ಇಂದು ಕೃತಿಗಳ ಬಿಡುಗಡೆ
ಮಂಗಳೂರು, ಎ.21: ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಂಗಳೂರು ಅನೇಕಾಂತ ಪ್ರಕಾಶನದ ವತಿ ಯಿಂದ ಎ.22ರಂದು ಅಪರಾಹ್ನ 2 ಗಂಟೆಗೆ ಡಾ.ಶಿವರಾಮ ಕಾರಂತ ಸಭಾಭವನದಲ್ಲಿ ವಿವಿ ಕಾಲೇಜಿನ ವಿದ್ಯಾರ್ಥಿ ಲೇಖಕರ ಕೃತಿ ಬಿಡುಗಡೆ ನಡೆಯಲಿದೆ.
ವಿಮರ್ಶಾ ಲೇಖನಗಳ ಸಂಕಲನ ‘ಹಂಗಿಲ್ಲದ ಹರಿವು’ ಮತ್ತು ಮುಹಮ್ಮದ್ ಶರೀಫ್ ಕಾಡುಮಠ ಅವರ ಕವನ ಸಂಕಲನ ‘ಕನಸಿನೂರಿನ ದಾರಿ’ ಕೃತಿ ಬಿಡುಗಡೆಗೊಳ್ಳಲಿದೆ. ಖ್ಯಾತ ಚಲನಚಿತ್ರ ನಿರ್ದೇಶಕ ಬಿ.ಎಸ್.ಲಿಂಗದೇವರು ಕೃತಿ ಬಿಡುಗಡೆಗೊಳಿಸುವರು. ಪತ್ರಕರ್ತ ಜೋಗಿ, ಗಿರೀಶ್ ರಾವ್ ಹತ್ವಾರ್ ಮತ್ತು ಪ್ರಾಧ್ಯಾಪಕ ಡಾ.ಆರ್.ನರಸಿಂಹ ಮೂರ್ತಿ ಕೃತಿಯ ಪರಿಚಯ ಮಾಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story