Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಿಡಿಮದ್ದು ಪುರಾತನ ಸಂಪ್ರದಾಯವಲ್ಲ

ಸಿಡಿಮದ್ದು ಪುರಾತನ ಸಂಪ್ರದಾಯವಲ್ಲ

-ಹರೀಶ್.ಎಮ್.ಆರ್. ಉಡುಪಿ-ಹರೀಶ್.ಎಮ್.ಆರ್. ಉಡುಪಿ19 April 2016 10:58 PM IST
share
ಸಿಡಿಮದ್ದು ಪುರಾತನ ಸಂಪ್ರದಾಯವಲ್ಲ

 ಮಾನ್ಯರೆ, 

ತಮ್ಮ ದೇವಸ್ಥಾನದ ಜಾತ್ರೆಯಲ್ಲಿ ಸಿಡಿಮದ್ದು ಪ್ರದರ್ಶನ ನೂರಾರು ವರ್ಷಗಳಿಂದ ನಡೆದು ಬಂದ ಸಂಪ್ರದಾಯ. ಹಾಗಾಗಿ ಅದನ್ನು ನಿಲ್ಲಿಸುವುದು ಸಾಧ್ಯವಿಲ್ಲ ಎಂಬ ದುರಗ್ರಹದಿಂದ ಪುಟ್ಟಿಂಗಲ್ ದೇವಸ್ಥಾನದ ಆಡಳಿತ ಮಂಡಳಿ ಕೊಲ್ಲಂ ಜಿಲ್ಲಾಧಿಕಾರಿಯ ಆದೇಶ ಧಿಕ್ಕರಿಸಿತು. ಸ್ಫೋಟಕಗಳ ಇತಿಹಾಸ ನೋಡಿದರೆ ಹಿಂದೂ ಜಾತ್ರೆಯಲ್ಲಿ ಪಟಾಕಿ ಸುಡುವುದು ಹಿಂದೂ ಸಂಪ್ರದಾಯ-ಪರಂಪರೆ ಆಗಲು ಸಾಧ್ಯವೇ ಇಲ್ಲ. ಯಾಕೆಂದರೆ ಪಟಾಕಿ-ಸ್ಫೋಟಕಗಳ ಮೂಲ ಚೀನಾ ದೇಶ. ಅಲ್ಲಿಂದ ಅದು ಮಧ್ಯ ಏಶಿಯಾ ಹಾಗೂ ಯುರೋಪಿಗೆ ಹೋಗಿ ನಂತರ ಬ್ರಿಟಿಷರ ಕಾಲದಲ್ಲಿ ಅದು ಭಾರತಕ್ಕೆ ಬಂದದ್ದು, ಅಂದರೆ ಭಾರತದಲ್ಲಿ ಪಟಾಕಿಗಳು ಹೆಚ್ಚೆಂದರೆ 250 ವರ್ಷ ಹಳೆಯವು. ಮೊಗಲರು ತಂದಿದ್ದ ಸ್ಫೋಟಕಗಳು ಕೇವಲ ಯುದ್ಧದ ತೋಪುಗಳಲ್ಲಿ ಮಾತ್ರ ಬಳಕೆಯಾಗುತ್ತಿತ್ತು. ಟಿಪ್ಪು ಸುಲ್ತಾನನೂ ಅದನ್ನು ಯುದ್ಧದಲ್ಲಿ ಮಾತ್ರ ಬಳಸಿದ್ದ. ಆದರೆ ಈ ಸ್ಫೋಟಕಗಳನ್ನು ಸಣ್ಣ ಗಾತ್ರದಲ್ಲಿ ಕಾಗದದಲ್ಲಿ ಸುತ್ತಿ ಜನರ ಮನರಂಜನೆಗಾಗಿ ಸುಡುವ ವಿಧಾನ ಮೊಗಲರಿಗೆ ಅಥವಾ ಟಿಪ್ಪು ಸುಲ್ತಾನನಿಗೂ ಗೊತ್ತಿರಲಿಲ್ಲ. ಕಾಗದ ತಯಾರಿಸುವುದನ್ನೂ ನಮಗೆ ಬ್ರಿಟಿಷರು ಕಲಿಸಿದ್ದು, ಹಾಗೂ ಕಾಗದದಲ್ಲಿ ಸ್ಫೋಟಕ ಮದ್ದು ಸುತ್ತಿ ಸಣ್ಣ ಸಣ್ಣ ಪಟಾಕಿ ತಯಾರಿಸುವುದನ್ನೂ ಬ್ರಿಟಿಷರೇ ನಮಗೆ ಕಲಿಸಿದ್ದು. ಬ್ರಿಟಿಷರಿಂದಾಗಿ ಜನಸಾಮಾನ್ಯರು ಮನರಂಜನೆಗಾಗಿ ಸಣ್ಣ ಸಣ್ಣ ಪಟಾಕಿ ಸುಡುವ ಪದ್ಧತಿ ಶುರುವಾಯಿತು. ಪಟಾಕಿ ಅಥವಾ ಇತರ ಮನರಂಜಕ ಸಿಡಿಮದ್ದುಗಳನ್ನು ತಯಾರಿಸುವ ವಿಧಾನ ಹಿಂದೂಗಳಿಗೆ ಗೊತ್ತೇ ಇರದಿದ್ದಾಗ ಅದು ಹಿಂದೂಗಳ ಪುರಾತನ ಸಂಪ್ರದಾಯ ಹೇಗಾಗಬಲ್ಲದು? ಕುರುಕ್ಷೇತ್ರ ಯುದ್ಧದಲ್ಲಿ ಕ್ಷಿಪಣಿ ಮತ್ತು ಅಣುಬಾಂಬ್ ಪ್ರಯೋಗಿಸಲಾಗಿತ್ತು ಎಂಬುದೆಲ್ಲಾ ನವ-ವೈದಿಕರ ಕಲ್ಪನೆ (ಕುಜ್ನಾನ) ಅಷ್ಟೇ. ಹಾಗಾಗಿ ಪುರಾತನ ಹಿಂದೂ ಸಂಪ್ರದಾಯದ ಹೆಸರಲ್ಲಿ ಭಾರತದ ದೇವಸ್ಥಾನಗಳ ಜಾತ್ರೆಗಳಲ್ಲಿ ಪಟಾಕಿ ಸುಡುವುದಕ್ಕೆ ಅನುಮತಿ ಕೊಡದಿರುವುದೇ ಲೇಸು.

share
-ಹರೀಶ್.ಎಮ್.ಆರ್. ಉಡುಪಿ
-ಹರೀಶ್.ಎಮ್.ಆರ್. ಉಡುಪಿ
Next Story
X