್ಲಿ ನೋಡುವುದು, ವಾಸನೆ ತೆಗೆದುಕೊಳ್ಳುವುದು ಮತ್ತು ಧ್ವನಿಯನ್ನೂ ಕೇಳಬಹುದು.

►ಕೆಫೆ ನಿಲೋಫರ್

ಹೈದರಾಬಾದಿನ ಭೇಟಿ ನೀಡಲೇಬೇಕಾದ ಇರಾನಿ ಕೆಫೆ. ರುಚಿಕರ ಇರಾನಿ ಚಾಯ್ ಮತ್ತು ರುಚಿಕರ ಆಸ್ಮಾನಿ ಬಿಸ್ಕತ್ತುಗಳನ್ನು ಇಲ್ಲಿ ಸವಿಯಬಹುದು.

ಕೋಲ್ಕತ್ತಾ

►ಕಾಲೇಜು ರಸ್ತೆ

ಸ್ಥಳೀಯರಿಗೆ ಬಯೋಪಡ ಎಂದೇ ಪರಿಚಿತ ಗಲ್ಲಿಗಳು ಪುಸ್ತಕ ಪ್ರೇಮಿಗಳ ಸ್ವರ್ಗ. ಇದು ಭಾರತದ ಅತೀ ದೊಡ್ಡ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುಕಟ್ಟೆ.

►ಕುಮರ್ತುಲಿ

ದುರ್ಗಾಪೂಜೆ ಪ್ರತಿಮೆ ನಿರ್ಮಾಣದ ಹಿಂದಿನ ಶ್ರಮವನ್ನು ಇಲ್ಲಿ ನೋಡಬಹುದು. ಕಲಾವಿದರ ಬದುಕನ್ನು ಹತ್ತಿರದಿಂದ ನೋಡಬಹುದು.

►ಚೈನಾ ಟೌನ್

ಭಾರತದ ಚೈನಾ ಟೌನ್ ಇಲ್ಲಿದೆ. ಕೋಲ್ಕತ್ತಾದ ಹೊರವಲಯದಲ್ಲಿ ಈ ಸಣ್ಣ ಸಮುದಾಯ ನೆಲೆಸಿದೆ. ಇಲ್ಲಿ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ದೇಗುಲ, ಮಳಿಗೆಗಳು ಮತ್ತು ವಾಸ್ತುಶಿಲ್ಪದಲ್ಲಿ ಕಾಣಬಹುದು.

►ಮದರ್ಸ್‌ ವ್ಯಾಕ್ಸ್ ಮ್ಯೂಸಿಯಂ

ಮದರ್ ತೆರೆಸಾ ಹೆಸರಲ್ಲಿ ಇರುವ ವ್ಯಾಕ್ಸ್ ಮ್ಯೂಸಿಯಂ 2014 ನವೆಂಬರಲ್ಲಿ ಆರಂಭವಾಗಿದೆ. ಇಲ್ಲಿ 19 ಪ್ರಮುಖ ವ್ಯಕ್ತಿಗಳ ಪ್ರತಿಮೆ ಇದೆ. ಮದರ್ ತೆರೆಸಾ, ಕಪಿಲ್ ದೇವ್ ಮತ್ತು ಲತಾ ಮಂಗೇಶ್ಕರ್ ಕೂಡ ಇದ್ದಾರೆ.

►ಹೋಗ್ ಮಾರುಕಟ್ಟೆ

ಸಿರ್ಸ್‌ ಸ್ಟುವರ್ಟ್ ಹೋಗ್ ಹೆಸರಲ್ಲಿರುವ ಹೊಸ ಮಾರುಕಟ್ಟೆಯಿದು. ಲಿಂಡ್ಸೆ ರಸ್ತೆಯ ಹೃದಯಭಾಗದಲ್ಲಿ ಇದು ಇದೆ.

ಚೆನ್ನೈ

►ಕೂಟು ಪಿ ಪತರಿ

ಪಾರಂಪರಿಕ ತಮಿಳು ಮೌಲ್ಯಗಳ ಆಧುನಿಕ ರಂಗಮಂದಿರ. 31 ವರ್ಷಗಳಿಂದ ಪ್ರಾಯೋಗಿಕ ನಾಟಕಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

►ಜಾರ್ಜ್ ಟೌನ್

ಮೊದಲ ಇಂಗ್ಲಿಷ್ ನಗರವನ್ನು ಆಗಿನ ಮದ್ರಾಸಿನಲ್ಲಿ ಸ್ಥಾಪಿಸಲಾಗಿದೆ. ಜಾರ್ಜ್ ಟೌನ್ ವಸಾಹತುಶಾಹಿ ಪಟ್ಟಣವಾಗಿದೆ. ಹಳೇ ಜಗತ್ತಿನ ವೈಭವ ಮತ್ತು ಪರಂಪರೆ ಇಂದಿಗೂ ಇಲ್ಲಿ ಕಾಣಬಹುದು.

►ಹಿಗಿನ್‌ಬಾಥಂ ಪುಸ್ತಕಮಳಿಗೆ

ಮೌಂಟ್ ರಸ್ತೆಯಲ್ಲಿರುವ ಈ ಪುಸ್ತಕಮಳಿಗೆಯ ವಿಶೇಷತೆ ಎಂದರೆ ಭಾರತದ ಅತೀ ಹಳೇ ಪುಸ್ತಕ ಮಳಿಗೆ ಇದು. ಇದರ ಶಾಖೆಗಳು ದೇಶದಾದ್ಯಂತ ಇವೆ. ಚೆನ್ನೈನಲ್ಲಿರುವ ಈ ಶಾಖೆ 1844ರಲ್ಲಿ ಆರಂಭವಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X