ಪೇಜಾವರಶ್ರೀಯಿಂದ ದುಶ್ಚಟ ನಿವಾರಣಾ ಸಂಕಲ್ಪ ಹುಂಡಿಗೆ ಚಾಲನೆ
ಉಡುಪಿ, ಎ.20: ಪರ್ಯಾಯ ಪೇಜಾವರ ಮಠದ ವತಿಯಿಂದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆರಂಭಿಸಿರುವ ದುಶ್ಚಟ ನಿವಾರಣಾ ಸಂಕಲ್ಪ ಹುಂಡಿಗೆ ಇಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪೇಜಾವರ ಮಠಾಧೀಶ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸ್ವಾಮೀಜಿ, ಈ ಯೋಜನೆಗಾಗಿ ಪ್ರಕಟಿಸಿರುವ ಚೀಟಿಯಲ್ಲಿ ತಾವು ಬಿಡುವ ಚಟವನ್ನು ಹೆಸರಿಸಿ, ತಮ್ಮ ಹೆಸರು ವಿಳಾಸ ಬರೆದು ಸಹಿ ಹಾಕಿ ಹುಂಡಿಯಲ್ಲಿ ಹಾಕಬೇಕು. ಮುಂದೆ ಅದ ರಂತೆ ನಡೆದರೆ ಸಾಕು. ದುಶ್ಚಟ ಮುಕ್ತ ಸಮಾಜ ನಿರ್ಮಾಣದ ನಮ್ಮ ಉದ್ದೇಶ ಈಡೇರುತ್ತದೆ. ನಾಳೆಯಿಂದ ಈ ಹುಂಡಿಯನ್ನು ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ಗುಡಿಯ ಎದುರು ಇರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಗ್ರಿ ವೇದವ್ಯಾಸ ಐತಾಳ್ ಉಪಸ್ಥಿತರಿದ್ದರು. ವಾಸುದೇವ ಭಟ್ ಕಾರ್ಯಕ್ರಮ ನಿರೂಪಿಸಿದರು.
Next Story