Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನಿರ್ಗತಿಕ ರೋಗಿಗಳ ಮಸೀಹಾ ವೈದ್ಯರು,...

ನಿರ್ಗತಿಕ ರೋಗಿಗಳ ಮಸೀಹಾ ವೈದ್ಯರು, ಸ್ವಯಂ ತಾನೆ ಚಿಕಿತ್ಸೆಗೆ ಹಣ ತುಂಬುತ್ತಿದ್ದಾರೆ!

ವಾರ್ತಾಭಾರತಿವಾರ್ತಾಭಾರತಿ22 April 2016 3:28 PM IST
share
ನಿರ್ಗತಿಕ ರೋಗಿಗಳ ಮಸೀಹಾ ವೈದ್ಯರು, ಸ್ವಯಂ ತಾನೆ ಚಿಕಿತ್ಸೆಗೆ ಹಣ ತುಂಬುತ್ತಿದ್ದಾರೆ!

ಹೊಸದಿಲ್ಲಿ, ಎಪ್ರಿಲ್ 22: ವೈದ್ಯಕೀಯ ಕಲಿತರೆ ಹೆಚ್ಚು ಹಣ ಸಂಪಾದಿಸಬಹುದು ಎಂದು ಭಾವಿಸುವವರೇ ಹೆಚ್ಚು. ಇದೇ ರೀತಿ ರವೀಂದ್ರ ಕೊಲ್ಹೆಯವರ ತಂದೆ ತಾಯಿ ಭಾವಿಸಿ ಮಗನಿಗೆ ಡಾಕ್ಟರಿಕೆ ಕಲಿಸಿರಲೂಬಹುದು. ಆದರರೆ ರವೀಂದ್ರಕೊಲ್ಹೆ ಕಾಲೇಜಿನಿಂದ ಹೊರಬಂದ ಮೇಲೆ ಚಿಕಿತ್ಸಾ ಲೋಕದ ನೈಜ ಶುಶ್ರೂಷೆಗಿಳಿದರು. ಅವರಿಗೆ ಎಲ್ಲದ್ದಕ್ಕಿಂತ ಮೊದಲು ರೋಗಿಗಳು ಮಾತ್ರ ಕಾಣಿಸುತ್ತಾರೆ. ಅವರ ಬಳಿ ರೋಗಿಗಳಲ್ಲದೆ ಬೇರೇನೂ ಇಲ್ಲ.

 ಮಹಾತ್ಮ ಗಾಂಧಿ, ವಿನೋಬಾ ಭಾವೆ ಮತ್ತು ರಸ್ಕಿನ್ ಬಾಂಡ್ ವಿಚಾರಗಳಿಂದ ಪ್ರಭಾವಿತರಾಗಿರುವ ಕೊಲ್ಹೆ ಮಾನವರಿಗಾಗಿ ಕೆಲಸ ಮಾಡಲು ನಿರ್ಧರಿಸಿದರು. ಹೆಚ್ಚು ಬಡವರು ಮತ್ತು ನಿರ್ಗತಿಕರ ಬಳಿ ಹೋಗಿ ತನ್ನ ವೈದ್ಯಕೀಯವನ್ನು ಪ್ರಾರಂಭಿಸಿದರು.

ಗುಜರಾತ್ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ಹೋಗಿ ಅವರು ಬಡ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಮಹಾರಾಷ್ಟ್ರದ ನಕ್ಸಲ್ ಪ್ರಭಾವಿತ ಗಡ್‌ಚಿರೌಲಿಯಲ್ಲಿ ಹಿಂದುಳಿದವರಿಗೆ ಚಿಕಿತ್ಸೆ ನೀಡಿದರು. ಅವರ ತಾಯಿ ಮಹಾರಾಷ್ಟ್ರದ ಮೆಲ್‌ಘಾಟ್‌ನಲ್ಲಿ ಕೆಲಸ ಮಾಡಲು ಸಲಹೆ ನೀಡಿದರು. ಇಲ್ಲಿಯೂ ಬಡವರಿದ್ದಾರೆ ಮತ್ತು ನಕ್ಸಲರ ಹಾವಳಿ ಇರಲಿಲ್ಲ.ಕೊಲ್ಹೆ ಮೆಲ್‌ಘಾಟ್‌ನಲ್ಲಿ ತನ್ನ ಮನೆ ಮಾಡಿದರು. ಅಲ್ಲಿನ ನಿರ್ಗತಿಕ ಬಡ ಉಪೇಕ್ಷಿಸಲ್ಪಟ್ಟ ಜನರಿಗೆ ಚಿಕಿತ್ಸೆ ನೀಡಿದರು.ಈವತ್ತಿಗೂ ಕೊಲ್ಹೆ ರೋಗಿಗಳಿಂದ ಎರಡು ರೂಪಾಯಿ ಫೀಸು ಪಡೆಯುತ್ತಾರೆ. ಎರಡನೆ ಸಲ ಬಂದರೆ ಒಂದೇ ರೂಪಾಯಿ ಫೀಸು!

ಕೊಲ್ಹೆ ಸಮಾಜಕ್ಕೆ ತನ್ನ ಸೇವೆಯ ಅಗತ್ಯವನ್ನು ಮನಗಂಡಿದ್ದಾರೆ. ಮೇಲ್‌ಘಾಟ್‌ನಕೊರಕು ಜನಾಂಗ ಸರಕಾರದಿಂದ ನಿರ್ಲಕ್ಷಿಸಲ್ಪಟಾಗ ಕೊಲ್ಹೆ ಸರಕಾರವನ್ನು ಕೋರ್ಟ್‌ಗೆ ಎಳೆದರು. 1973-74ರಲ್ಲಿ ಟೈಗರ್ ಪ್ರಾಜೆಕ್ಟ್ ಗಾಗಿ ಟೈಗರ್ ರಿಸರ್ವ್ ವೈಲ್ಡ್‌ಲೈಫ್ ಸೆಂಚುರಿ ಮಾಡುವ ಘೋಷಣೆ ಹೊರಬಿತ್ತು. ಕೆಲವು ವರ್ಷ ಅಲ್ಲಿ ವನ್ಯಜೀವಿ ಅಭಯಾರಣ್ಯ ಬೋರ್ಡ್ ಹಾಕಲಾಗಿತ್ತು. ಪ್ರವಾಸಿಗರೂ ಬರತೊಡಗಿದ್ದರು ಆದರೆ ಈ ಪ್ರದೇಶದ 61 ಗ್ರಾಮಗಳಲ್ಲಿ ಈಗಲೂ ಸರಿಯಾದ ರಸ್ತೆಯೂ ಇಲ್ಲ. ಕಾಡು ತುಂಬಿದ ದುರ್ಗಮ ರಸ್ತೆಯಲ್ಲಿ ಜನರು ಓಡಾಡಬೇಕಾಗಿದೆ. ಆಧುನಿಕ ಜೀವನದ ಸುಖ ಸೌಲಭ್ಯ ತುಂಬ ದೂರವಾಗಿರುವ ಇಲ್ಲಿ ವಿದ್ಯುತ್ ಕೂಡಾ ಇಲ್ಲ ಇಂತಹ ಜನರ ನಡುವೆ ಅವರು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಹಿಂದುಳಿದ ತೀರಾಬಡವ ಮತ್ತು ನಿರ್ಲಕ್ಷಿಸಲ್ಪಟ್ಟ ಜನರ ಸೇವೆ ಕೊಲ್ಹೆ ಠೊಂಕ ಕಟ್ಟಿ ನಿಂತರು. ಇಲ್ಲಿ ಮಕ್ಕಳು ಹುಟ್ಟಿದರೆ ಹುಟ್ಟಿದ ಕೂಡಲೇ ಸಾಯುತ್ತಿತು. ಪೌಷ್ಟಿಕಾಂಶಗಳ ಕೊರತೆ ಅವರ ಜೀವ ತೆಗೆಯುತ್ತಿತ್ತು. ಇಂತಹ ಜನರ ನಡುವೆ 31ವರ್ಷ ಮೊದಲು ಕೊಲ್ಹೆ ಬಂದರು. ಅವರ ಕೆಲಸದ ಪ್ರಭಾವದಿಂದಾಗಿ ಈಗ ಗ್ರಾಮದ ಜನರಲ್ಲಿ ರೋಗಿಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಜನರು ಅವರನ್ನು ಮಸೀಹಾ ಎಂದೆ ತಿಳಿದಿದ್ದಾರೆ. ರೋಗಿಗಳಲ್ಲಿ ಹಣವಿಲ್ಲದಿದ್ದರೆ ತಾನೆ ಹಣ ತೆತ್ತು ಔಷಧ ಒದಗಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X