Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ರಾತ್ರಿಯ ಸುಖ ನಿದ್ದೆಗೆ ಅತ್ಯುತ್ತಮ,...

ರಾತ್ರಿಯ ಸುಖ ನಿದ್ದೆಗೆ ಅತ್ಯುತ್ತಮ, ಕೆಟ್ಟ ಆಹಾರಗಳು

ವಾರ್ತಾಭಾರತಿವಾರ್ತಾಭಾರತಿ19 April 2016 12:49 PM IST
share
ರಾತ್ರಿಯ ಸುಖ ನಿದ್ದೆಗೆ ಅತ್ಯುತ್ತಮ, ಕೆಟ್ಟ ಆಹಾರಗಳು

ಧೀರ್ಘ ಕೆಲಸದ ನಂತರ ಉತ್ತಮ ನಿದ್ದೆಯನ್ನು ನೀವು ಆಶಿಸುವುದು ಸಾಮಾನ್ಯ. ಆದರೆ ಮಲಗುವ ಮೊದಲು ನೀವು ಸೇವಿಸಿದ ಕೊನೆಯ ಆಹಾರ ನಿದ್ದೆಯ ಮೇಲೆ ಬಹಳ ಪರಿಣಾಮ ಬೀರುತ್ತದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಹಾಗಿದ್ದರೆ ನಿಮ್ಮ ನಿದ್ದೆಗೆ ನೆರವಾಗುವ ಮತ್ತು ಕದಿಯುವುದೇನು ಎನ್ನುವುದನ್ನು ತಿಳಿದುಕೊಳ್ಳೋಣ.

ನಿದ್ದೆ ಬರಿಸುವುದು: ಹಾಲು

ಅಜ್ಜಿ ನಿಮ್ಮನ್ನು ಹಾಲು ಕುಡಿದೇ ಮಲಗಬೇಕು ಎಂದು ಒತ್ತಾಯಿಸುತ್ತಿದ್ದದ್ದು ನೆನಪಿದೆಯೇ? ಹಾಲಿನಲ್ಲಿ ಅಮಿನೋ ಆಸಿಡ್ ಟ್ರೈಪ್ಟೊಫನ್ ಇದೆ. ಅದು ಮೆದುಳಿನ ರಾಸಾಯನಿಕ ಸೆರೊಟೊನಿನ್‌ಗೆ ಮುನ್ಸೂಚಕವಾಗಿದೆ.

ನಿದ್ದೆ ಬರಿಸುವುದು: ಅಕ್ಕಿ

ತೂಕದ ವಿಷಯಕ್ಕೆ ಬಂದಾಗ ಅನ್ನ ಸೇವಿಸಬಾರದು ಎಂದು ಹಲವರು ಹೇಳುತ್ತಾರೆ. ಆದರೆ ಅನ್ನವು ನಿದ್ದೆ ಬರಲು ಉತ್ತಮ ಆಹಾರ. ಕೆಲವರು ಅನ್ನದಿಂದ ತೂಕ ಏರುವುದಿಲ್ಲ ಎಂದೂ ಹೇಳುತ್ತಾರೆ. ಅನ್ನ ಹೊಟ್ಟೆಯನ್ನು ಹಗುರಗೊಳಿಸುವ ಕಾರಣದಿಂದಲೇ ಸಣ್ಣ ಮಕ್ಕಳಿಗೆ ಬೇರೆ ಆಹಾರ ಕೊಡುವ ಮೊದಲು ಅದನ್ನು ನೀಡಲಾಗುತ್ತದೆ ಎನ್ನುವವರೂ ಇದ್ದಾರೆ.

ನಿದ್ದೆ ಓಡಿಸುವುದು: ಡಾರ್ಕ್ ಚಾಕಲೇಟು/ ಕಾಫಿ

ಡಾರ್ಕ್ ಚಾಕಲೇಟು ಆರೋಗ್ಯಕರ ಮತ್ತು ಚಾಕಲೇಟು ಪ್ರಿಯರಲ್ಲಿ ಜನಪ್ರಿಯ. ಆದರೆ ಮಲಗುವ ಮೊದಲು ಇದನ್ನು ಸೇವಿಸಬೇಡಿ. ಇವುಗಳಲ್ಲಿ ಕಾಫಿಯಷ್ಟೇ ಕೆಫೈನ್ ಇರುತ್ತದೆ. ಕಾಫಿ ಕೂಡ ಮಲಗುವ ಸಮಯದಲ್ಲಿ ತರವಲ್ಲ.

ನಿದ್ದೆ ಬರಿಸುವುದು: ಬಾಳೆಹಣ್ಣು

ಬಾಳೆಹಣ್ಣು ಸೇವಿಸಿ ಮಲಗಿದರೆ ಒತ್ತಡ ಕಡಿಮೆಯಾಗುತ್ತದೆ. ಹೌದು, ಅದರ ಪೊಟಾಶಿಯಂ ನಿಮ್ಮ ಒತ್ತಡ ಕಡಿಮೆ ಮಾಡುತ್ತದೆ. ಮೆಗ್ನೇಶಿಯಂ ಮೂಳೆಗಳನ್ನು ರಿಲ್ಯಾಕ್ಸ್ ಮಾಡುತ್ತದೆ. ಕಾರ್ಬೋಹೇಡ್ರೇಟುಗಳು ಉತ್ತಮ ನಿದ್ದೆಗೆ ಜಾರಲು ನೆರವಾಗುತ್ತವೆ.

ನಿದ್ದೆ ಓಡಿಸುವುದು: ಕೋಳಿ/ ಪನೀರ್ ಸಾಂಬಾರ್

ಕೋಳಿ ಸಾರು ತಿಂದು ಮಲಗಿದಲ್ಲಿ ನಿದ್ದೆ ಬರದು. ಕ್ಯಾಲರಿ ಇರುವ ಆಹಾರವನ್ನು ನಿದ್ದೆ ಮಾಡುವ ಮೊದಲು ಸೇವಿಸಬಾರದು. ಅವುಗಳು ನಿಮ್ಮ ನಿದ್ದೆಯನ್ನು ಕದಿಯುತ್ತವೆ.

ನಿದ್ದೆ ಬರಿಸುವುದು: ತರಕಾರಿ ಸೂಪ್

ಬಿಸಿಯಾದ ತರಕಾರಿ ಸೂಪ್ ಕುಡಿದು ಮಲಗಿದರೆ ಉತ್ತಮ ನಿದ್ದೆ ಬರುತ್ತದೆ. ಮೃದುವಾದ ತರಕಾರಿಗಳನ್ನು ಜೀರ್ಣಿಸುವುದು ಸರಳ. ಹೀಗಾಗಿ ಜೀರ್ಣಗ್ರಂಥಿಗಳಿಗೆ ರಾತ್ರಿಯಿಡೀ ಕೆಲಸವಿರುವುದಿಲ್ಲ.

ನಿದ್ದೆ ಓಡಿಸುವುದು: ಗ್ರೀನ್ ಟೀ

ಅಚ್ಚರಿಯೆ? ಆರೋಗ್ಯಮಯ ಜೀವನಕ್ಕೆ ಗ್ರೀನ್ ಟೀ ಬೇಕೆಂದು ಎಲ್ಲರಿಗೂ ಗೊತ್ತಿದೆ. ಆದರೆ ಇದನ್ನು ದಿನದಲ್ಲಿ ಕುಡಿಯಿರಿ. ಇದು ಡಿಕ್ಯಾಫಿನೆಟೆಡ್ ಅಲ್ಲದೆ ಇರುವ ಕಾರಣ ರಾತ್ರಿ ನಿದ್ದೆ ಹಾರಿ ಹೋಗಲಿದೆ.

ನಿದ್ದೆ ಬರಿಸುವುದು: ಇಡೀ ಗೋಧಿ ಧಾನ್ಯ

ನಿಮ್ಮ ಪ್ರಿಯ ಉಪಹಾರದ ಧಾನ್ಯವನ್ನು ರಾತ್ರಿ ಸೇವಿಸಲು ಆರಂಭಿಸಿ. ಇದು ಉತ್ತಮ ನಿದ್ದೆ ಬರಿಸುತ್ತದೆ. ಹಾಲಿಗೆ ಸೇರಿಸಿಕೊಂಡರೆ ಇದು ಅತ್ಯುತ್ತಮ ನಿದ್ದೆಗೆ ದಾರಿ ಮಾಡಿಕೊಡುತ್ತದೆ.

ಕೊನೆಯದಾಗಿ ನೀವು ಮಲಗುವ ಮೊದಲು ಕನಿಷ್ಠ ಒಂದು ಅಥವಾ ಎರಡು ಗಂಟೆಗಳ ಮೊದಲು ಆಹಾರ ಸೇವಿಸಬೇಕು. ಆಹಾರ ಜೀರ್ಣವಾಗಲು ಸಮಯ ಹಿಡಿಯುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X